Don't Miss!
- Finance ಬೆಂಗಳೂರು-ಮೈಸೂರು ಹೆದ್ದಾರಿ ಟೋಲ್ ಶುಲ್ಕ ಹೆಚ್ಚಳ: ಕಾರುಗಳಿಗೆ 330 ರೂ. ತಾಕೀತು?
- Automobiles ಥಾರ್ 5 ಡೋರ್ ಬಿಡುಗಡೆಗೂ ಮುನ್ನವೇ ಎದುರಾಳಿ ರೆಡಿ: ಹೊಸ ಗೂರ್ಖಾಗೆ ನಲುಗುತ್ತಾ ಮಹೀಂದ್ರಾ!
- Sports Hardik Pandya: ಸ್ವತಃ ಮುಂಬೈ ಇಂಡಿಯನ್ಸ್ ಫ್ಯಾನ್ಸ್ನಿಂದಲೂ ಹಾರ್ದಿಕ್ ಪಾಂಡ್ಯ ಟ್ರೋಲ್!
- News ಬಿಜೆಪಿ ಯುವಕರಿಗೆ ಪಕೋಡಾ ಮಾರಿ ಎಂದು ಹೇಳಿ ಅವಮಾನ ಮಾಡಿದೆ- ಡಿ ಕೆ ಶಿವಕುಮಾರ್ ಕಿಡಿ
- Technology ಅಗ್ಗದ ಬೆಲೆಯಲ್ಲಿ 5G ಫೋನ್ ಬೇಕೆ?..ಹಾಗಿದ್ರೆ ಈ ಆಫರ್ ನಿಮಗೆ ಸೂಪರ್!
- Lifestyle ಒಂದು ಸೌತೆಕಾಯಿ ಹಾಕಿ ಮಾಡಿ ಮೊಸರು ಹುಳಿ..! ಸಿಕ್ಕಾಪಟ್ಟೆ ರುಚಿ ರೆಸಿಪಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಉಪೇಂದ್ರ ಮುಂದಿನ ಚಿತ್ರದ ಬಜೆಟ್ 2 ಲಕ್ಷ 25 ಸಾವಿರ ಕೋಟಿ.!
Recommended Video
'ಉಪೇಂದ್ರ ಡೈರೆಕ್ಷನ್ ಮಾಡಿ, ನಿಮ್ಮ ಸಿನಿಮಾಗಾಗಿ ನಾವು ಕಾಯ್ತಿದ್ದೀವಿ. ನೀವು ನಿಮ್ಮ ವೈಯಕ್ತಿಕ ಆಸೆಗಳಿಗಾಗಿ ಅಭಿಮಾನಿಗಳನ್ನ ನಿರಾಸೆಗೊಳಿಸುತ್ತಿದ್ದೀರಾ' ಎಂದು ಉಪೇಂದ್ರ ಭಕ್ತರು ಬೇಸರ ವ್ಯಕ್ತಪಡಿಸಿದ್ದರು.
ಇದೆಲ್ಲವನ್ನ ಗಮನಿಸಿದ ರಿಯಲ್ ಸ್ಟಾರ್ ಉಪೇಂದ್ರ, ವಿಡಿಯೋ ಮೂಲಕ ಸ್ಪಷ್ಟನೆ ನೀಡಿದ್ದಾರೆ. ಈ ವೇಳೆ ಭಾರಿ ಕುತೂಹಲಕಾರಿ, ಸ್ಫೋಟಕ ವಿಷ್ಯವೊಂದನ್ನ ಬಹಿರಂಗಪಡಿಸಿದ್ದಾರೆ.
''ಬರಿ ರೀಮೇಕ್ ಮಾಡ್ತೀರಾ ಯಾಕೆ'' ಎಂದಿದ್ದಕ್ಕೆ ಉಪೇಂದ್ರ ಹೇಳಿದ್ದೇನು ಗೊತ್ತಾ.?
ಅದೇನಪ್ಪಾ ಅಂದ್ರೆ, ಉಪ್ಪಿ ಮುಂದಿನ ಚಿತ್ರವನ್ನ ನಿರ್ದೇಶನ ಮಾಡಲಿದ್ದು, ಅದಕ್ಕೆ ಆಗುವ ಬಜೆಟ್ ಸುಮಾರು 2 ಲಕ್ಷ 25 ಸಾವಿರ ಕೋಟಿ ಅಂತೆ. ಈ ಸಂಗತಿಯನ್ನ ಕೇಳಿದ ಅಭಿಮಾನಿಗಳೂ ನಿಜಕ್ಕೂ ಒಂದು ಕ್ಷಣ ಆಶ್ಚರ್ಯಕ್ಕೆ ಒಳಗಾಗಿದ್ದಂತು ಸುಳ್ಳಲ್ಲ. ಅಷ್ಟಕ್ಕೂ, ಉಪ್ಪಿ ಮುಂದಿನ ಸಿನಿಮಾ ಯಾವುದು.? ಇಷ್ಟು ದೊಡ್ಡ ಬಜೆಟ್ ನಲ್ಲಿ ಸಿನಿಮಾ ಬರುತ್ತಾ.? ಏನಿದು ಉಪೇಂದ್ರ ಬಜೆಟ್ ಲೆಕ್ಕಾಚಾರ ಅಂತ ಮುಂದೆ ಓದಿ....
2 ಲಕ್ಷ 25 ಸಾವಿರ ಕೋಟಿ ಸಿನಿಮಾ
ಉಪೇಂದ್ರ ಒಂದು ರಿಯಲ್ ಸಿನಿಮಾ ಮಾಡ್ತಾರಂತೆ. ಆ ಚಿತ್ರದ ಬಜೆಟ್ 2 ಲಕ್ಷ 25 ಸಾವಿರ ಕೋಟಿ. ಒಂದು ವರ್ಷದ ಪ್ರಾಜೆಕ್ಟ್ ಇದು. ಈ ಚಿತ್ರದ ನಿರ್ಮಾಪಕರು ನೀವೇ (ಪ್ರೇಕ್ಷಕರು). ಇದು ಎರಡೂವರೆ ಗಂಟೆಯ ಸಿನಿಮಾ ಅಲ್ಲ. ನಿತ್ಯ ನಿರಂತರ ಸಿನಿಮಾ ಎಂದು ಅಚ್ಚರಿ ಮೂಡಿಸಿದ್ದಾರೆ. 'ನಮ್ಮ ಕರ್ನಾಟಕವನ್ನ ಭವ್ಯ ಕರ್ನಾಟಕವನ್ನಾಗಿ ಮಾಡಬೇಕೆಂದು ನಾನು ಹಲವು ಸಿನಿಮಾ ಡೈರೆಕ್ಷನ್ ಮಾಡದೇ, ಆಕ್ಟ್ ಮಾಡದೆ ಇಲ್ಲಿವರೆಗೂ ಬಂದಿದ್ದೀನಿ'' ಎಂದು ಉಪ್ಪಿ ಹೇಳಿದ್ರು.
ಡೈರೆಕ್ಷನ್ ಮಾಡಿ ಅಂತಿದ್ದವರಿಗೆ 'ಮೆಗಾ ಬ್ರೇಕಿಂಗ್' ನೀಡಿದ ಉಪೇಂದ್ರ
ಉಪ್ಪಿ ಹೇಳಿದ್ದು ರಿಯಲ್ ಪ್ರಜಾಕೀಯ
ಇಂತಹ ರಿಯಲ್ ಚಿತ್ರವನ್ನ ನಾನು ನಿರ್ದೇಶನ ಮಾಡ್ಬೇಕಾ ಅಥವಾ ಬೇಡವಾ ಎಂದು ಈಗ ಉಪೇಂದ್ರ ಅವರು ತಮ್ಮ ಅಭಿಮಾನಿಗಳ ಮುಂದೆ ಪ್ರಶ್ನೆಯಿಟ್ಟಿದ್ದಾರೆ. ಅಂದ್ರೆ, ಉಪೇಂದ್ರ ಅವರು ಹೇಳಿದ್ದು ರೀಲ್ ಸಿನಿಮಾ ಅಲ್ಲ, ತಮ್ಮ ಪ್ರಜಾಕೀಯದ ಪರಿಕಲ್ಪನೆಯನ್ನ ಹೊಂದಿರುವ ರಿಯಲ್ ಸಿನಿಮಾವನ್ನ. ಅವರ ಹೇಳಿದ್ದ ಬಜೆಟ್, ರಾಜ್ಯ ಸರ್ಕಾರದ ವಾರ್ಷಿಕ ಬಜೆಟ್ ಇರಬಹುದು.
ಉಪೇಂದ್ರಗೆ 'ಹೀಗೆ ಮಾಡಬೇಡಿ' ಎಂದ '2.0' ನಿರ್ದೇಶಕ ಶಂಕರ್.!
ಡೈರೆಕ್ಷನ್ ಕೂಡ ಮಾಡ್ತೀನಿ
'ನನ್ನ ಕನಸು ಅಥವಾ ಅದನ್ನ ನೀವು ಹುಚ್ಚು ಎನ್ನಬಹುದು. ಇದು ನನ್ನ ರಿಯಲ್ ಸಿನಿಮಾ' ಎಂದು ಉಪೇಂದ್ರ ಹೇಳಿದ್ರು. ಈ ಸಿನಿಮಾಗಾಗಿ ನಿಮ್ಮನ್ನ ಮರೆಯಲು ಸಾಧ್ಯವಿಲ್ಲ. ನಿಮಗಾಗಿ ಚಿತ್ರ ಮಾಡ್ತೀನಿ. ನಿಮಗೆ ಇಷ್ಟವಾಗುವಂತಹ ಸ್ಕ್ರಿಪ್ಟ್ ಬೇಕು ಅಂತ ಕಾಯ್ತಿದ್ದೀನಿ. ಅದರ ಮೇಲೆ ಕೆಲಸ ನಡೆಯುತ್ತಿದೆ. ಸದ್ಯದಲ್ಲೇ ಅನೌನ್ಸ್ ಮಾಡ್ತೀನಿ' ಎಂದು ಉಪ್ಪಿ ಹೇಳಿದ್ರು.
ಕನಸಿನ 'ಪ್ರಜಾಕೀಯ'ವನ್ನೇ ಬಿಡಲು ಸಿದ್ಧವಾದ ಉಪೇಂದ್ರ.? ಕಾರಣ ಯಾರು.?
ಸಂಕ್ರಾಂತಿಗೆ ಸಿಗುತ್ತಾ ಗುಡ್ ನ್ಯೂಸ್.!
ಸದ್ಯದ ಮಾಹಿತಿ ಪ್ರಕಾರ ಉಪೇಂದ್ರ ಡೈರೆಕ್ಷನ್ ಸಿನಿಮಾ ಮುಂದಿನ ವರ್ಷ ಆರಂಭವಾಗಲಿದೆ ಎನ್ನಲಾಗುತ್ತಿದೆ. ಸಂಕ್ರಾತಿ ಹಬ್ಬಕ್ಕೆ ಉಪ್ಪಿ ನಿರ್ದೇಶನದ ಸಿನಿಮಾ ಬಗ್ಗೆ ಮಾಹಿತಿ ಸಿಗಲಿದೆ. ಮುಂದಿನ ವರ್ಷ ಚಿತ್ರೀಕರಣ ಕೂಡ ಶುರುವಾಗಲಿದೆ ಎಂಬ ಮಾತಿದೆ. ಅದಕ್ಕೆ ಇನ್ನು ಕೆಲವು ದಿನಗಳ ಕಾಲ ಕಾದುನೋಡಬೇಕು.