Don't Miss!
- Sports ಟಿ20 ವಿಶ್ವಕಪ್ಗೆ ಭಾರತ ತಂಡದಲ್ಲಿ ಕೆಎಲ್ ರಾಹುಲ್ಗೆ ಸ್ಥಾನ?; ರಾಬಿನ್ ಉತ್ತಪ್ಪ ಹೇಳಿದ್ದೇನು?
- News karnataka Rain: ಬೆಂಗಳೂರಿನಲ್ಲಿ ಏ.23ರವರೆಗೆ ಮಳೆ- ಬೆಳಗಾವಿ ಮಂದಿಗೆ ಕುಂದಾ ಕೊಟ್ಟ ವರುಣ ಧಾರವಾಡ ಮಂದಿಗಿಂದು ಪೇಡಾ ಕೊಡ್ತಾನಾ?
- Technology ಆನ್ಲೈನ್ ಶಾಪಿಂಗ್ ಮಾಡಲು ಇಲ್ಲಿವೇ ನೋಡಿ ಬೆಸ್ಟ್ ವೆಬ್ಸೈಟ್ಗಳು!
- Automobiles Hyundai: ಹಳೆಯ ಹ್ಯುಂಡೈ ಕ್ರೆಟಾವನ್ನು ಮರೆತುಬಿಡಿ... ಹೊಸ ಕ್ರೆಟಾ ಈಗ ಮತ್ತಷ್ಟು ಪ್ರೀಮಿಯಂ SUV
- Finance ಸಂಸ್ಥೆಯ ಎಲ್ಲ 30,000 ಉದ್ಯೋಗಿಗಳಿಗೆ ವರ್ಕ್ ಫಮ್ ಹೋಂ ನೀಡಿದ ಟೆಕ್ ಕಂಪೆನಿ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಇಂಡಸ್ಟ್ರಿಗೆ ಬಂದ ಹರಿಕೃಷ್ಣ ಪುತ್ರ : ಕೇವಲ 45 ನಿಮಿಷದಲ್ಲಿ ಮೊದಲ ಹಾಡು ರೆಡಿ
Recommended Video
ಕನ್ನಡ ಚಿತ್ರರಂಗದ ಟಾಪ್ ಸಂಗೀತ ನಿರ್ದೇಶಕರ ಪೈಕಿ ಒಬ್ಬರು ವಿ ಹರಿಕೃಷ್ಣ. ಈಗಾಗಲೇ ನೂರಕ್ಕೂ ಹೆಚ್ಚು ಸಿನಿಮಾಗಳಿಗೆ ಸಂಗೀತ ನೀಡಿರುವ ಹರಿಕೃಷ್ಣ ಸಾಕಷ್ಟು ಸೂಪರ್ ಹಿಟ್ ಗೀತೆಗಳನ್ನು ನೀಡಿದ್ದಾರೆ.
ಎಲ್ಲರಿಗೆ ತಿಳಿಸಿರುವ ಹಾಗೆ ಹರಿಕೃಷ್ಣ ಖ್ಯಾತ ಸಂಗೀತ ನಿರ್ದೇಶಕ ಜಿ ಕೆ ವೆಂಕಟೇಶ್ ಅವರ ಕುಟುಂಬದಿಂದ ಬಂದವರು. ಹರಿಕೃಷ್ಣ ಅವರ ಇಡೀ ಕುಟುಂಬಕ್ಕೆ ಸಂಗೀತದ ನಂಟು ಇದೆ. ಅವರು ಸಂಗೀತ ನಿರ್ದೇಶಕರಾಗಿದ್ದರೆ, ಅವರ ಪತ್ನಿ ವಾಣಿ ಹರಿಕೃಷ್ಣ ಗಾಯಕಿಯಾಗಿದ್ದಾರೆ. ಇದೀಗ ಅವರ ಮಗ ಕೂಡ ಸಂಗೀತ ಲೋಕದಲ್ಲಿ ಮೊದಲ ಹೆಜ್ಜೆ ಇಟ್ಟಿದ್ದಾರೆ.
ವಿ ಹರಿಕೃಷ್ಣ ಪುತ್ರ ಆದಿ ಹರಿಕೃಷ್ಣ ಈಗ ಮೊದಲ ಬಾರಿಗೆ ಒಂದು ಸಿನಿಮಾದ ಹಾಡಿಗೆ ಮ್ಯೂಸಿಕ್ ನೀಡಿದ್ದಾರೆ. ಯಾವುದ ಸಿನಿಮಾ ಎಂಬ ವಿವರ ಮುಂದಿದೆ ಓದಿ...
'ಕಿಸ್' ಸಿನಿಮಾ ಸಂಗೀತ
ಹರಿಕೃಷ್ಣ ಪುತ್ರ ಆದಿ ಈಗ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಎ ಪಿ ಅರ್ಜುನ್ ನಿರ್ದೇಶನದ 'ಕಿಸ್' ಸಿನಿಮಾದ ಒಂದು ಹಾಡಿಗೆ ಆದಿ ಸಂಗೀತ ನೀಡಿದ್ದಾರೆ. ''ನೀನೇ ಮೊದಲು ನೀನೇ ಕೊನೆ..'' ಎಂಬ ಹಾಡಿಗೆ ಆದಿ ಮ್ಯೂಸಿಕ್ ನೀಡಿದ್ದಾರೆ. ಈ ಹಾಡಿಗೆ ನಿರ್ದೇಶಕ ಎ ಪಿ ಅರ್ಜುನ್ ಸಾಹಿತ್ಯ ಬರೆದಿದ್ದಾರೆ.
ಯಶ್ ಬಿಡುಗಡೆ
ಆದಿ ಹರಿಕೃಷ್ಣ ಮ್ಯೂಸಿಕ್ ನೀಡಿರುವ ಹಾಡನ್ನು ನಟ ಯಶ್ ಬಿಡುಗಡೆ ಮಾಡಲಿದ್ದಾರೆ. ಇಂದು ಸಂಜೆ 5 ಗಂಟೆಗೆ ಡೀ ಬೀಟ್ಸ್ ಯೂ ಟ್ಯೂಬ್ ಚಾನಲ್ ನಲ್ಲಿ ಹಾಡು ರಿಲೀಸ್ ಆಗಲಿದೆ. ಈ ಹಾಡಿಗೆ ಶ್ರೇಯಾ ಘೋಷಲ್ ಧ್ವನಿ ನೀಡಿದ್ದಾರೆ. ಚಿತ್ರರಂಗಕ್ಕೆ ಕಾಲಿಟ್ಟ ಆದಿಗೆ ಶ್ರೇಯಾ ಶುಭಾಶಯ ತಿಳಿಸಿದ್ದಾರೆ.
45 ನಿಮಿಷದಲ್ಲಿ ಹಾಡು ಸಿದ್ಧ
ಹರಿಕೃಷ್ಣ 'ಯಜಮಾನ' ಸಿನಿಮಾದ ನಿರ್ದೇಶನ ಮಾಡುತ್ತಿದ್ದಾರೆ. ಆ ಚಿತ್ರದ ಕೆಲಸದಲ್ಲಿ ಅವರು ಬ್ಯುಸಿ ಇದ್ದು, ಅವರ ಪುತ್ರ ಆದಿಗೆ ನಿರ್ದೇಶಕ ಅರ್ಜುನ್ ಮ್ಯೂಸಿಕ್ ಮಾಡಲು ಹೇಳಿದ್ದರು. ಆದಿ ಪ್ರತಿಭೆಯನ್ನು ಕಂಡಿದ್ದ ಅರ್ಜುನ್ ತಮ್ಮ ಸಾಹಿತ್ಯಕ್ಕೆ ಟ್ಯೂನ್ ಹಾಕಲು ಹೇಳಿದರು. ಕೇವಲ 45 ನಿಮಿಷದಲ್ಲಿ ಈ ಹಾಡು ರೆಡಿಯಾಯ್ತು.
'ಭರ್ಜರಿ' ಹಾಡಿನಲ್ಲಿ ಕಂಡಿದ್ದ ಆದಿ
ಧ್ರುವ ಸರ್ಜಾ ನಟನೆಯ 'ಭರ್ಜರಿ' ಸಿನಿಮಾದ ಹಾಡಿಗೆ ಹರಿಕೃಷ್ಣ ಸಂಗೀತ ನೀಡಿದ್ದರು. ಈ ಚಿತ್ರದ ಟೈಟಲ್ ಸಾಂಗ್ ನಲ್ಲಿ ಹರಿಕೃಷ್ಣ ಪುತ್ರ ಆದಿ ಹರಿಕೃಷ್ಣ ಕಾಣಿಸಿಕೊಂಡಿದ್ದರು. ಹಾಡಿನ ಪ್ರಾರಂಭದಲ್ಲಿ ಆದಿ ಹೀಗೆ ಬಂದು ಹಾಗೆ ಹೋಗಿದ್ದರು. ಈ ಹಾಡಿನಲ್ಲಿ 'ಡಿ ಬೀಟ್ಸ್' ಎಂಬ ಸಾಹಿತ್ಯ ಇದ್ದು, ಅದನ್ನು ಹರಿಕೃಷ್ಣ ಅವರ ಮಗನಿಂದ ಹೇಳಿಸಲಾಗಿತ್ತು.