ಅಭಿಮಾನಿಗಳಲ್ಲಿ ಖುಷಿ ತಂದ ಉಪ್ಪಿಯ ಈ ಒಂದು ಮಾತು
Recommended Video

ರಿಯಲ್ ಸ್ಟಾರ್ ಉಪೇಂದ್ರ ಅಭಿಮಾನಿಗಳು ಸದ್ಯ ಬಹಳ ಖುಷಿಯಲ್ಲಿ ಇದ್ದಾರೆ. ಅವರ ಈ ಸಂತಸಕ್ಕೆ ಕಾರಣವಾಗಿರುವುದು ಉಪ್ಪಿಯ ಒಂದೇ ಒಂದು ಮಾತು.
ನಿನ್ನೆ ಹೊಸ ವರ್ಷವನ್ನು ಎಲ್ಲರೂ ಸಡಗರದಿಂದ ಆಚರಣೆ ಮಾಡಿದ್ದಾರೆ. ಅದರಲ್ಲಯೂ, ಉಪೇಂದ್ರ ಅಭಿಮಾನಿಗಳಿಗೆ ಮಾತ್ರ ನಿನ್ನೆ ಡಬಲ್ ಖುಷಿ ನೀಡಿತ್ತು. ಕಾರಣ ಉಪೇಂದ್ರ ತಮ್ಮ ನಿರ್ದೇಶನದ ಸಿನಿಮಾವನ್ನು ಈ ವರ್ಷ ಮಾಡುವುದಾಗಿ ಹೇಳಿರುವುದು.
ಪತ್ರಿಕೆಯ ಸಂದರ್ಶನದಲ್ಲಿ ಮಾತನಾಡುವ ವೇಳೆ ''ನಾನು ಎಲ್ಲಿ ಹೋದರು, ನಿಮ್ಮ ನಿರ್ದೇಶನದ ಸಿನಿಮಾ ಯಾವಾಗ ಎಂದು ಎಲ್ಲರೂ ಹೇಳುತ್ತಿದ್ದಾರೆ. ಈ ವರ್ಷ ನಾನು ನನ್ನ ನಿರ್ದೇಶನ ಸಿನಿಮಾ ಮಾಡೇ ಮಾಡುತ್ತೇನೆ. ನಿರ್ದೇಶನದ ಸಿನಿಮಾ ಹಾಗೂ ಪ್ರಜಾಕೀಯ ನನ್ನ ಈ ವರ್ಷದ ಆದ್ಯತೆ'' ಎಂದು ತಿಳಿಸಿದ್ದಾರೆ.

ಉಪೇಂದ್ರ ಅವರ ಈ ಮಾತು ಕೇಳಿ ಅಭಿಮಾನಿಗಳು ಸಂಭ್ರಮ ಪಡುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಸಂತಸವನ್ನು ಹಂಚಿಕೊಳ್ಳುತ್ತಿದ್ದಾರೆ. 'ಉಪ್ಪಿ 2' ಉಪೇಂದ್ರ ನಿರ್ದೇಶನದಲ್ಲಿ ಬಂದ ಕೊನೆಯ ಸಿನಿಮಾವಾಗಿದೆ.
ಸದ್ಯ, ಉಪೇಂದ್ರ 'ಐ ಲವ್ ಯೂ' ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರದ ಟ್ರೇಲರ್ ಇತ್ತೀಚಿಗಷ್ಟೆ ಬಿಡುಗಡೆಯಾಗಿದೆ.


Click it and Unblock the Notifications











