Don't Miss!
- News Summer Tips: ಬೇಸಿಗೆಯಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ.. ಇಲ್ಲಿವೆ ಸಲಹೆಗಳು
- Sports RCB: ಯುಜ್ವೇಂದ್ರ ಚಹಾಲ್ ಮರಳಿ ಬರುವಂತೆ ಬೇಡಿಕೊಳ್ಳಿ; ಆರ್ಸಿಬಿಗೆ ಸಲಹೆ ನೀಡಿದ ರಾಬಿನ್ ಉತ್ತಪ್ಪ
- Lifestyle ಗರಿ ಗರಿಯಾದ ಕೋಡುಬಳೆ ಮನೆಯಲ್ಲೇ ಮಾಡಿ.! 4 ವಸ್ತು ಇದ್ದರೆ ಸಾಕು
- Automobiles ಮಾರುತಿ ಸ್ವಿಫ್ಟ್ ಖರೀದಿಸುತ್ತಿದ್ದೀರಾ? ಸ್ವಲ್ಪ ಕಾಯಿರಿ... ಹೊಸ ಸ್ವಿಫ್ಟ್ ಬರುತ್ತಿದೆ! 35 ಕಿ.ಮೀ ಮೈಲೇಜ್
- Finance ಝಿಲಿಂಗೋನ ಸಹ-ಸಂಸ್ಥಾಪಕ ಹಾಗೂ ಮಾಜಿ ಸಿಒಒ ವಿರುದ್ಧ ಲೈಂಗಿಕ ಕಿರುಕುಳ ಕೇಸ್ ದಾಖಲಿಸಿದ ಅಂಕಿತಿ ಬೋಸ್
- Technology ಈ ಹೊಸ 5G ಫೋನ್ ಖರೀದಿಸಿದರೆ, ವಿವೋ ಕಂಪನಿಯ ಇಯರ್ಫೋನ್ ಉಚಿತ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಶಿವರಾಜ್ ಕುಮಾರ್ ಮಾನವೀಯತೆಗೆ ಬೆನ್ನುತಟ್ಟಿದ ಸಿಎಂ
ನಿರ್ಮಾಪಕರ ಮತ್ತು ನಿರ್ದೇಶಕರ ಪಾಲಿಗೆ ಮಿಸ್ಟರ್ ಜಂಟಲ್ ಮ್ಯಾನ್ ನಟನೆಂದೇ ಹೆಸರು ಪಡೆದಿರುವ ಡಾ.ರಾಜ್ ವಂಶದ ಕುಡಿ ಶಿವರಾಜ್ ಕುಮಾರ್ ತನ್ನ 51ನೇ ಹುಟ್ಟುಹಬ್ಬವನ್ನು ಜುಲೈ 12ರಂದು ವಿಭಿನ್ನವಾಗಿ ಮತ್ತು ಸರಳವಾಗಿ ಆಚರಿಸಿದ್ದು ನಿಮಗೆ ತಿಳಿದೇ ಇದೆ.
ಅಂದು ಶಿವಣ್ಣನಿಗೆ ಹಾರ ತುರಾಯಿ, ಕೇಕ್ ತರಬೇಡಿ ಬದಲಾಗಿ ಉತ್ತಾರಖಂಡದ ಪ್ರವಾಹ ಸಂತ್ರಸ್ತರಿಗೆ ನಿಮ್ಮ ಕೈಲಾದ ದೇಣಿಗೆ ನೀಡಿ ಎಂದು ಅಖಿಲ ಕರ್ನಾಟಕ ಶಿವಣ್ಣ ಅಭಿಮಾನಿಗಳ ಸಂಘ ಕರೆ ನೀಡಿತ್ತು.
ಸಂಘದ ಕರೆಗೆ ನಿರೀಕ್ಷೆಗೂ ಮೀರಿ ಅಭಿಮಾನಿಗಳು ಸ್ಪಂಧಿಸಿದ್ದರು. ಸಾವಿರಾರು ಸಂಖ್ಯೆಯಲ್ಲಿ ಶಿವರಾಜ್ ಕುಮಾರ್ ಅಭಿಮಾನಿಗಳು ತಮ್ಮ ಮೆಚ್ಚಿನ ನಟನಿಗೆ ಕೈಕುಲುಕಿ ಹುಟ್ಟುಹಬ್ಬದ ಶುಭಾಷಯ ಕೋರಿ ದೇಣಿಗೆ ನೀಡಿದ್ದರು.
ಅಭಿಮಾನಿಗಳಿಂದ ಅಂದು ಸಂಗ್ರಹಿಸಿದ ದೇಣಿಗೆ ಹಣದ ಜೊತೆ ತಾವೂ ಉತ್ತರಾಖಂಡದ ಪ್ರವಾಹ ಸಂತ್ರಸ್ತರಿಗೆ ಶಿವಣ್ಣ ಸಹಾಯಹಸ್ತ ಚಾಚಿದ್ದಾರೆ. ಶನಿವಾರ (ಜು 20) ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾದ ಶಿವಣ್ಣ ದೇಣಿಗೆ ಮೊತ್ತವನ್ನು ಹಸ್ತಾಂತರಿಸಿದ್ದಾರೆ.
ಅಭಿಮಾನಿಗಳಿಂದ ಸಂಗ್ರಹವಾದ ಆರು ಲಕ್ಷ ರೂಪಾಯಿ ಜೊತೆಗೆ ತನ್ನ ಸ್ವಂತದ ಐದು ಲಕ್ಷ ರೂಪಾಯಿ ಸೇರಿ ಒಟ್ಟು ಬರೋಬ್ಬರಿ ಹನ್ನೊಂದು ಲಕ್ಷ ರೂಪಾಯಿ ದೇಣಿಗೆ ಹಣವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಿದ್ದಾರೆ.
ಶಿವಣ್ಣನ ಜೊತೆ ನಿರ್ಮಾಪಕ ಮತ್ತು ಅಖಿಲ ಕರ್ನಾಟಕ ಡಾ. ರಾಜ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ. ಗೋವಿಂದು ಮತ್ತು ಮತ್ತೊಬ್ಬ ನಿರ್ಮಾಪಕರಾದ ಶ್ರೀಕಾಂತ್ ಕೂಡಾ ಜೊತೆಗಿದ್ದರು.
ಶಿವಣ್ಣ ಮತ್ತು ಅವರ ಅಭಿಮಾನಿಗಳ ಮಾನವೀಯ ಕೆಲಸಕ್ಕೆ ಮುಖ್ಯಮಂತ್ರಿ ಭೇಷ್ ಶಿವಣ್ಣ, ಶಹಬ್ಬಾಸ್ ಎಂದು ಬೆನ್ನುತಟ್ಟಿ ಕಳುಹಿಸಿದ್ದಾರೆ.
ರುದ್ರಪ್ರಳಯ:ಸಂತ್ರಸ್ತರಿಗೆ ಮಾನವೀಯತೆ ಮೆರೆದ ಸೆಲೆಬ್ರಿಟಿಗಳು