Don't Miss!
- Automobiles ಹೊಸ ಸುಜುಕಿ V-Strom 800 DE ಬೈಕ್ ಬಿಡುಗಡೆ: ಬೆಲೆ ರೂ.10.30 ಲಕ್ಷ
- Lifestyle ಯಾವ ದಿಕ್ಕಿಗೆ ತಲೆ ಇಟ್ಟು ಮಲಗಬಾರದು..? ಹಿರಿಯರು ಈ ರೀತಿ ಹೇಳೋದೇಕೆ.?
- Sports RCB vs KKR: ಗೇಮ್ ಚೇಂಜರ್ ಆಗಬಹುದು ಈ ಪ್ಲೇಯರ್ಸ್; ಈ ಆಟಗಾರರ ಮೇಲೆ ಕಣ್ಣು
- News Acid Attack: ಆಸ್ತಿ ವಿವಾದ: ಮಗನ ಮೇಲೆ 'ಆಸಿಡ್' ಎರಚಿದ ತಂದೆ
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Technology ಬಜೆಟ್ ದರದಲ್ಲಿ ಬೆಸ್ಟ್ 5G ಫೋನ್ ಬೇಕಿದ್ರೆ, ಈ ಲಿಸ್ಟ್ ಒಮ್ಮೆ ಗಮನಿಸಿ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ವೀರಪ್ಪನ್' ಲಿಸ್ಟ್ ನಲ್ಲಿ ಡಾ.ರಾಜ್ ಅಲ್ಲದೆ ರಜನಿಕಾಂತ್ ಕೂಡ ಇದ್ರೆ?
ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ಟ್ವಿಟ್ಟರ್ ನಲ್ಲಿ ಒಂದಲ್ಲಾ ಒಂದು ಹೊಸ ಬಾಂಬ್ ಹಾಕಿ ಪದೇ ಪದೇ ಸುದ್ದಿಯಾಗುತ್ತಲೇ ಇರುತ್ತಾರೆ. ಇದೀಗ ವೀರಪ್ಪನ್ ಹಿಂದೆ ಬಿದ್ದಿರುವ ವರ್ಮಾ ಹೊಸ ರೀತಿಯಲ್ಲಿ ಸುದ್ದಿಯಾಗಿದ್ದಾರೆ.
ಕುಖ್ಯಾತ ಕಾಡುಗಳ್ಳ ವೀರಪ್ಪನ್ ನಿಜ ಜೀವನ ಚರಿತ್ರೆಯಾಧರಿತ ಕಥೆಯನ್ನು 'ಕಿಲ್ಲಿಂಗ್ ವೀರಪ್ಪನ್' [ಕಿಲ್ಲಿಂಗ್ ವೀರಪ್ಪನ್: ಕನ್ನಡ ಚಲನಚಿತ್ರ ವಿಮರ್ಶೆ] ಚಿತ್ರದ ಮೂಲಕ ತೆರೆ ಮೇಲೆ ತಂದ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ವೀರಪ್ಪನ್ ಬಗ್ಗೆ ಕೆಲವು ಕುತೂಹಲಕಾರಿ ಸಂಗತಿಗಳನ್ನು ಹೊರಹಾಕಿದ್ದಾರೆ.
ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಅವರನ್ನು ಅಪಹರಿಸಲು ಸಂಚು ಮಾಡಿದ್ದ ದಂತಚೋರ ವೀರಪ್ಪನ್ ನಟ ಸಾರ್ವಭೌಮ ಡಾ.ರಾಜ್ ಕುಮಾರ್ ಅವರನ್ನು ಅಪಹರಿಸುವಲ್ಲಿ ಸಫಲನಾಗಿದ್ದ ಎಂದು ವರ್ಮಾ ಅವರು ಹೊಸ ಕಥೆ ಹುಟ್ಟುಹಾಕಿದ್ದಾರೆ.
ಹೌದು ಸ್ಮಗ್ಲರ್ ವೀರಪ್ಪನ್ ಬಗ್ಗೆ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ಸಾಕಷ್ಟು ಅಧ್ಯಯನ ನಡೆಸಿದ್ದಾರಂತೆ, ಸುಮಾರು 15 ವರ್ಷ ಸಂಶೋಧನೆ ನಡೆಸಿದ್ದಾಗಿ ಹೇಳುತ್ತಿರುವ ಆರ್.ಜಿ.ವಿ ವೀರಪ್ಪನ್ ಬಗ್ಗೆ ಕುತೂಹಲ ಕೆರಳಿಸುವ ವಿಚಾರಗಳನ್ನು ಹೊರ ಹಾಕಿದ್ದಾರೆ.['ವೀರಪ್ಪನ್' ಹಿಂದಿ ರಿಮೇಕ್ ಟ್ರೇಲರ್ ಅಬ್ಬರಕ್ಕೆ ಬೆಚ್ಚಿದ ಬಿಟೌನ್]
ಇನ್ನು ಡಕಾಯಿತ ವೀರಪ್ಪನ್ ಸೂಪರ್ ಸ್ಟಾರ್ ರಜನಿಕಾಂತ್ ಅವರಿಗಿಂತ ತಾನೇ ಅತೀ ಹೆಚ್ಚು ಜನಪ್ರಿಯ ವ್ಯಕ್ತಿ ಅಂತ ಭಾವಿಸಿದ್ದನಂತೆ, ಆದ್ದರಿಂದ ತನ್ನ ಜೀವನ ಚರಿತ್ರೆ ಆಧಾರಿತ ಸಿನಿಮಾ ಮಾಡಬೇಕು ಅಂತ ಬೇರೆ ಕೇಳಿಕೊಂಡಿದ್ದ ಎಂದು ವರ್ಮಾ ತಮ್ಮ ಟ್ವಿಟ್ಟರ್ ಮೂಲಕ ಕುತೂಹಲ ಅಂಶಗಳನ್ನು ಹೊರ ಹಾಕಿದ್ದಾರೆ.[ಇದ್ಬೇಕಿತ್ತಾ? ಸೂಪರ್ ಸ್ಟಾರ್ ರಜನಿ ಬಗ್ಗೆ ಲೇವಡಿ ಮಾಡಿದ ವರ್ಮಾ.!]
Veerappan used to think he is more famous than Rajnikanth and at one point he demanded a film to be made on him as a part of his Ransom
— Ram Gopal Varma (@RGVzoomin) May 17, 2016
ವರ್ಮಾ ಅವರು 'ಕಿಲ್ಲಿಂಗ್ ವೀರಪ್ಪನ್' ಚಿತ್ರವನ್ನು ಹಿಂದಿಯಲ್ಲೂ ಹೊರ ತರುತ್ತಿದ್ದು, ಹಿಂದಿ ಭಾಷೆಯಲ್ಲಿ ಡಾ.ರಾಜ್ ಕುಮಾರ್ ಮಾತ್ರವಲ್ಲದೆ, ಸೂಪರ್ ಸ್ಟಾರ್ ರಜನಿಕಾಂತ್ ಅವರ ಅಪಹರಣದ ವಿಷಯದ ಬಗ್ಗೆಯೂ ಸೇರಿಸಲಾಗಿದೆಯಂತೆ.[ಬಿಟೌನ್ ನಲ್ಲೂ ವರ್ಮಾರ 'ವೀರಪ್ಪನ್' ಘರ್ಜನೆ,ಶಿವಣ್ಣ ಪಾತ್ರಕ್ಕೆ ಯಾರು?]
ಇದೇ ತಿಂಗಳು ಮೇ 27 ರಂದು ಹಿಂದಿ ಭಾಷೆಯಲ್ಲಿ ತಯಾರಾಗಿರುವ 'ವೀರಪ್ಪನ್' ಸಿನಿಮಾ ತೆರೆ ಕಾಣುತ್ತಿದ್ದು, ಇದರಲ್ಲಿ ಇನ್ನೂ ಹೆಚ್ಚಿನ ಮಾಹಿತಿಗಳನ್ನು ಅಳವಡಿಸಲಾಗಿದೆ ಎಂದು ಹೇಳಲಾಗುತ್ತಿದೆ.