Don't Miss!
- Technology ಇಂದು 3D ಕರ್ವ್ಡ್ ಡಿಸ್ಪ್ಲೇ ಇರುವ ಈ ಫೋನಿನ ಸೇಲ್!..ಆಫರ್ ಬೆಲೆ ಎಷ್ಟು?
- Automobiles ಮತ್ತೆ ಅಖಾಡಕ್ಕೆ ಅಮೇರಿಕನ್ ಆಫ್ರೋಡ್ ಕಿಂಗ್: 2024 ಜೀಪ್ ರಾಂಗ್ಲರ್ ಫೇಸ್ಲಿಫ್ಟ್ ರಿವ್ಯೂ!
- Finance April 25 Gold Rate: ಇಂದಿನ ಚಿನ್ನದ ಬೆಲೆ, ಬೆಂಗಳೂರಿನಲ್ಲಿ ದರ ಎಷ್ಟಿದೆ ತಿಳಿಯಿರಿ
- Lifestyle ಬೆಳ್ಳುಳ್ಳಿ ಕಬಾಬ್ ಅಂದುಕೊಂಡ್ರಾ? ಇದು ಚಿಕನ್ ರುಚಿಯ ಹೂವಿನ ಫ್ರೈ..!
- Sports 2009ರ ಐಪಿಎಲ್ ಫೈನಲ್ನಲ್ಲಿ ಆರ್ಸಿಬಿ ಸೋಲಲು ಕಾರಣ ತಿಳಿಸಿದ ಅನಿಲ್ ಕುಂಬ್ಳೆ
- News Srivari Seva: ತಿರುಮಲ ಶ್ರೀವಾರಿಯ ಸೇವಕರಾಗಲು ಒಂದು ಅದ್ಭುತ ಅವಕಾಶ.. ಕೂಡಲೇ ಬುಕ್ ಮಾಡಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬ್ರೇಕಿಂಗ್ ನ್ಯೂಸ್: 'ಯಜಮಾನ' ಚಿತ್ರಕ್ಕೆ ವಿ.ಹರಿಕೃಷ್ಣ ನಿರ್ದೇಶಕ.!
Recommended Video
''ಯಜಮಾನ' ಚಿತ್ರಕ್ಕೆ ವಿ.ಹರಿಕೃಷ್ಣ ನಿರ್ದೇಶಕ.!''
ಹೌದು, 'ಯಜಮಾನ' ಚಿತ್ರಕ್ಕೆ ವಿ.ಹರಿಕೃಷ್ಣ ಬರೀ ಸಂಗೀತ ನಿರ್ದೇಶಕ ಮಾತ್ರ ಅಲ್ಲ. ನಿರ್ದೇಶನದ ಜವಾಬ್ದಾರಿಯನ್ನೂ ನಿಭಾಯಿಸಿದ್ದಾರೆ.
ಅರೇ... 'ಯಜಮಾನ' ಚಿತ್ರಕ್ಕೆ ಪಿ.ಕುಮಾರ್ ನಿರ್ದೇಶಕ ಅಲ್ವಾ ಅಂತ ನೀವು ಬಾಯಿ ಮೇಲೆ ಬೆರಳಿಡಬಹುದು. ಆದ್ರೆ, ಪಿ.ಕುಮಾರ್ ಗಿಂತ ಹೆಚ್ಚಾಗಿ ನಿರ್ದೇಶನದ ಕೆಲಸಗಳನ್ನು ಅಚ್ಚುಕಟ್ಟಾಗಿ ಪಾಲಿಸಿದವರು ವಿ.ಹರಿಕೃಷ್ಣ. ಹೀಗಾಗಿ 'ಯಜಮಾನ' ಚಿತ್ರದ ಕ್ರೆಡಿಟ್ ಕಾರ್ಡ್ ನಲ್ಲಿ ವಿ.ಹರಿಕೃಷ್ಣಗೆ 'ಡೈರೆಕ್ಟರ್' ಸ್ಥಾನ ನೀಡಲಾಗಿದೆ.
ದರ್ಶನ್ ನೋಡಲು 'ಯಜಮಾನ' ಸೆಟ್ ಗೆ ಬಂದ ಪತ್ನಿ
'ಯಜಮಾನ' ಸಿನಿಮಾ ಸೆಟ್ಟೇರಿದಾಗ ವಿ.ಹರಿಕೃಷ್ಣ ಅವರಿಗೆ 'ಕ್ರಿಯೇಟಿವ್ ಹೆಡ್' ಎಂಬ ಸ್ಥಾನ ನೀಡಲಾಗಿತ್ತು. ಚಿತ್ರ ಮುಗಿಯುವ ಹೊತ್ತಿಗೆ ವಿ.ಹರಿಕೃಷ್ಣ ನಿರ್ದೇಶನದ ಬಹುಪಾಲು ಕೆಲಸ ಮಾಡಿದ್ದರಿಂದ ಅವರಿಗೆ 'ನಿರ್ದೇಶಕನ' ಪೋಸ್ಟ್ ಕೊಡಲಾಗಿದೆ. ಮುಂದೆ ಓದಿರಿ...
ವಿ.ಹರಿಕೃಷ್ಣ ಕೊಡುಗೆ
'ಯಜಮಾನ' ಚಿತ್ರದ ಕಥೆ-ಚಿತ್ರಕಥೆ-ಸಂಭಾಷಣೆಯಲ್ಲಿ ವಿ.ಹರಿಕೃಷ್ಣ ಅವರ ಕೊಡುಗೆ ಜಾಸ್ತಿ ಇದೆ. ಹೀಗಾಗಿ, ನಿರ್ದೇಶಕನ ಕ್ರೆಡಿಟ್ ನ ವಿ.ಹರಿಕೃಷ್ಣ ಗೆ ಕೊಡಲು ನಿರ್ಮಾಪಕಿ ಶೈಲಜಾ ನಾಗ್ ಮನಸ್ಸು ಮಾಡಿದ್ದಾರೆ.
'ಯಜಮಾನ' ಫಸ್ಟ್ ಲುಕ್ ಸ್ವಾಗತಿಸಲು ಆರತಿ ಎತ್ತಿದ ಡಿ-ಬಾಸ್ ಭಕ್ತರು
ಮೊದಲು ವಿ.ಹರಿಕೃಷ್ಣ ಹೆಸರು
ಚಿತ್ರದ ಕ್ರೆಡಿಟ್ ಕಾರ್ಡ್ ನಲ್ಲಿ ನಿರ್ದೇಶಕರ ಪೈಕಿ ವಿ.ಹರಿಕೃಷ್ಣ ಹೆಸರು ಮೊದಲು ಬರಲಿದೆ. ಅವರ ಕೆಳಗೆ ಪಿ.ಕುಮಾರ್ ಹೆಸರು ಹಾಕಲಾಗಿದೆ. 'ಭರ್ಜರಿ' ಸಿನಿಮಾ ಖ್ಯಾತಿಯ ಚೇತನ್ ಕುಮಾರ್ 'ಯಜಮಾನ' ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ. ಸಂಭಾಷಣೆಯಲ್ಲೂ ವಿ.ಹರಿಕೃಷ್ಣ ಪಾಲು ಇರುವುದರಿಂದ ಅಲ್ಲಿಯೂ ಅವರಿಗೆ ಕ್ರೆಡಿಟ್ ಸಿಗಲಿದೆ.
'ಯಜಮಾನ'ನಿಗೆ ವಿಲನ್ ಆಗಿ ಬಂದ ಮಾಜಿ ಸೈನಿಕ
ದರ್ಶನ್-ವಿ.ಹರಿಕೃಷ್ಣ ಜೋಡಿಯ 25ನೇ ಚಿತ್ರ
ಹಾಗ್ನೋಡಿದ್ರೆ, ದರ್ಶನ್ ಹಾಗೂ ವಿ.ಹರಿಕೃಷ್ಣ ದಶಕದಿಂದ ಆತ್ಮೀಯ ಸ್ನೇಹಿತರು. ದರ್ಶನ್ ನಿರ್ಮಾಣದ ಸಿನಿಮಾದಿಂದಲೇ ವಿ.ಹರಿಕೃಷ್ಣ ಸಂಗೀತ ನಿರ್ದೇಶಕನಾಗಿ ಗುರುತಿಸಿಕೊಂಡವರು. ಇದೀಗ ದರ್ಶನ್ ನಟನೆಯ ಚಿತ್ರಕ್ಕೆ ವಿ.ಹರಿಕೃಷ್ಣ ಡೈರೆಕ್ಟರ್ ಆಗಿರುವುದು ವಿಶೇಷ. 'ಯಜಮಾನ' ದರ್ಶನ್ ಹಾಗೂ ವಿ.ಹರಿಕೃಷ್ಣ ಜೋಡಿ 25ನೇ ಸಿನಿಮಾ ಅನ್ನೋದು ಮತ್ತೊಂದು ಇಂಟ್ರೆಸ್ಟಿಂಗ್ ಅಂಶ.
''ದರ್ಶನ್ ಕೈ ಮಾಡಿಲ್ಲ, ನಾನು ಎದುರಿಗೇ ಕೂತಿದ್ದೆ'' ಅಂತಾರೆ ನಿರ್ಮಾಪಕಿ ಶೈಲಜಾ ನಾಗ್.!
ನಿರ್ಮಾಪಕಿ ಏನಂತಾರೆ.?
''ಪ್ರಚಾರಕ್ಕೋಸ್ಕರ ವಿ.ಹರಿಕೃಷ್ಣಗೆ ನಿರ್ದೇಶಕನ ಸ್ಥಾನ ನೀಡಿಲ್ಲ. ಮೊದಲನೇ ದಿನದಿಂದಲೂ ವಿ.ಹರಿಕೃಷ್ಣ ಹೆಚ್ಚು ಕೆಲಸ ಮಾಡಿದ್ದಾರೆ. ಬಿ.ಸುರೇಶ್ ಸ್ವತಃ ನಿರ್ದೇಶಕರಾಗಿ ವಿ.ಹರಿಕೃಷ್ಣ ರವರ ಕೆಲಸವನ್ನು ಮೆಚ್ಚಿಕೊಂಡಿದ್ದಾರೆ. ಅವರ ಶ್ರಮಕ್ಕೆ ನಾವು ನಿರ್ದೇಶಕನ ಕ್ರೆಡಿಟ್ ನೀಡಿದ್ದೇವೆ'' ಅಂತಾರೆ ನಿರ್ಮಾಪಕಿ ಶೈಲಜಾ ನಾಗ್.
ಪಕ್ಕಾ ಮಾಸ್ ಎಂಟರ್ ಟೈನರ್
'ಯಜಮಾನ' ಪಕ್ಕಾ ಮಾಸ್ ಎಂಟರ್ ಟೇನರ್ ಆಗಿದ್ದು, ಚಿತ್ರದಲ್ಲಿ ದರ್ಶನ್ ಜೊತೆಗೆ ರಶ್ಮಿಕಾ ಮಂದಣ್ಣ, ತಾನ್ಯ ಹೋಪ್, ಧನಂಜಯ, ಅನೂಪ್ ಸಿಂಗ್ ಠಾಕೂರ್, ಸಾಧು ಕೋಕಿಲ ರಂತಹ ದೊಡ್ಡ ತಾರಾಬಳಗ ಇದೆ. ಚಿತ್ರಕ್ಕೆ ವಿ.ಹರಿಕೃಷ್ಣ ಸಂಗೀತ ಸಂಯೋಜನೆಯನ್ನೂ ಮಾಡಿದ್ದಾರೆ.