twitter
    For Quick Alerts
    ALLOW NOTIFICATIONS  
    For Daily Alerts

    'ಆದದ್ದೆಲ್ಲ ಒಳಿತೇ ಆಯಿತು' ಎಂದ ಉಪ್ಪಿ ಮಾತಿನ ಅರ್ಥ ಏನು?

    By Naveen
    |

    ಕರ್ನಾಟಕ ಚುನಾವಣೆ ಈಗ ಒಂದು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾಗಿಂತ ಹೆಚ್ಚು ಕುತೂಹಲ ಮೂಡಿಸಿದೆ. ಕ್ಷಣ ಕ್ಷಣ ರೋಚಕತೆಯಿಂದ ಕೂಡಿರುವ ಈ ಸಂದರ್ಭದಲ್ಲಿ ಏನಾಗುತ್ತದೆ, ಕರುನಾಡಿನಲ್ಲಿ ಯಾವ ಸರ್ಕಾರ ಬರುತ್ತದೆ ಎಂದು ಎಲ್ಲರೂ ನಿರೀಕ್ಷೆಯಿಂದ ಕಾಯುತ್ತಿದ್ದಾರೆ. ಆದರೆ ಇದೇ ವೇಳೆ ನಟ ಹಾಗೂ ಉತ್ತಮ ಪ್ರಜಾಕೀಯ ಪಕ್ಷದ ಅಧ್ಯಕ್ಷ ಉಪೇಂದ್ರ ಒಂದು ಟ್ವೀಟ್ ಮಾಡಿದ್ದಾರೆ.

    'ಆದದ್ದೆಲ್ಲ ಒಳಿತೇ ಆಯಿತು' ಎಂದು ಉಪೇಂದ್ರ ನಿನ್ನೆ (ಮೇ 15) ರಂದು ಸಂಜೆ 8 ಗಂಟೆ ಸುಮಾರಿಗೆ ಒಂದು ಟ್ವೀಟ್ ಮಾಡಿದ್ದಾರೆ. ಇದೀಗ ಈ ಟ್ವೀಟ್ ಹಿಂದಿನ ಅರ್ಥ ಏನು ಎಂಬ ಕೂತುಹಲ ಹೆಚ್ಚಾಗಿದೆ. ಒಂದು ಕಡೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಸಾಧ್ಯವಾಗದೆ ಇರುವುದನ್ನು ಕುರಿತು ಉಪೇಂದ್ರ 'ಆದದ್ದೆಲ್ಲ ಒಳಿತೇ ಆಯಿತು' ಎಂದು ಹೇಳಿದರಾ? ಅಥವಾ ಜೆಡಿಎಸ್ ಹಾಗೂ ಕಾಂಗ್ರೆಸ್ ಸಮಿಶ್ರ ಸರ್ಕಾರ ಮಾಡುವುದಕ್ಕೆ 'ಆದದ್ದೆಲ್ಲ ಒಳಿತೇ ಆಯಿತು' ಎಂದು ಉಪ್ಪಿ ಹೇಳಿದರಾ ? ಎಂಬ ಗೊಂದಲ ಸೃಷ್ಟಿಯಾಗಿದೆ.

    ಸರಕಾರ ರಚನೆಗೆ ಬಿಜೆಪಿಗೆ ಆಹ್ವಾನ ನೀಡಿದ ರಾಜ್ಯಪಾಲರು!

    ನಿನ್ನೆ ಮತ ಎಣಿಕೆ ಶುರು ಆದ ಪ್ರಾರಂಭದಲ್ಲಿ ಬಿಜಿಪಿ ಬಹುಮತ ಪಡೆಯುತ್ತದೆ ಎನ್ನುವ ಆಸೆ ಹುಟ್ಟಿಸಿತ್ತು. ಆದರೆ ಬಿಜಿಪಿ 104 ಸ್ಥಾನಕ್ಕೆ ಬಂದು ನಿಂತ ಬೆನ್ನಲೆ ಕಾಂಗ್ರೆಸ್ ತಮ್ಮ ಸಂಪೂರ್ಣ ಸಮ್ಮತಿಯನ್ನು ಜೆಡಿಎಸ್ ಪಕ್ಷಕ್ಕೆ ನೀಡಿತು. ಇನ್ನು ಇಂತಹ ಅತಂತ್ರ ಸರ್ಕಾರದ ಪರಿಸ್ಥಿತಿಯಲ್ಲಿ ಈಗ ಉಪೇಂದ್ರ ಮಾಡಿರುವ ಟ್ವೀಟ್ ಎಲ್ಲರೂ ತಲೆ ಕೆಡಸಿಕೊಳ್ಳುವಂತೆ ಮಾಡಿದೆ.

    Upendras tweet about Karnataka Election Results 2018

    ಅಂದಹಾಗೆ, ಉಪೇಂದ್ರ ಈ ಟ್ವೀಟ್ ಮಾಡುವ ಮೊದಲು ಬಿಜೆಪಿ ಪಕ್ಷಕ್ಕೆ ಶುಭ ಕೋರಿದ್ದರು. ಆದರೆ ಸಂಜೆ ಹೊತ್ತಿಗೆ ಬದಲಾದ ರಾಜಕೀಯಕ್ಕೆ ಚಿತ್ರಣವನ್ನು ಗಮನಿಸಿ ಅವರು 'ಆದದ್ದೆಲ್ಲ ಒಳಿತೇ ಆಯಿತು' ಎಂದು ಟ್ವೀಟ್ ಮಾಡಿದ್ದರು.

    English summary
    Karnataka Election Results 2018: Kannada actor and Uttama Prajakiya Party fonder Upendra's tweet about Karnataka Election Results 2018.
    Wednesday, May 16, 2018, 12:30
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X