Don't Miss!
- Lifestyle ಮಳೆ ನಿರೀಕ್ಷೆಯಲ್ಲಿದ್ದವರಿಗೆ ಶಾಕ್ ಕೊಟ್ಟ ಹವಾಮಾನ ಇಲಾಖೆ..!
- News ಕರ್ನಾಟಕಕ್ಕೆ ವಸೂಲಿಗೆ ಬಂದಿದ್ದ ರಣದೀಪ್ ಸುರ್ಜೇವಾಲ: ಪ್ರಹ್ಲಾದ್ ಜೋಶಿ
- Automobiles Tata: ಒಬ್ಬರೇ ಬಂದು 2 ಸಾವಿರ ಟಾಟಾ ಎಲೆಕ್ಟ್ರಿಕ್ ಕಾರುಗಳನ್ನು ಖರೀದಿಸಿ ಹೋಗಿಬಿಟ್ಟರು!
- Technology ಮೇ 1 ರಂದು ವಿವೋ T3x 5G ಮೊಬೈಲ್ ಮತ್ತೆ ಖರೀದಿಗೆ ಲಭ್ಯ!..ಅಗ್ಗದ ಬೆಲೆ ಇದೆ!
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸಾಹಿತ್ಯ-ನಾಟಕ ರಂಗದ ಮೂಗಿಗೆ ತುಪ್ಪ ಸವರಿದ ಯಡಿಯೂರಪ್ಪ ಬಜೆಟ್
ಸಿಎಂ ಹಾಗೂ ಸ್ವತಃ ಹಣಕಾಸು ಸಚಿವರೂ ಆಗಿರುವ ಯಡಿಯೂರಪ್ಪ ಅವರು ಇಂದು ಕರ್ನಾಟಕ ರಾಜ್ಯ ಬಜೆಟ್ 2021-22 ಅನ್ನು ವಿಧಾನಸೌಧದಲ್ಲಿ ಮಂಡಿಸಿದರು.
ಯಥಾವತ್ತು ಮಠಗಳು, ಜಾತಿ ಮಂಡಳಿಗಳು, ನಿಗಮಗಳಿಗೆ ಕೋಟ್ಯಂತರ ಹಣವನ್ನು ಬಜೆಟ್ನಲ್ಲಿ ಮೀಸಲಿಡಲಾಯಿತು. ಶಿಕ್ಷಣ, ಆರೋಗ್ಯ ಇನ್ನಿತರೆ ಪ್ರಮುಖ ಅಗತ್ಯಗಳಿಗೆ ಅನುದಾನಗಳನ್ನು ನೀಡಲಾಯಿತು. ಆದರೆ ಕೆಲವು ಕ್ಷೇತ್ರಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದರೆ ಕೆಲವಕ್ಕೆ ಮೂಗಿಗೆ ತುಪ್ಪು ಸವರಲಾಯಿತು.
ಚಿತ್ರೋದ್ಯಮವನ್ನು ಈ ಬಜೆಟ್ನಲ್ಲಿ ನಿರ್ಮಲಕ್ಷಿಸಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಉಳಿದಂತೆ ಸಾಹಿತ್ಯ ಹಾಗೂ ನಾಟಕ ರಂಗಕ್ಕೆ ನಾಮ್ಕೆ ವಾಸ್ತೆ ಕಿರು ಯೋಜನೆಗಳನ್ನು ನೀಡಲಾಗಿದೆ.
ಸಾಹಿತಿ ಎಸ್.ಎಲ್.ಭೈರಪ್ಪ ಅವರ ಕೃತಿ 'ಪರ್ವ' ಅನ್ನು ರಂಗಕ್ಕೆ ಅಳವಡಿಸಿ ರಾಜ್ಯದಾದ್ಯಂತ ವಿವಿಧ ರಂಗತಂಡಗಳ ಮೂಲಕ ಪ್ರದರ್ಶಿಸಲು ಒಂದು ಕೋಟಿ ರುಪಾಯಿ ಹಣವನ್ನು ನೀಡುವುದಾಗಿ ಬಜೆಟ್ನಲ್ಲಿ ಹೇಳಿದರು ಯಡಿಯೂರಪ್ಪ.
ಅದರ ನಂತರ ಬೆಂಗಳೂರಿನ ಮಲ್ಲತ್ತಹಳ್ಳಿ ರಂಗ ಚಟುವಟಿಕೆ ಹಾಗೂ ಸಾಹಿತ್ಯ ಚಟುವಟಿಕೆಗೆ ಎರಡು ಕೋಟಿ ರೂಪಾಯಿ ಹಣ ಮೀಸಲಿಡುವುದಾಗಿ ಹೇಳಿದ್ದಾರೆ ಯಡಿಯೂರಪ್ಪ.
Recommended Video
ಆದಿಕವಿ ಪಂಪನಿಂದ ಮುದ್ದಣನ ಕಾಲಘಟ್ಟದ ವರೆಗೆ ಎಲ್ಲ ಕೃತಿಗಳ ಡಿಜಲೀಕರಣ ಹಾಗೂ ಆನ್ಲೈನ್ನಲ್ಲಿ ಲಭ್ಯವಾಗಿಸಲು ಕ್ರಮ ಕೈಗೊಳ್ಳುವುದಾಗಿ ಯಡಿಯೂರಪ್ಪ ಹೇಳಿದ್ದಾರೆ. ಜೊತೆಗೆ ಮುಂಬರುವ ಹಾವೇರಿ ಯಲ್ಲಿ ನಡೆಯಲಿರುವ ಸಾಹಿತ್ಯ ಸಮ್ಮೇಳನಕ್ಕೆ ಸರ್ಕಾರವು ಭರಪೂರ ನೆರವು ನೀಡುವುದಾಗಿ ಹೇಳಿದ್ದಾರೆ ಯಡಿಯೂರಪ್ಪ.