twitter
    For Quick Alerts
    ALLOW NOTIFICATIONS  
    For Daily Alerts

    ನಟರು ಮಾಡಿದ್ದು ತಪ್ಪು, ಸರ್ಕಾರ ಮಾಡಿದ್ದು ಸರಿಯೇ ಉಪೇಂದ್ರ ಪ್ರಶ್ನೆ

    |

    ಸಿನಿಮಾ ನಟರು ತಂಬಾಕು ಉತ್ಪನ್ನ, ಮದ್ಯ ಉತ್ಪನ್ನಗಳನ್ನು ಪ್ರಚಾರ ಮಾಡುವುದು ಸರಿಯೊ-ತಪ್ಪೊ ಎಂಬ ಬಗ್ಗೆ ದೊಡ್ಡ ಮಟ್ಟದ ಚರ್ಚೆ ಆರಂಭವಾಗಿದೆ. ನಟ ಅಕ್ಷಯ್ ಕುಮಾರ್, ಗುಟ್ಕಾ ಉತ್ಪನ್ನ ತಯಾರಿಸುವ ವಿಮಲ್ ಸಂಸ್ಥೆಯ ಪಾನ್ ಮಸಾಲಾ ಜಾಹೀರಾತಿನಲ್ಲಿ ಕಾಣೀಸಿಕೊಂಡಾಗಿನಿಂದಲೂ ಈ ಚರ್ಚೆ ತೀವ್ರತೆ ಪಡೆದುಕೊಂಡಿದೆ.

    ಕರ್ನಾಟಕದಲ್ಲಿಯೂ ಕೆಲವು ನಟರು ಮದ್ಯದ ಬ್ರ್ಯಾಂಡ್‌ಗಳ ಜಾಹೀರಾತು ಮಾಡಿದ್ದರ ಬಗ್ಗೆ, ಆನ್‌ಲೈನ್ ಪೋಕರ್, ಆನ್‌ಲೈನ್ ಜೂಜು ಜಾಹೀರಾತುಗಳಲ್ಲಿ ನಟಿಸಿದ್ದಕ್ಕೆ ಅಲ್ಲಲ್ಲಿ ಆಗಾಗ್ಗೆ ವಿರೋಧ ವ್ಯಕ್ತವಾಗಿತ್ತು. ಇದೀಗ ನಟ ಉಪೇಂದ್ರ ಚರ್ಚೆಗೆ ಇಳಿದಿದ್ದು, ನಟರು ಅಂಥಹಾ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುವುದನ್ನು ವಿರೋಧಿಸುವ ಗುಂಪಿನೆದುರು ವಾದವೊಂದನ್ನು ಇಟ್ಟಿದ್ದಾರೆ.

    ಗುಟ್ಕಾ ಜಾಹೀರಾತಿನಲ್ಲಿ ನಟಿಸಿದ್ದಕ್ಕೆ ಕ್ಷಮೆ ಕೋರಿದ ಅಕ್ಷಯ್ ಕುಮಾರ್ಗುಟ್ಕಾ ಜಾಹೀರಾತಿನಲ್ಲಿ ನಟಿಸಿದ್ದಕ್ಕೆ ಕ್ಷಮೆ ಕೋರಿದ ಅಕ್ಷಯ್ ಕುಮಾರ್

    ಈ ಬಗ್ಗೆ ಟ್ವೀಟ್ ಮಾಡಿರುವ ನಟ ಉಪೇಂದ್ರ, ''ಒಂದು ಸಿನಿಮಾದಲ್ಲಿ ಸಿಗರೇಟ್ ಸೇದೋದು ತಪ್ಪು ಕುಡಿಯೋದು ತಪ್ಪು, ಜೂಜಿಗೆ ಜಾಹಿರಾತು ನೀಡೋದು ತಪ್ಪು, ಆದರೆ ಇವುಗಳಿಂದ ಬರೋ ತೆರಿಗೆ ಹಣಕ್ಕಾಗಿ ಇದಕ್ಕೆಲ್ಲಾ ಅನುಮತಿ ಕೊಟ್ಟಿರೋ ಸರ್ಕಾರ ಸರಿ, ಶ್... ಯಾರೂ ಮಾತನಾಡಬಾರದು !

    Upendra On Actors Facing Backlash For Advertising Tobacco Products And Alcohol Products

    ನಾಯಕ ಸಂಸ್ಕ್ರತಿಯ ರಾಜಕೀಯ ಗುಂಗಿನ ಸಮಾಜದಲ್ಲಿ, ಯಾವತ್ತೂ ಅಪ್ಪ ಸರಿ, ಮಕ್ಕಳು ತಪ್ಪು'' ಎಂದು ವ್ಯಂಗ್ಯವಾಗಿ ಪೋಸ್ಟ್ ಹಾಕಿದ್ದಾರೆ.

    ಸ್ವತಃ ರಾಜಕಾರಣಿಯೂ ಆಗಿರುವ ಉಪೇಂದ್ರ ಆಗಾಗ್ಗೆ ತಮ್ಮ ಭಿನ್ನ ವಿಚಾರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ, ಸಂದರ್ಶನಗಳಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ನಾಯಕ ಕೇಂದ್ರಿತ ರಾಜಕಾರಣ ತೊಲಗಬೇಕು ಎಂದು ಈ ಹಿಂದಿನಿಂದ ಹೇಳಿಕೊಂಡು ಬಂದಿದ್ದು, ಪ್ರಜಾಪ್ರಭುತ್ವದಲ್ಲಿ ಅಕ್ಷರಷಃ ಪ್ರಜೆಗಳೇ ಪ್ರಭುಗಳಾಗಿರಬೇಕು ಎಂಬುದು ಅವರ ಆಶಯ.

    ತಂಬಾಕು ಜಾಹೀರಾತನ್ನು ನಿರಾಕರಿಸಿದ ಅಲ್ಲು ಅರ್ಜುನ್: ಜೈ ಎಂದ ಅಭಿಮಾನಿಗಳುತಂಬಾಕು ಜಾಹೀರಾತನ್ನು ನಿರಾಕರಿಸಿದ ಅಲ್ಲು ಅರ್ಜುನ್: ಜೈ ಎಂದ ಅಭಿಮಾನಿಗಳು

    ಈ ಹಿಂದೆ ಉಪೇಂದ್ರ ಮದ್ಯದ ಬ್ರ್ಯಾಂಡಿನ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರು ಆಗ ತುಸು ವಿರೋಧ ವ್ಯಕ್ತವಾಗಿತ್ತು. ದರ್ಶನ್ ಸಹ ಮದ್ಯದ ಬ್ರ್ಯಾಂಡಿನ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರು. ಬಳಿಕ ನಟ ಸುದೀಪ್ ಆನ್‌ಲೈನ್ ರಮ್ಮಿ ಅಪ್ಲಿಕೇಶನ್‌ನ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರು. ಆಗ ಹಲವರು ಸುದೀಪ್ ವಿರುದ್ಧ ಅಭಿಯಾನ ನಡೆಸಿದರು. ಆ ಬ್ರ್ಯಾಂಡ್‌ಗಳ ಪ್ರಚಾರ ಮಾಡಿದ್ದಕ್ಕೆ ವಿರೋಧ ವ್ಯಕ್ತಪಡಿಸಿದ ಜನ, ಆ ಉತ್ಪನ್ನಗಳನ್ನು ಮಾರುಕಟ್ಟೆಗೆ ತಂದ ಕಂಪೆನಿಯನ್ನಾಗಲಿ, ಅವುಗಳ ಮಾರಾಟಕ್ಕೆ ಅನುಮತಿ ಕೊಟ್ಟ ಸರ್ಕಾರವನ್ನಾಗಲಿ ವಿರೋಧಿಸಿರಲಿಲ್ಲ. ಅದೇ ವಿಷಯವನ್ನು ಉಪೇಂದ್ರ ಟ್ವೀಟ್‌ ಮೂಲಕ ಇಂದು ಹೇಳಿದ್ದಾರೆ.

    ಬಾಲಿವುಡ್ ನಟ ಅಜಯ್ ದೇವಗನ್, ತಾವು ವಿಮಲ್ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಕ್ಕೆ ವ್ಯಕ್ತವಾದ ವಿರೋಧ ಬಗ್ಗೆ ಮಾತನಾಡುತ್ತಾ, ''ನಾವು ನಟಿಸುತ್ತಿರುವುದು ಗುಟ್ಕಾ ಜಾಹೀರಾತಿನಲ್ಲಿ ಅಲ್ಲ ಬದಲಿಗೆ ಇಲಾಯ್ಚಿ ಜಾಹೀರಾತಿನಲ್ಲಿ. ಒಂದು ವೇಳೆ ಯಾವುದಾದರೂ ಉತ್ಪನ್ನದಿಂದ ಜನರಿಗೆ ತೊಂದರೆ ಆಗುತ್ತದೆ ಎಂದರೆ ಆ ಉತ್ಪವನ್ನು ತಯಾರು ಮಾಡಲು ಅನುಮತಿ ನೀಡಬಾರದು. ಅದನ್ನು ಮಾರುಕಟ್ಟೆಗೆ ಬರಲು ಬಿಡಬಾರದು. ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಬಿಟ್ಟು ನಂತರ ಅದನ್ನು ಬಳಸಬೇಡಿ ಎನ್ನುವುದು ಸರಿಯಲ್ಲ'' ಎಂದಿದ್ದಾರೆ.

    English summary
    Upendra on actors facing backlash from people for advertising tobacco products and alcohol products.
    Saturday, April 23, 2022, 9:58
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X