Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮಂಡ್ಯ ಎಲೆಕ್ಷನ್ ಬಗ್ಗೆ ಕೇಳಿದ್ದಕ್ಕೆ ಉಪೇಂದ್ರ ಹೇಳೋದೆ ಬೇರೆ
ಕರ್ನಾಟಕ ಸೇರಿದಂತೆ ಇಡೀ ದೇಶದಲ್ಲಿ ಲೋಕಸಭೆ ಚುನಾವಣೆ ನಡೆಯುತ್ತಿದೆ. ಆದ್ರೆ, ಕರ್ನಾಟಕದ ಪಾಲಿಗೆ ಮಂಡ್ಯ ಕ್ಷೇತ್ರವೇ ಅತಿ ಸೂಕ್ಷ್ಮವಾದ ಕ್ಷೇತ್ರ ಎನಿಸಿಕೊಂಡಿದೆ. ಅಷ್ಟರ ಮಟ್ಟಿಗೆ ಮಂಡ್ಯ ಅಖಾಡ ಬಿಸಿ ಮುಟ್ಟಿಸಿದೆ. ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರ್ ವಿರುದ್ಧ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಸುಮಲತಾ ಭಾರಿ ಪೈಪೋಟಿ ನೀಡುತ್ತಿದ್ದಾರೆ.
ಸುಮಲತಾಗಾಗಿ ದರ್ಶನ್, ಯಶ್, ರಾಕ್ ಲೈನ್ ವೆಂಕಟೇಶ್, ದೊಡ್ಡಣ್ಣ ಅಂತಹ ಕಲಾವಿದರು ಪ್ರಚಾರ ಮಾಡ್ತಿರೋದು ಸ್ಯಾಂಡಲ್ ವುಡ್ ಇಂಡಸ್ಟ್ರಿಗೂ ಬಿಸಿ ತಟ್ಟಿದೆ. ಹಾಗಾಗಿ, ಎಲ್ಲೇ ಹೋದ್ರು ಬಂದ್ರು ಮಂಡ್ಯ ಎಲೆಕ್ಷನ್ ಬಗ್ಗೆ ನೀವೇನು ಹೇಳ್ತೀರಾ ಎಂಬ ಪ್ರಶ್ನೆಗಳು ಸಿನಿಮಾ ನಟರಿಗೆ, ರಾಜಕೀಯ ನಾಯಕರಿಗೆ ಎದುರಾಗುತ್ತಿದೆ.
ಮೈಸೂರಿನಲ್ಲಿ ಚುನಾವಣಾ ಕಣಕ್ಕಿಳಿದ ಉಪೇಂದ್ರ ಪಕ್ಷದ ಅಭ್ಯರ್ಥಿ
ಈ ಬಗ್ಗೆ ನಟ ಉಪೇಂದ್ರ ಅವರನ್ನ ಕೇಳಿದ್ರೆ ಬೇರೇಯದ್ದೇ ಹೇಳ್ತಾರೆ. ಇಂದು ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿಗಳನ್ನ ಅಧಿಕೃತವಾಗಿ ಘೋಷಣೆ ಮಾಡಿದ ಉಪೇಂದ್ರ, ಎಲ್ಲಾ ಕ್ಷೇತ್ರಗಳಲ್ಲೂ ತಮ್ಮ ಅಭ್ಯರ್ಥಿಗಳ ಪರ ಪ್ರಚಾರ ಮಾಡ್ತೀನಿ ಎಂದರು.
'ಅರ್ಜುನ್ ರೆಡ್ಡಿ' ಅಪ್ಪನಂತಹ ಚಿತ್ರವನ್ನ ಉಪೇಂದ್ರ ಆಗಲೇ ಮಾಡಿದ್ರು: ತೆಲುಗು ನಿರ್ದೇಶಕ
ಇದೇ ವೇಳೆ ಮಂಡ್ಯ ಚುನಾವಣೆ ಬಗ್ಗೆ ಏನ್ ಹೇಳ್ತೀರಾ ಅಂದಿದ್ದಕ್ಕೆ, 'ಎಲೆಕ್ಷನ್ ಎಲ್ಲ ಕಡೆಯೂ ನಡೆಯುತ್ತಿದೆ, ಬರಿ ಮಂಡ್ಯ ಮಾತ್ರವಲ್ಲ ಬಿಡಿ' ಎಂದರು. ದರ್ಶನ್, ಯಶ್, ಸುಮಲತಾ ಪ್ರಚಾರ ಮಾಡ್ತಾರೆ, ನಿಮ್ಮ ಅಭ್ಯರ್ಥಿಯೂ ಅಲ್ಲಿದ್ದಾರೆ, ಎಂದು ಕೇಳಿದ್ದಕ್ಕೆ ''ವಿಚಾರಗಳಿಗೆ ಎಲ್ಲಿ ಬೆಲೆ ಸಿಗುತ್ತೋ ಅಲ್ಲಿ ಮಾತ್ರ ಅಭಿವೃದ್ದಿ ಸಾಧ್ಯ. ನಾವು ಮಾತಾಡಬೇಕಾಗಿರುವುದು ಬೇಕಾದಷ್ಟಿದೆ'' ಎಂದು ಪ್ರತಿಕ್ರಿಯಿಸಿದರು.
ಏಪ್ರಿಲ್ 1 ರಿಂದ ಉಪೇಂದ್ರ ಅವರು ರಾಜ್ಯಾದ್ಯಂತ ಪ್ರಚಾರ ಮಾಡಲಿದ್ದಾರೆ. ಎಲ್ಲಾ 28 ಕ್ಷೇತ್ರದಲ್ಲೂ ಯುಪಿಪಿ ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಚುನಾವಣೆಗೆ ಅಭ್ಯರ್ಥಿಗಳನ್ನ ಆಯ್ಕೆ ಮಾಡುವುದು ಮತ್ತು ಇನ್ನಿತರ ತಯಾರಿ ಮಾಡುವ ಕೆಲಸ ಹೆಚ್ಚಿದ್ದರಿಂದ ತಾವು ಸ್ಪರ್ಧೆ ಮಾಡಿಲ್ಲ ಎಂದು ಉಪೇಂದ್ರ ಸ್ಪಷ್ಟಪಡಿಸಿದ್ದಾರೆ.