Don't Miss!
- Lifestyle ಸ್ವತಂತ್ರ ಭಾರತದ ಮೊದಲ ಮತದಾರನಿಲ್ಲದ ಮೊದಲ ಚುನಾವಣೆ ಇದು..! ಯಾರು ಈ ಮತದಾರ ಗೊತ್ತಾ?
- News BJP Big Campaign: ಏಪ್ರಿಲ್ 20 ರಿಂದ ರಾಜ್ಯಕ್ಕೆ ಬಿಜೆಪಿ ರಾಷ್ಟ್ರೀಯ ನಾಯಕರ ದಂಡು! ಯಾರ್ಯಾರು ಬರಲಿದ್ದಾರೆ?
- Automobiles Elevate: ಶ್ರೀಸಾಮಾನ್ಯನ ಬಿಎಂಡಬ್ಲ್ಯೂ.. ಹೋಂಡಾ ಎಲಿವೇಟ್ ಖರೀದಿಸಬೇಕೇ? ಆನ್-ರೋಡ್ ಬೆಲೆ ಎಷ್ಟು, EMI ಏನು?
- Finance ಆಪ್ ಸ್ಟೋರ್ನಿಂದ ವಾಟ್ಸಾಪ್, ಥ್ರೆಡ್ ತೆಗೆದುಹಾಕಿದ ಆಪಲ್!
- Sports IPL 2024: ಪಂಜಾಬ್ ಕಿಂಗ್ಸ್ ವಿರುದ್ಧ ಗೆದ್ದರೂ ಹಾರ್ದಿಕ್ ಪಾಂಡ್ಯಗೆ ಭಾರೀ ಮೊತ್ತದ ದಂಡ!
- Technology Google Maps: ಗೂಗಲ್ ಮ್ಯಾಪ್ಸ್ ನಲ್ಲಿ ಹೊಸ ಸೌಲಭ್ಯ! ಹತ್ತಿರದ EV ಚಾರ್ಜಿಂಗ್ ಸ್ಟೇಷನ್ ಸರ್ಚ್ ಬಲು ಸುಲಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
''ಬದುಕಿದರೆ ದರ್ಶನ್ ಸರ್ ಥರ ಬದುಕಬೇಕು''- ವಸಿಷ್ಟ ಸಿಂಹ
Recommended Video
''ಬದುಕಿದರೆ ದರ್ಶನ್ ಸರ್ ಥರ ಬದುಕಬೇಕು'' ಹೀಗೆ ಖುಷಿಯಿಂದ ಹೇಳಿದರು ಕಂಚಿನ ಕಂಠದ ನಟ ವಸಿಷ್ಟ ಸಿಂಹ.
'ಇಂಡಿಯಾ V/S ಇಂಗ್ಲೆಂಡ್' ಸಿನಿಮಾದಲ್ಲಿ ವಸಿಷ್ಟ ಸಿಂಹ ಹೀರೋ ಆಗಿದ್ದಾರೆ. ಈ ಸಿನಿಮಾದ ಟ್ರೇಲರ್ ಅನ್ನು ನಟ ದರ್ಶನ್ ಬಿಡುಗಡೆ ಮಾಡಿದ್ದಾರೆ. ಸಿನಿಮಾಗೆ ದರ್ಶನ್ ಬಲ ಸಿಕ್ಕಿದ್ದು ಇಡೀ ತಂಡಕ್ಕೆ ಸಂತಸ ತಂದಿದೆ.
ಫಿಲ್ಮಿಬೀಟ್ ಪೋಲ್: ದರ್ಶನ್-ಪುನೀತ್ ಅಭಿಮಾನಿಗಳ ನಡುವೆ ಭಾರಿ ಪೈಪೋಟಿ
ನಟ ವಸಿಷ್ಟ ಸಿಂಹ, ನಾಯಕಿ ಮಾನ್ವಿತಾ ಹರೀಶ್, ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಕಾರ್ಯಕ್ರಮದಲ್ಲಿ ದರ್ಶನ್ ಬಗ್ಗೆ ಮಾತನಾಡಿದರು. ತನ್ನ ಕನಸನ್ನು ದರ್ಶನ್ ಈಡೇರಿಸಿದರು ಎಂದು ಡಿ ಬಾಸ್ ಗುಣವನ್ನು ವಸಿಷ್ಟ ಹೊಗಳಿದರು.
ನಮ್ಮ ಆಹ್ವಾನಕ್ಕೆ ಬೇಗ ಸ್ಪಂದಿಸಿದರು
ದರ್ಶನ್ ಒಂದು ಸಿನಿಮಾದ ಚಿತ್ರೀಕರಣದ ಸಮಯದಲ್ಲಿ ವಸಿಷ್ಠ ಭೇಟಿ ಮಾಡಿ, 'ಇಂಡಿಯಾ V/S ಇಂಗ್ಲೆಂಡ್' ಸಿನಿಮಾದ ಟ್ರೇಲರ್ ಬಿಡುಗಡೆ ಮಾಡಿಕೊಡಬೇಕೆಂದು ಮನವಿ ಮಾಡಿದ್ದಾರೆ. ಅವರ ಆಹ್ವಾನಕ್ಕೆ ಸ್ಪಂದಿಸಿದ ದರ್ಶನ್ ಕೆಲವೇ ದಿನದಲ್ಲಿ ಟ್ರೇಲರ್ ಬಿಡುಗಡೆ ಮಾಡಿಕೊಟ್ಟಿದ್ದಾರೆ. ಇದನ್ನು ಕಾರ್ಯಕ್ರಮದಲ್ಲಿ ವಸಿಷ್ಟ ನೆನೆದರು.
ಬದುಕಿದರೆ ದರ್ಶನ್ ಸರ್ ಥರ ಬದುಕಬೇಕು
ವಸಿಷ್ಟ ಬದುಕಿದರೆ ದರ್ಶನ್ ಸರ್ ರೀತಿ ಬದುಕಬೇಕು ಎಂದು ಹೇಳಿದರು. ತಾವು ಹೇಗೆ ಬದುಕಬೇಕು ಎಂದು ಕನಸುಕಟ್ಟಿದ್ದರೋ, ಅದೇ ತರ ದರ್ಶನ್ ಬದುಕು ಇದೆಯಂತೆ. ಒಬ್ಬ ನಟ ಹೀಗೂ ಇರಬಹುದು ಎಂದು ದರ್ಶನ್ ತೋರಿಕೊಟ್ಟಿದ್ದಾರೆ ಎಂದು ವಸಿಷ್ಟ ಹೇಳಿದರು.
ಕನ್ವರ್ ಲಾಲ್ ಜೊತೆಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸೆಲ್ಫಿ.!
ದರ್ಶನ್ ಇಷ್ಟ ಆಗೋದು ಈ ಕಾರಣಕ್ಕೆ
ದರ್ಶನ್ ಯಾಕೆ ಇಷ್ಟ ಆಗ್ತಾರೆ ಎನ್ನುವುದಕ್ಕೆ ವಸಿಷ್ಟ ಕಾರಣಗಳನ್ನೂ ನೀಡಿದರು. ಕುದುರೆ ಓಡಿಸುವುದು, ತೋಟಗಾರಿಕೆ ಮಾಡುವುದು, ಹಸುಗಳನ್ನು ಮೇಯಿಸುವುದು, ಹಾಲು ಕರೆಯುವುದು, ಕಾರ್, ಬೈಕ್ ಪ್ಯಾಷನ್ ಇದೆಲ್ಲ ನೋಡಿ ತುಂಬ ಖುಷಿ ಆಗುತ್ತದೆ ಎಂದು ವಸಿಷ್ಟ ತಿಳಿಸಿದರು.
ಯಾವತ್ತು ಹೀಗೆ ಆಗುತ್ತೆ ಅಂತ ಗೊತ್ತಿರಲಿಲ್ಲ
ಮೊದಲ ಬಾರಿಗೆ ವಸಿಷ್ಟ ನಾಯಕ ನಟನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ವೇಳೆ ತಮ್ಮ ಪಯಣವನ್ನು ವಸಿಷ್ಟ ನೆನೆದರು. ಬೆಂಗಳೂರಿನಲ್ಲಿ ಸಾಫ್ಟವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದೆ. ನಾಟಕದ ಗೀಳು, ಒಬ್ಬ ನಟನಾಗಿ ಕೆರಿಯರ್ ಆಯ್ಕೆ ಮಾಡಿಕೊಳ್ಳುವ ಪ್ರೇರೇಪಿಣೆ ನೀಡಿತು. ಆ ನಂತರ ಇಷ್ಟು ದೂರ ಬಂದು, ಹೀಗೆಲ್ಲ ಆಗುತ್ತದೆ ಅಂತ ಕನಸು ಕೂಡ ಕಂಡಿರಲಿಲ್ಲ ಎಂದು ವಸಿಷ್ಟ ಸಂತಸ ಹಂಚಿಕೊಂಡರು.
ಕಿಡ್ನಿ ವೈಫಲ್ಯದಿಂದ ಬಳಲುತಿದ್ದ ಪುಟ್ಟ ಅಭಿಮಾನಿಯ ಆಸೆ ಈಡೇರಿಸಿದ ಡಿ ಬಾಸ್