Don't Miss!
- Lifestyle ಯಾವ ದಿಕ್ಕಿಗೆ ತಲೆ ಇಟ್ಟು ಮಲಗಬಾರದು..? ಹಿರಿಯರು ಈ ರೀತಿ ಹೇಳೋದೇಕೆ.?
- Sports RCB vs KKR: ಗೇಮ್ ಚೇಂಜರ್ ಆಗಬಹುದು ಈ ಪ್ಲೇಯರ್ಸ್; ಈ ಆಟಗಾರರ ಮೇಲೆ ಕಣ್ಣು
- News Acid Attack: ಆಸ್ತಿ ವಿವಾದ: ಮಗನ ಮೇಲೆ 'ಆಸಿಡ್' ಎರಚಿದ ತಂದೆ
- Automobiles ಜೀವದ ಗೆಳೆಯನಿಗೆ ಸರ್ಪ್ರೈಸ್ ಆಗಿ 'ಬೈಕ್' ಉಡುಗೊರೆ ನೀಡಿದ ವಧು.. ಆತನ ಸಂತೋಷಕ್ಕೆ ಪಾರವೇ ಇರಲಿಲ್ಲ!
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Technology ಬಜೆಟ್ ದರದಲ್ಲಿ ಬೆಸ್ಟ್ 5G ಫೋನ್ ಬೇಕಿದ್ರೆ, ಈ ಲಿಸ್ಟ್ ಒಮ್ಮೆ ಗಮನಿಸಿ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರವಿಚಂದ್ರನ್ ಸಿನಿಮಾ ಡೈಲಾಗ್ ಸೃಷ್ಡಿಸಿದೆ ಹೊಸ ವಿವಾದ
Recommended Video
ವಿವಾದಗಳನ್ನ ಅಂಟಿಸಿಕೊಳ್ಳದೆ ತಾನಾಯ್ತು ತಮ್ಮ ಸಿನಿಮಾ ಆಯ್ತು ಎಂದು ಸೈಲೆಂಟ್ ಆಗಿರುವ ನಟ ನಿರ್ದೇಶಕ ವಿ ರವಿಚಂದ್ರನ್. ಆದರೆ ರವಿಚಂದ್ರನ್ ಸಿನಿಮಾದಲ್ಲಿ ಹೇಳಿರುವ ಒಂದು ಡೈಲಾಗ್ ಹೊಸ ವಿವಾದ ಸೃಷ್ಠಿ ಮಾಡಿದೆ. ರವಿಚಂದ್ರನ್ ಹಾಗೂ ಚಿರಂಜೀವ ಸರ್ಜಾ ಅಭಿನಯದ ಹೊಸ ಚಿತ್ರ ಸೀಜರ್ ನಲ್ಲಿ ರವಿಮಾಮ ಹೇಳಿರುವ ಡೈಲಾಗ್ ಕೇಳಿರುವ ಮುಸ್ಲಿಂಮರು ಚಿತ್ರತಂಡದ ವಿರುದ್ದ ಕೋಪಗೊಂಡಿದ್ದಾರೆ.
ಸೀಜರ್ ಸಿನಿಮಾದ ಟ್ರೇಲರ್ ಜನವರಿ ತಿಂಗಳಲ್ಲಿ ಬಿಡುಗಡೆ ಆಗಿತ್ತು. ಟ್ರೇಲರ್ ನಲ್ಲಿ ರವಿಚಂದ್ರನ್ "ಹಸುವಿನ ಕುತ್ತಿಗೆ ಕಡಿಯುವುದು ಒಂದೇ, ತಾಯಿಯ ತಲೆ ಹಿಡಿಯುವುದು ಒಂದೇ" ಎನ್ನುವ ಡೈಲಾಗ್ ಹೇಳಿದ್ದಾರೆ. ಈ ಡೈಲಾಗ್ ಮುಸಲ್ಮಾನರ ಕೋಪಕ್ಕೆ ಕಾರಣವಾಗಿದೆ.
RJ Rapid ರಶ್ಮಿ ಶೋಗೆ ಯಾರೂ ಹೋಗಬೇಡಿ, ಎಲ್ಲರೂ ಬಹಿಷ್ಕಾರ ಹಾಕಿ.!
ಟ್ರೇಲರ್ ನಲ್ಲಿ ಸಂಭಾಷಣೆ ನೋಡಿರುವ ಮುಸ್ಲಿಂ ಸಂಘಟನೆಯಾದ Sdpi ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀರ್ ಈ ಬಗ್ಗೆ ವಾಣಿಜ್ಯ ಮಂಡಳಿಯಲ್ಲಿ ಮನವಿ ಮಾಡಲು ಮುಂದಾಗಿದ್ದಾರೆ. ಸಿನಿಮಾದಲ್ಲಿ ಬಳಸಿರುವ ಸಂಭಾಷಣೆ ನಮ್ಮ ಸಮುದಾಯಕ್ಕೆ ನೋವು ಉಂಟು ಮಾಡುತ್ತದೆ. ಆದ್ದರಿಂದ ದಯಮಾಡಿ ಆ ಡೈಲಾಗ್ ತೆಗೆದು ಹಾಕಿ ಎಂದು ಕೇಳಿಕೊಳ್ಳಲಿದ್ದಾರೆ.
ಸೀಜರ್ ಸಿನಿಮಾದಲ್ಲಿ ಚಿರಂಜೀವಿ ಸರ್ಜಾ ಹಾಗೂ ರವಿಚಂದ್ರ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ್ದು ಪಾರೂಲ್ ಯಾದವ್ ನಾಯಕಿಯಾಗಿ ಅಭಿನಯಿಸಿದ್ದಾರೆ. ವಿನಯ್ ಕೃಷ್ಣ ಚಿತ್ರವನ್ನ ನಿರ್ದೇಶನ ಮಾಡಿದ್ದಾರೆ.