Don't Miss!
- Finance ಬೆಂಗಳೂರು, ನೋಯ್ಡಾ, ಪುಣೆಯಲ್ಲಿ ಶೀಘ್ರದಲ್ಲೇ ಹೊಸ ಆಪಲ್ ಸ್ಟೋರ್ ಪ್ರಾರಂಭ
- News Dr.Rajkumar: ಹುಟ್ಟೂರಲ್ಲಿ ಮುತ್ತುರಾಜಣ್ಣನ ನೆನಪುಗಳು ನೂರಾರು.. ನಿಮಗೆ ಗೊತ್ತಿರದ ಕುತೂಹಲಕಾರಿ ಸಂಗತಿಗಳು ಇಲ್ಲಿವೆ
- Technology ಈ ಹೊಸ 5G ಫೋನ್ ಖರೀದಿಸಿದರೆ, ವಿವೋ ಕಂಪನಿಯ ಇಯರ್ಫೋನ್ ಉಚಿತ!
- Automobiles ನಟಿ ಶಿಲ್ಪಾ ಶೆಟ್ಟಿಗೆ ಮತ್ತೊಂದು ಸಮಸ್ಯೆ ತಂದಿಟ್ಟ ಪತಿ: ಐಷಾರಾಮಿ ಕಾರುಗಳು ಸೀಜ್!
- Lifestyle ವೋಟರ್ ಐಡಿ ಇಲ್ಲದೆಯೂ ಮತ ಚಲಾಯಿಸಬಹುದು.! ಹೇಗೆ ಗೊತ್ತಾ?
- Sports 2025ರ ಚಾಂಪಿಯನ್ಸ್ ಟ್ರೋಫಿಗಾಗಿ ಭಾರತ ತಂಡ ಪಾಕಿಸ್ತಾನಕ್ಕೆ ಪ್ರಯಾಣಿಸಲಿದೆಯೇ?; ಬಿಸಿಸಿಐ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
''ಯುವಕರಿಲ್ಲದ ಮಲೆನಾಡು ವೃದ್ಧಾಶ್ರಮವಾಗಿದೆ''- ಸಿನಿಮಾ ಚಿಕ್ಕದು, ವಿಷಯ ದೊಡ್ಡದು
''ಎಲ್ರು ಓದಿ ಪಾಸ್ ಆಗಿ ದೊಡ್ಡ ಮನುಷ್ಯರಾದ್ರು. ಇಲ್ಲಿ ಮಲೆನಾಡಿನಲ್ಲಿ ಹೆಣ ಎತ್ತುವುದಕ್ಕೂ ಯುವಕರಿಲ್ಲ ಇಲ್ಲ. ಮಲೆನಾಡು ವೃದ್ಧಾಶ್ರಮ ಆಗಿದೆ.''
ಇದು ಪಿಯುಸಿ ಫೇಲ್ ಆಗಿ ಹಳ್ಳಿಯಲ್ಲೇ ಉಳಿಯುವ ಒಬ್ಬ ಹುಡುಗನ ಮಾತು. ಫೇಲ್ ಆದೆ ಎಂಬ ಕಾರಣಕ್ಕೆ ಈ ಹುಡುಗ ಹಳ್ಳಿಯಲ್ಲಿ ಇದ್ದಾನೆ ಎನ್ನುವುದಕ್ಕಿಂತ, ಹಳ್ಳಿಯಲ್ಲೇ ಉಳಿಯಬೇಕು ಎಂಬ ಕಾರಣಕ್ಕೆ ಈತ ಫೇಲ್ ಆಗಿದ್ದಾನೆ. ಎಲ್ಲರೂ ಪಾಸ್ ಆಗಿ ಸಿಟಿಗೆ ಹೋದ್ರೆ ಮಲೆನಾಡಿನಲ್ಲಿ ಇರುವವರು ಯಾರು?.
ಕಿರುಚಿತ್ರದಿಂದ ತೆಲುಗಿನಲ್ಲಿ ದೊಡ್ಡ ಆಫರ್ ಪಡೆದ ಕನ್ನಡದ ಪುಟ್ಟ ಹುಡುಗಿ
ಈ ವಿಷಯವನ್ನೇ ಇಟ್ಟುಕೊಂಡು ಮಾಡಿರುವ ಕಿರುಚಿತ್ರ 'ವಡ್ಡಾರಾಧಕ'. ಈ ಸಣ್ಣ ಸಿನಿಮಾ ಯೂ ಟ್ಯೂಬ್ ನಲ್ಲಿ ದೊಡ್ಡ ಪ್ರಶಂಸೆ ಪಡೆದಿದೆ. ಈ ಚಿತ್ರದ ವಿಷಯ ತುಂಬ ತುಂಬ ಚೆನ್ನಾಗಿದೆ. ಹಳ್ಳಿ ಬಿಟ್ಟು ಪಟ್ಟಣಕ್ಕೆ ಬಂದ ಹುಡುಗರಿಗೆ ಈ ಕಿರುಚಿತ್ರ ಬಹಳ ಹತ್ತಿರ ಆಗುತ್ತದೆ. ಸಿನಿಮಾ ನೋಡಿದವರಿಗೆ ಅವರ ಊರು ನೆನಪಿಗೆ ಬರುತ್ತದೆ.
ಕಿರುಚಿತ್ರದ ಎಲ್ಲ ಪಾತ್ರಗಳು ತುಂಬ ಚೆನ್ನಾಗಿದೆ. ಪಿಯುಸಿ ಹುಡುಗನಾಗಿ ಅನೀಶ್ ಎಸ್ ಶರ್ಮ ಕಾಣಿಸಿಕೊಂಡಿದ್ದಾರೆ. ಉಳಿದಂತೆ, ಸದಾನಂದ ಶರ್ಮ, ಸತ್ಯನಾರಾಯಣ ರಾವ್ ಹಾಗೂ ಗಂಗಾ ಭವಾನಿ ನಟಿಸಿದ್ದಾರೆ. ಅನೀಶ್ ಎಸ್ ಶರ್ಮ ಅವರೇ ಇದರ ನಿರ್ದೇಶನ ಮಾಡಿದ್ದಾರೆ.
ಕ್ಯಾಮರಾ ವರ್ಕ್ ಮತ್ತು ಸಂಕಲನ ತನ್ವಿಕ್ ಗೌಡ, ಚೇತನ್ ಕುಮಾರ್ ಸಂಗೀತ 'ವಡ್ಡಾರಾಧಕ'ಗೆ ಪ್ಲಾಸ್ ಪಾಯಿಂಟ್ ಆಗಿದೆ. ಬೇರೆಲ್ಲ ಕಿರುಚಿತ್ರಗಳಿಗಿಂತ ತುಂಬ ಹೊಸತನದಿಂದ ಕೂಡಿದೆ. ಮಲೆನಾಡಿನ ಸೌಂದರ್ಯದ ಜೊತೆಗೆ ಅದ್ಭುತ ವಿಷಯವನ್ನು ಮನಮುಟ್ಟುವ ಹಾಗೆ ಹೇಳಿದ್ದಾರೆ.
ಹುಡುಕಾಟದ ಹಾದಿಯಲಿ ಕಳೆದು ಹೋದವರ ಬದುಕಿನ ಚಿತ್ರಣ ಈ 'ರೇಖೆ'
ಅಂದಹಾಗೆ, ನಟ ಸತೀಶ್ ನೀನಾಸಂ ಆಡಿಯೋ ಹೌಸ್ ಯೂ ಟ್ಯೂಬ್ ಚಾನಲ್ ನಲ್ಲಿ ವಡ್ಡಾರಾಧಕ' ಕಿರುಚಿತ್ರವನ್ನು ವೀಕ್ಷಿಸಬಹುದಾಗಿದೆ. ಕಿರುಚಿತ್ರ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ.