Don't Miss!
- News Mallikarjun Kharge: ಕಲಬುರಗಿ ಲೋಕಸಭಾ ಕ್ಷೇತ್ರ; ಅಳಿಯನ ಕಾಳಗದಲ್ಲಿ ಮಲ್ಲಿಕಾರ್ಜುನ ಖರ್ಗೆ ಪ್ರತಿಷ್ಠೆ
- Sports T20 World Cup 2024: ವೀರೇಂದ್ರ ಸೆಹ್ವಾಗ್ ಆಯ್ಕೆಯ ಭಾರತ ತಂಡದಲ್ಲಿ ಪ್ರಮುಖ ಆಟಗಾರರಿಗೆ ಸ್ಥಾನವಿಲ್ಲ!
- Technology Realme: ರಿಯಲ್ಮಿ ನಾರ್ಜೋ 70 5G, ನಾರ್ಜೋ 70x 5G ಸ್ಮಾರ್ಟ್ಫೋನ್ ಲಾಂಚ್! ಸಖತ್ ಫೀಚರ್ಸ್... ಬೆಲೆ ಎಷ್ಟು?
- Automobiles ಮೇಡ್ ಇನ್ ಇಂಡಿಯಾ ಈ ಕಾರಿಗೆ ಜಪಾನ್ನಲ್ಲಿ ಭಾರೀ ಬೇಡಿಕೆ: ವಿಶ್ವಗುರು ಭಾರತಕ್ಕೆ ಎಲ್ಲವೂ ಸಾಧ್ಯ!
- Lifestyle ವಿಕಲಚೇತನರಿಗೆ ಸ್ಕೂಟಿ ಗಿಫ್ಟ್..! ಮನೆ ಕಟ್ಟಿಕೊಡುವ ಭರವಸೆ ನೀಡಿದ ನಟ ಲಾರೆನ್ಸ್..!
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಚಿರಂಜೀವಿ ಪುತ್ರನ ಮೇಲೆ 50 ಕೋಟಿ ವಂಚನೆ ಆರೋಪ
ಮೆಗಾಸ್ಟಾರ್ ಚಿರಂಜೀವಿ ನಟನೆಯ ಸೈರಾ ನರಸಿಂಹ ರೆಡ್ಡಿ ಅಕ್ಟೋಬರ್ 2 ರಂದು ಬಿಡುಗಡೆಗೆ ಸಜ್ಜಾಗಿದೆ. ದೊಡ್ಡ ಬಜೆಟ್ ನಲ್ಲಿ ತಯಾರಾಗುತ್ತಿರುವ ಈ ಚಿತ್ರಕ್ಕೆ ಚಿರು ಪುತ್ರ ರಾಮ್ ಚರಣ್ ನಿರ್ಮಾಪಕ ಎನ್ನುವುದು ಗೊತ್ತಿರುವ ಸಂಗತಿ.
ಇದೀಗ, ಸೈರಾ ಚಿತ್ರದ ನಿರ್ಮಾಪಕ ರಾಮ್ ಚರಣ್ ಮೇಲೆ ಉಯ್ಯಾಲವಾಡ ಕುಟುಂಬದ ಸದಸ್ಯರು 50 ಕೋಟಿ ವಂಚನೆ ಆರೋಪ ಮಾಡಿದ್ದಾರೆ. ಸೈರಾ ಸಿನಿಮಾ ಹಿನ್ನೆಲೆ ಉಯ್ಯಾಲವಾಡ ಕುಟುಂಬದ 5ನೇ ಜನರೇಷನ್ ಅವರ 23 ಕುಟುಂಬಗಳಿಗೆ ತಲಾ 2 ಕೋಟಿ ನೀಡುವುದಾಗಿ ನಿರ್ಮಾಪಕರು ತಿಳಿಸಿದ್ದರಂತೆ.
ದಾಖಲೆ ಬೆಲೆಗೆ 'ಸೈರಾ' ಚಿತ್ರದ ಸ್ಯಾಟ್ ಲೈಟ್ ಹಕ್ಕು ಮಾರಾಟ
ಆದರೆ ಇದುವರೆಗೂ ಯಾರಿಗೂ ಹಣಕೊಟ್ಟಿಲ್ಲ ಎಂದು ಉಯ್ಯಾಲವಾಡ ಕುಟುಂಬದ ಸದಸ್ಯ ದಸ್ತಗಿರಿ ರೆಡ್ಡಿ ದಂಪತಿ ಜ್ಯೂನ್ಲಿ ಹಿಲ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರಂತೆ.
ಉಯ್ಯಾಲವಾಡ ನರಸಿಂಹ ರೆಡ್ಡಿ ಅವರ ಜೀವನ ಆಧಾರಿತ ಸಿನಿಮಾ ಮಾಡುತ್ತಿದ್ದ ಕಾರಣ, ಅವರ ಕುಟುಂಬದ ಬಳಿ ಕಥೆ ಕೇಳಿಕೊಂಡು, ಅವರದ್ದೇ ಅನೇಕ ಸ್ಥಳಗಳಲ್ಲಿ ಚಿತ್ರೀಕರಣ ಕೂಡ ಮಾಡಲಾಗಿದೆಯಂತೆ. ಹಾಗಾಗಿ, ಆ ಕುಟುಂಬಗಳಿಗೆ ಪರಿಹಾರ ಧನವಾಗಿ 50 ಕೋಟಿ ನೀಡುವುದಾಗಿ ತಿಳಿಸಿದ್ದರಂತೆ. ಸಿನಿಮಾ ರಿಲೀಸ್ ದಿನ ಹತ್ತಿರವಾಗುತ್ತಿದ್ದರೂ ಹಣ ನೀಡಿಲ್ಲ ಎಂದು ದೂರಿದ್ದಾರೆ.
ಸೈರಾ ಕನ್ನಡ ಟ್ರೈಲರ್: ಮೆಗಾಸ್ಟಾರ್ ಜೊತೆ ಕಿಚ್ಚನ ದರ್ಬಾರ್
ಅಂದ್ಹಾಗೆ, ಉಯ್ಯಾಲವಾಡ ನರಸಿಂಹ ರೆಡ್ಡಿ ಆಂಧ್ರದಲ್ಲಿ ಸ್ವಾತಂತ್ರ್ಯ ರಣಕಹಳೆ ಮೊಳಗಿಸಿದ ಮೊಲದ ವೀರಾ ಸೇನಾನಿ ಎಂದು ಹೇಳಲಾಗುತ್ತೆ. ಸುರೇಂದರ್ ರೆಡ್ಡಿ ಈ ಚಿತ್ರವನ್ನ ನಿರ್ದೇಶನ ಮಾಡಿದ್ದು, ಚಿರಂಜೀವಿ, ಸುದೀಪ್, ಅಮಿತಾಭ್ ಬಚ್ಚನ್, ವಿಜಯ್ ಸೇತಪತಿ, ನಯನತಾರ, ತಮನ್ನಾ, ಜಗಪತಿ ಬಾಬು ಸೇರಿದಂತೆ ಹಲವರು ನಟಿಸಿದ್ದಾರೆ.