Don't Miss!
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಇದು ಇಬ್ಬರೇ ನಟಿಸಿ, ಚಿತ್ರೀಕರಿಸಿದ ಸಿನಿಮಾ!!
ಸಿನಿಮಾ ಅಂದ್ರೆ ಹಲವು ಕಲಾವಿದರು ಬೇಕು. ಕ್ಯಾಮೆರಾ ಮ್ಯಾನ್, ನಿರ್ದೇಶಕ, ನಟ, ನಟಿ, ಚಿತ್ರೀಕರಣಕ್ಕೆ ಹಲವು ಸಹಾಯಕರು ಬೇಕು ಅಲ್ವಾ? ಆದ್ರೆ ಇಬ್ಬರೇ ನಟಿಸಿ, ಅದೇ ಇಬ್ಬರು ಛಾಯಾಗ್ರಾಹಕರಾಗಿ ಒಂದು ಸಿನಿಮಾ ನಿರ್ಮಾಣ ಮಾಡಿದ್ದಾರೆ ಎಂದರೆ ನಂಬ್ತಿರಾ?... ಖಂಡಿತ ನಂಬಲೇ ಬೇಕು.
ಮೈಸೂರಿನ ಕುವೆಂಪು ನಗರದ ನಾಗರಾಜ್ ಹಾಗು ಕೃಷ್ಣನಾಗ್ ಇಬ್ಬರೇ 'ವೀ2' ಎಂಬ ಸಿನಿಮಾವನ್ನು ಸದ್ದಿಲ್ಲದೇ ನಿರ್ಮಿಸುತ್ತಿದ್ದಾರೆ. ನಾಗರಾಜ್ ಆಲಿಯಾಸ್ ಭಯಾನಕ ನಾಗ ರವರು ನಿರ್ಮಿಸಿ, ನಿರ್ದೇಶಿಸಿ, ನಟಿಸಿರುವ ಈ ಚಿತ್ರದಲ್ಲಿ ಇಬ್ಬರೇ ಕಲಾವಿದರು. ಅವರೇ ಕ್ಯಾಮೆರಾ ಮ್ಯಾನ್ ಗಳು ಸಹ.
'ವೀ2' ಸಿನಿಮಾ ಚಿತ್ರೀಕರಣವನ್ನು ನಾಗರಾಜ್ ಮತ್ತು ಅವರ ಸ್ನೇಹಿತ ಸೇರಿ ಇಬ್ಬರೇ ನಿರ್ಮಿಸುತ್ತಿದ್ದು, ಸಹಾಯಕ್ಕಾಗಿ ವಿಕ್ರಮ್ ಎಂಬ ಯುವಕನನ್ನು ಬಳಸಿಕೊಳ್ಳಲಾಗಿದೆ. 2 ಗಂಟೆ 15 ನಿಮಿಷ ಇರುವ ಚಿತ್ರ ಈಗಾಗಲೇ ಶೇ.80 ರಷ್ಟು ಪೂರ್ಣಗೊಂಡಿದ್ದು, ಕ್ಲೈಮ್ಯಾಕ್ಸ್ ಮಾತ್ರ ಬಾಕಿ ಇದೆಯಂತೆ.
30 ಲಕ್ಷ ವೆಚ್ಚದಲ್ಲಿ ಚಿತ್ರ ನಿರ್ಮಾಣ
ಮೈಸೂರು, ಚಾಮುಂಡಿ ಬೆಟ್ಟ, ಶ್ರೀರಂಗಪಟ್ಟಣ, ಕರಿಘಟ್ಟ ಸೇರಿದಂತೆ ಮೈಸೂರಿನ ಸುತ್ತಮುತ್ತಲ ಪ್ರದೇಶಗಳಲ್ಲಿ 'ವೀ2' ಚಿತ್ರೀಕರಣ ಮಾಡಲಾಗಿದೆ. ಅಂದಹಾಗೆ ಒಬ್ಬರು ಅಭಿನಯಿಸುವಾಗ ಮೊತ್ತೊಬ್ಬ ಕಲಾವಿದ ಕ್ಯಾಮೆರಾ ಹ್ಯಾಂಡಲ್ ಮಾಡಿ, ಮತ್ತೋರ್ವ ನಟನೆ ಮಾಡುವಾಗ ಇನ್ನೊಬ್ಬ ಕ್ಯಾಮೆರಾ ಹ್ಯಾಂಡಲ್ ಮಾಡಿ ಚಿತ್ರ ನಿರ್ಮಿಸಲಾಗುತ್ತಿದೆ. ಹಣದ ಹಿಂದೆ ಬಿದ್ದು ಕೆಲವರು ಯಾವ ರೀತಿ ತಮ್ಮ ಜೀವನವನ್ನೇ ಕಳೆದುಕೊಳ್ಳುತ್ತಾರೆ, ಕಷ್ಟ ಹಾಗೂ ಮಾನಸಿಕ ಒತ್ತಡಕ್ಕೆ ಸಿಲುಕಿ, ವಾಮ ಮಾರ್ಗದ ಮೂಲಕ ಹಣ ಸಂಪಾದಿಸಲು ಹೋಗಿ ಏನೆಲ್ಲಾ ಕಷ್ಟ ಅನುಭವಿಸುತ್ತಾರೆ ಎಂಬುದು ಚಿತ್ರದ ಸಾರಾಂಶ.
ಮಗಳ ಮದುವೆ ಹಣದಲ್ಲಿ ಚಿತ್ರ ನಿರ್ಮಾಣ
ಈ ಭಯಾನಕ ನಾಗರಾಜ್ ಸಿನಿಮಾ ಹುಚ್ಚಿನಿಂದ ತಮ್ಮ ಮಗಳ ಮದುವೆಗೆ ಕೂಡಿಟ್ಟಿದ್ದ ಹಣವನ್ನು ಚಿತ್ರಕ್ಕಾಗಿ ವೆಚ್ಚ ಮಾಡಿದ್ದಾರೆ. ಚಿತ್ರ ಗೆದ್ದೇ ಗೆಲ್ಲುತ್ತೆ, ಪ್ರೇಕ್ಷಕ ಪ್ರಭು ನಮ್ಮ ಕೈ ಹಿಡಿಯುತ್ತಾನೆ ಎಂಬ ನಂಬಿಕೆ ಅವರಿಗಿದೆಯಂತೆ. ಸಿನಿಮಾದಲ್ಲಿ ಹೊಡೆದಾಟ, ಬಡಿದಾಟ, ಮರಸುತ್ತುವ ಹಾಡುಗಳು ಇಲ್ಲವಂತೆ.
ನಾಗರಾಜ್ ರವರ ಹೊಸ ಪ್ರಯೋಗಾತ್ಮಕ ಚಿತ್ರ ನೋಡಲು ಸ್ಯಾಂಡಲ್ ವುಡ್ ಸಿನಿ ಪ್ರಿಯರು ಸ್ವಲ್ಪ ಸಮಯ ಕಾಯಬೇಕಿದೆ.