Don't Miss!
- News ಮಠಗಳಿಗೆ ಭೇಟಿ ನೀಡಿ ಸ್ವಾಮೀಜಿಗಳ ಆಶೀರ್ವಾದ ಪಡೆದ ಡಾ. ಕೆ. ಸುಧಾಕರ್
- Lifestyle ಏಪ್ರಿಲ್ನಲ್ಲಿ 14 ದಿನ ರಜೆ, ಏಪ್ರಿಲ್ 1ಕ್ಕೆ ಬ್ಯಾಂಕ್ಗಳಿಗೆ ರಜೆ ಇರಲು ಕಾರಣವೇನು?
- Sports ರೋಹಿತ್ vs ಹಾರ್ದಿಕ್: ಸತತ ಸೋಲಿನ ನಡುವೆಯೇ ಮುಂಬೈ ಇಂಡಿಯನ್ಸ್ ಇಬ್ಭಾಗ!?
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಉಪೇಂದ್ರ 'ಮಹಾ ಕನಸಿನ' ಬಗ್ಗೆ ನಟ ಯಶ್ ಮಾಡಿದ ಕಾಮೆಂಟ್ ಇದು.!
ರಿಯಲ್ ಸ್ಟಾರ್ ಉಪೇಂದ್ರ 'ರಾಜಕೀಯ'ಕ್ಕೆ ಧುಮುಕುವ ಮನಸ್ಸು ಮಾಡಿದ್ದಾರೆ. 'ಪ್ರಜಾಪ್ರಭುತ್ವ'ವನ್ನ ಎತ್ತಿಹಿಡಿಯಲು 'ಪ್ರಜಾಕೀಯ'ದ ದಾರಿ ಅನುಸರಿಸಿರುವ ಉಪೇಂದ್ರ, ಪ್ರಜೆಗಳನ್ನ 'ಮಹಾಪ್ರಭು' ಸ್ಥಾನದಲ್ಲಿ ಕೂರಿಸಿ, 'ಪ್ರಜಾನೀತಿ' ಬಗ್ಗೆ ಮಾತನಾಡಿದ್ದಾರೆ.
ಸಮಾಜದ ವ್ಯವಸ್ಥೆಯನ್ನ ಬದಲಾಯಿಸುವ 'ಮಹಾ ಕನಸನ್ನು' ಹೊತ್ತಿರುವ ಉಪೇಂದ್ರ ರವರ ನಡೆ ಬಗ್ಗೆ ರಾಜಕೀಯ ರಂಗದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿರಬಹುದು. ಉಪ್ಪಿ ಆಯ್ದುಕೊಂಡಿರುವ ದಾರಿ 'ಮುಳ್ಳಿನ ಹಾದಿ' ಎಂದು ಹಲವರು ವ್ಯಾಖ್ಯಾನ ಮಾಡಬಹುದು. ಸೋಲು-ಗೆಲುವಿನ ಲೆಕ್ಕಾಚಾರ ಶುರುವಾಗಿರಬಹುದು. ಇದು ಸಿನಿಮಾ ಮಾಡುವಷ್ಟು ಸುಲಭ ಅಲ್ಲ ಅಂತಲೂ ಕೆಲವರು ಕಾಲೆಳೆಯಬಹುದು.
ಯಾರು ಏನೇ ಅಂದರೂ, ರಾಕಿಂಗ್ ಸ್ಟಾರ್ ಯಶ್ ಮಾತ್ರ ಉಪೇಂದ್ರ ರವರಿಗೆ ಬೆಂಬಲ ನೀಡಿದ್ದಾರೆ. ಉಪೇಂದ್ರ ರವರ ಕನಸು ನನಸಾಗಲಿ ಎಂದು ಯಶ್ ಹಾರೈಸಿದ್ದಾರೆ. ಉಪೇಂದ್ರ ರವರ ರಾಜಕೀಯ ಪ್ರವೇಶ ಹಾಗೂ ಸಮಾಜವನ್ನು ಬದಲಾಯಿಸುವ ಕನಸಿನ ಬಗ್ಗೆ ನಟ ಯಶ್ ಮಾಧ್ಯಮಗಳಲ್ಲಿ ಹೇಳಿಕೆ ನೀಡಿರುವುದು ಹೀಗೆ....
ಉಪೇಂದ್ರ ಸ್ವಲ್ಪ ಲೇಟ್ ಮಾಡಿದರು
''ಉಪೇಂದ್ರ ರವರಿಂದ ಸ್ಫೂರ್ತಿ ಪಡೆದು ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟವನು ನಾನು. ನನ್ನ ಪ್ರಕಾರ ರಾಜಕೀಯಕ್ಕೆ ಬರಲು ಉಪೇಂದ್ರ ಅವರು ಸ್ವಲ್ಪ ಲೇಟ್ ಮಾಡಿದ್ರು. ರಾಜಕೀಯಕ್ಕೆ ಬಂದು ತುಂಬಾ ಬದಲಾವಣೆ ಮಾಡಬೇಕು ಎಂದು ಬಹಳಷ್ಟು ದಿನಗಳಿಂದ ಅವರು ಕನಸು ಇಟ್ಟುಕೊಂಡಿದ್ದಾರೆ. ಅದು ಎಲ್ಲರಿಗೂ ಗೊತ್ತು'' - ಯಶ್, ನಟ
ಉಪೇಂದ್ರ ಕನಸು ನನಸಾಗಬೇಕು
''ಲೀಡರ್ ಆದವನು ವರ್ಕ್ ಮಾಡಬೇಕು. ವರ್ಕ್ ಮಾಡುವುದಕ್ಕೂ ಲೀಡರ್ ಶಿಪ್ ಕ್ವಾಲಿಟಿ ಇರಬೇಕು. 'ಗೋ' ಅನ್ನೋರು ಯಾವತ್ತೂ ಲೀಡರ್ ಆಗಲ್ಲ. 'ಲೆಟ್ಸ್ ಗೋ' ಅನ್ನೋರು ಮಾತ್ರ ಲೀಡರ್ ಆಗಲು ಸಾಧ್ಯ. ಉಪೇಂದ್ರ ಅವರಿಗೆ ತುಂಬಾ ಕನಸುಗಳಿವೆ. ಅವರ ಕನಸುಗಳು ನನಸಾಗಲು ನಾವು ಬಿಡಬೇಕು. ಬದಲಾವಣೆ ತರಲು ಎಲ್ಲರೂ ಕೈಜೋಡಿಸಬೇಕು'' - ಯಶ್, ನಟ
ಉಪ್ಪಿ ಮೇಲೆ ನಂಬಿಕೆ ಇದೆ
''ಸಿನಿಮಾ ತರಹ ಅಂದುಕೊಳ್ಳಬೇಡಿ ಇದು ಅಂತಾರೆ. ಸಿನಿಮಾಗೂ ಲೈಫ್ ಗೂ ಅಷ್ಟು ವ್ಯತ್ಯಾಸ ಏನೂ ಇಲ್ಲ. ನಮ್ಮ ಸಮಾಜದ ವ್ಯವಸ್ಥೆಯಲ್ಲಿ ಉಪೇಂದ್ರ ಬದಲಾವಣೆ ತರುತ್ತಾರೆ ಎಂಬ ನಂಬಿಕೆ ನನಗಿದೆ'' - ಯಶ್, ನಟ
ಉಪೇಂದ್ರ ಆಯ್ಕೆ ಪರ್ಫೆಕ್ಟ್
''ಪ್ರಜಾಕೀಯ' ಅಂತ ಬಹಳ ಒಳ್ಳೆಯ ಹೆಸರನ್ನೂ ಉಪೇಂದ್ರ ಕೊಟ್ಟಿದ್ದಾರೆ. ಉಪೇಂದ್ರ ಅವರು ಹೋಗುತ್ತಿರುವ ದಾರಿ ನನ್ನ ಪ್ರಕಾರ ಪರ್ಫೆಕ್ಟ್ ಆಗಿದೆ. ಅವರಿಗೆ ಒಳ್ಳೆಯದ್ದಾಗಲಿ.. ಉಪೇಂದ್ರ ಅವರಿಗೆ ನಮ್ಮ ಬೆಂಬಲ ಯಾವಾಗಲೂ ಇರುತ್ತದೆ'' - ಯಶ್, ನಟ