Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಫಿಲ್ಮ್ ಫೇರ್ ಪಡೆದ ಬಳಿಕ ವಿ.ನಾಗೇಂದ್ರ ಪ್ರಸಾದ್ ಬರೆದ ಪ್ರೀತಿಯ ಓಲೆ
2018ನೇ ಸಾಲಿನ ಸೌತ್ ಫಿಲ್ಮ್ ಫೇರ್ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ನಿನ್ನೆ ನಡೆದಿದೆ. ಅತ್ಯುತ್ತಮ ಗೀತರಚನೆಕಾರ ವಿಭಾಗದಲ್ಲಿ ವಿ.ನಾಗೇಂದ್ರ ಪ್ರಸಾದ್ ಪ್ರಶಸ್ತಿ ಪಡೆದಿದ್ದಾರೆ. ಕನ್ನಡಿಗರು ಅಪ್ಪಿಕೊಂಡ 'ಅಪ್ಪ ಐ ಲವ್ ಯೂ...' ಹಾಡಿಗೆ ಪ್ರಶಸ್ತಿ ಕೂಡ ಸಿಕ್ಕಿದೆ.
ಪ್ರಶಸ್ತಿ ಪಡೆದಿರುವ ವಿ,ನಾಗೇಂದ್ರ ಪ್ರಸಾದ್ ತಮ್ಮ ಮುದ್ದಾದ ಸಾಲುಗಳ ಮೂಲಕ ಈ ಹಾಡಿನ ಯಶಸ್ಸಿಗೆ ಕಾರಣರಾದ ಎಲ್ಲರಿಗೆ ಧನ್ಯವಾದ ತಿಳಿಸಿದ್ದಾರೆ. ಅಂದಹಾಗೆ, ಕವಿರತ್ನ ನಾಗೇಂದ್ರ ಪ್ರಸಾದ್ ಬರೆದಿರುವ ಪ್ರೀತಿಯ ಓಲೆ ಹೀಗಿದೆ ಓದಿ...
ಸೌತ್ ಫಿಲ್ಮ್ ಫೇರ್ ಪ್ರಶಸ್ತಿ ಪಡೆದ ಪುನೀತ್, ಶೃತಿ ಹರಿಹರನ್
ಬರೆಯುತ್ತಿದ್ದೇನೆ..
ಬರೆಯುತ್ತಲೇ ಇದ್ದೇನೆ...
ಬರೆಯುತ್ತಲೇ ಇರುತ್ತೇನೆ.....
ಕೇಳುಗ ದೊರೆಗಳು
ನೋಡುಗ ಪ್ರಭುಗಳು
ಇಷ್ಟವಾದ ಚಿತ್ರಗೀತೆಯನ್ನು
ಹೃದಯ ತುಂಬಿ ಕೊಂಡಾಡುತ್ತೀರಿ.
ಅದಕ್ಕೇ ಚಿತ್ರಗೀತೆಗಳು ಅಜರಾಮರ.
ಇತ್ತೀಚೆಗಷ್ಟೇ ಕೋಟ್ಯಾಂತರ ಹೃದಯಗಳನ್ನು ಆರ್ದ್ರಗೊಳಿಸಿದ ಹಾಡು...
ಅಪ್ಪಾ...ಐ ಲವ್ ಯೂ..
ಇದೋ...ಇದೀಗ ಆ ರಚನೆಗಾಗಿ ನನಗೆ "ಫಿಲಂ ಫೇರ್" ಪ್ರಶಸ್ತಿ ಸಿಕ್ಕಿದೆ.
ಇದಕ್ಕೆ ಕಾರಣ ಕರ್ತರಾದ
'ದ್ವಾರಕೀಶ್ ಚಿತ್ರ'
ಯೋಗೀಶ್ ದ್ವಾರಕೀಶ್
ತರುಣ್ ಸುಧೀರ್
ಅರ್ಜುನ್ ಜನ್ಯ
ಅನುರಾಧ ಭಟ್
ಹಾಗೂ ತೆರೆಯಲ್ಲಿ ಹಾಡನ್ನು ಅರ್ಥಪೂರ್ಣ ವಾಗಿಸಿದ 4 ಮಂದಿ ಛಾಯಾಗ್ರಾಹಕರಿಗೂ..
ದಿವಂಗತ ಕಾಶೀನಾಥ್ ಅವರಿಗೂ
ಮಾನ್ವಿತಾ ಹರೀಶ್ ಅವರಿಗೂ
'ಚೌಕ 'ಚಿತ್ರದ ಪ್ರತಿ ಕಲಾವಿದರಿಗೂ.. ತಂತ್ರಜ್ಞರಿಗೂ..
ಎಲ್ಲಕ್ಕಿಂತ ಮುಖ್ಯವಾಗಿ ಹಾಡನ್ನು ಅಮರ ಗೊಳಿಸಿದ ನಿಮ್ಮಂತ ಅಸಂಖ್ಯಾತ ಪ್ರಿಯರಿಗೂ ನನ್ನ ಅನಂತ ಧನ್ಯವಾದಗಳು .
ನಿಮ್ಮ ಪ್ರೀತಿ-ಆಶೀರ್ವಾದ ಇದ್ದರೆ ಸಾಕು
ಕರಿಯಾ.. i love you
ಅಪ್ಪಾ.. i love you
ಅಮ್ಮಾ..i love you...
ಹೀಗೆ ಎಲ್ಲರನ್ನೂ ಪ್ರೀತಿಸುತ್ತಾ ಬದುಕಿ ಬಿಡುತ್ತೇನೆ...
ಪ್ರಿಯ ಕೇಳುಗ ಅನ್ನದಾತನೇ
I LOVE YOU.