twitter
    For Quick Alerts
    ALLOW NOTIFICATIONS  
    For Daily Alerts

    'ಕೆಜಿಎಫ್' ಬಿಡುಗಡೆಗೆ ಬ್ರೇಕ್ ಹಾಕಿದ ವೆಂಕಟೇಶ್ ಯಾರು? ಬೇಡಿಕೆ ಏನು?

    |

    ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಸಿನಿಮಾ ನಾಳೆ ಸುಮಾರು 2000 ಚಿತ್ರಮಂದಿರಗಳಲ್ಲಿ ತೆರೆ ಕಾಣಲು ಸಿದ್ಧವಾಗಿದೆ. ಟಿಕೆಟ್ ಬುಕ್ಕಿಂಗ್, ಫಸ್ಟ್ ಡೇ ಫಸ್ಟ್ ಶೋ ಅಂತ ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ.

    ಹೀಗಿರುವಾಗ, ಕೆ.ಜಿ.ಎಫ್ ಸಿನಿಮಾ ನಾಳೆ ರಿಲೀಸ್ ಮಾಡದಂತೆ ಬೆಂಗಳೂರು ಸಿಟಿ ಸಿವಿಲ್ ಕೋರ್ಟ್ ತಡೆಯಾಜ್ಞೆ ನೀಡಿದೆ. ಹಾಗಾಗಿ, ನಾಳೆ ಕೆಜಿಎಫ್ ಬಿಡುಗಡೆಯಾಗೋದು ಬಹುತೇಕ ಅನುಮಾನವಾಗಿದೆ.

    'ಕೆಜಿಎಫ್' ರಿಲೀಸ್ ಗೆ ತಡೆ: ಸೆಷನ್ಸ್ ಕೋರ್ಟ್ ಆದೇಶ 'ಕೆಜಿಎಫ್' ರಿಲೀಸ್ ಗೆ ತಡೆ: ಸೆಷನ್ಸ್ ಕೋರ್ಟ್ ಆದೇಶ

    ಇಷ್ಟು ದಿನ ಕೆಜಿಎಫ್ ಚಿತ್ರಕ್ಕೆ ಯಾವುದೇ ವಿವಾದ, ಸಂಕಷ್ಟ, ಕಂಟಕ ಏನೂ ಇರಲಿಲ್ಲ. ಆದ್ರೀಗ, ಕೊನೆಯ ಘಳಿಗೆಯಲ್ಲಿ ಕೆಜಿಎಫ್ ಚಿತ್ರಕ್ಕೆ ಅಡ್ಡಗಾಲು ಹಾಕಿರೋದು ವೆಂಕಟೇಶ್. ಅಷ್ಟಕ್ಕೂ, ವೆಂಕಟೇಶ್ ಯಾರು? ಇವರ ಬೇಡಿಕೆ ಏನು?

    ವೆಂಕಟೇಶ್ ಯಾರು?

    ವೆಂಕಟೇಶ್ ಯಾರು?

    ಸದ್ಯ ಕೆಜಿಎಫ್ ಸಿನಿಮಾದ ಬಿಡುಗಡೆಗೆ ತಡೆ ತಂದಿರುವುದು ವೆಂಕಟೇಶ್. ನಿರ್ಮಾಪಕ ವಿಜಯ್ ಕಿರಗಂದೂರ್ ಮತ್ತು ನಿರ್ದೇಶಕ ಪ್ರಶಾಂತ್ ನೀಲ್ ಅವರ ವಿರುದ್ಧ ಆರೋಪ ಮಾಡಿ ಕೋರ್ಟ್ ಮೆಟ್ಟಿಲೇರಿ ತಡೆಯಾಜ್ಞೆ ತಂದಿದ್ದಾರೆ.

    ಕನ್ನಡ ಇಂಡಸ್ಟ್ರಿಯ ದಿಕ್ಕು ಬದಲಿಸಿದ 'ಕೆಜಿಎಫ್' ಚಿತ್ರದ '21' ಅಂಶಗಳು ಕನ್ನಡ ಇಂಡಸ್ಟ್ರಿಯ ದಿಕ್ಕು ಬದಲಿಸಿದ 'ಕೆಜಿಎಫ್' ಚಿತ್ರದ '21' ಅಂಶಗಳು

    ರೌಡಿ ತಂಗಂ ಕಥೆ ಎಂಬ ಆರೋಪ

    ರೌಡಿ ತಂಗಂ ಕಥೆ ಎಂಬ ಆರೋಪ

    ಕೆಜಿಎಫ್, ರೌಡಿ ತಂಗಂ ಕಥೆಯನ್ನಾಧರಿಸಿದೆ ಎಂಬ ಆರೋಪ ಮಾಡಿ, ಕೆಜಿಎಫ್ ಸಿನಿಮಾ ಬಿಡುಗಡೆ ಮಾಡಬಾರದು ಎಂದು ವೆಂಕಟೇಶ್ ದೂರಿದ್ದಾರೆ. ರೌಡಿ ತಂಗಂ ಕುರಿತು ಯಾವುದೇ ಕಥೆ, ಸಿನಿಮಾ ಮಾಡಬೇಕಂದ್ರೆ ವೆಂಕಟೇಶ್ ಅವರ ಬಳಿ ಅನುಮತಿ ಪಡೆಯಬೇಕಾಗಿದೆ. ಬಟ್, ಚಿತ್ರತಂಡ ಅನುಮತಿ ಪಡೆದಿಲ್ಲ ಎಂಬ ಕಾರಣ ನೀಡಿದ್ದಾರೆ.

    ಸಂದರ್ಶನ : 'ಕೆಜಿಎಫ್' ಎನ್ನುವುದು ಹತ್ತು ಸಿನಿಮಾಗಳಿಗೆ ಸಮ ಸಂದರ್ಶನ : 'ಕೆಜಿಎಫ್' ಎನ್ನುವುದು ಹತ್ತು ಸಿನಿಮಾಗಳಿಗೆ ಸಮ

    ರೌಡಿ ತಂಗಂ ಕಥೆ ವೆಂಕಟೇಶ್ ಬಳಿ ಇದೆ

    ರೌಡಿ ತಂಗಂ ಕಥೆ ವೆಂಕಟೇಶ್ ಬಳಿ ಇದೆ

    ಅಂದ್ಹಾಗೆ, ಕೋಲಾರ್ ರೌಡಿ ತಂಗಂ ಬಗ್ಗೆ ಯಾವುದೇ ಸಿನಿಮಾ, ಕಥೆ, ಸಾಕ್ಷ್ಯಚಿತ್ರಕ್ಕೆ ಸಂಬಂಧಿಸಿದಂತೆ ತಂಗಂ ಅವರ ತಾಯಿ ಬಳಿ ವೆಂಕಟೇಶ್ ಅವರು ಅನುಮತಿ ಪಡೆದುಕೊಂಡಿದ್ದರು. ಈಗ ತಂಗಂ ಬಗ್ಗೆ ಏನೇ ಮಾಡಿದ್ರು. ವೆಂಕಟೇಶ್ ಬಳಿಯೇ ಅನುಮತಿ ಪಡೆಯಬೇಕಿದೆ. ಈ ಹಿಂದೆ 'ಕೋಲಾರ್' ಸಿನಿಮಾ ಮಾಡಿದ್ದ ನಿರ್ಮಾಪಕ ಆರ್ ಲಕ್ಷ್ಮಿ ನಾರಾಯಣ್ ಮತ್ತು ಆರ್ ರಮೇಶ್ ಅವರಿಂದ ವೆಂಕಟೇಶ್ ರೌಡಿ ತಂಗಂ ಕಥೆಯ ಅನುಮತಿ ಪಡದುಕೊಂಡಿದ್ದಾರೆ.

    ರೌಡಿ ತಂಗಂ ಛಾಯೆ ಇದೆ

    ರೌಡಿ ತಂಗಂ ಛಾಯೆ ಇದೆ

    ಕೆಜಿಎಫ್ ಚಿತ್ರದಲ್ಲಿ ರೌಡಿ ತಂಗಂ ಕುರಿತ ದೃಶ್ಯಗಳಿವೆ, ದೃಶ್ಯಗಳಿವೆ. ಇದರಲ್ಲಿ ಅವರ ಕಥೆ ಬಳಸಲಾಗಿದೆ. ಹಾಗಾಗಿ, ಅವರು ಕಥೆಯ ಬಗ್ಗೆ ಎಲ್ಲಿಯೂ ಸುಳಿವು ಕೊಡದೇ, ಗೌಪ್ಯವಾಗಿಯೇ ಮಾಡಿಕೊಂಡು ಬರ್ತಿದ್ದಾರೆ ಎಂದು ವೆಂಕಟೇಶ್ ಪರ ವಕೀಲ ರಘುನಾಥ್ ಹೇಳಿದ್ದಾರೆ.

    ಹೌದು ಸ್ವಾಮಿ ! ಈ ಹುಡುಗನೇ ಕೆಜಿಎಫ್ ನ ಸದ್ಯದ ಸೆನ್ಸೇಷನ್ ಹೌದು ಸ್ವಾಮಿ ! ಈ ಹುಡುಗನೇ ಕೆಜಿಎಫ್ ನ ಸದ್ಯದ ಸೆನ್ಸೇಷನ್

    English summary
    Bengaluru 10th City Civil Court stays Actor Yash Starrer KGF movie screening till January 07, 2019. now, Venkatesh lawyer clears about kgf controversy.
    Thursday, December 20, 2018, 19:31
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X