Don't Miss!
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಇವರೇ ನೋಡಿ ಭಟ್ಟರ ಎರಡನೇ ಗಾಳಿಪಟದ ನಾಯಕಿಯರು
ಯೋಗರಾಜ ಭಟ್ಟರು ಎರಡನೇ ಬಾರಿ ಗಾಳಿಪಟ ಹಾರಿಸುತ್ತಿರುವುದು ಗೊತ್ತಿರುವ ಸಂಗತಿಯೇ. ಮೊದಲ ಗಾಳಿಪಟ ಸಿನಿಮಾ ಭರಪೂರ ಹಿಟ್ ಆಗಿ ಹದಿಮೂರು ವರ್ಷದ ಬಳಿಕ ಗಾಳಿಪಟ 2 ಮಾಡುತ್ತಿದ್ದಾರೆ ಯೋಗರಾಜ್ ಭಟ್.
ಮೊದಲ ಸಿನಿಮಾದಲ್ಲಿ ಗಣೇಶ್, ದಿಗಂತ್ ಹಾಗೂ ರಾಜೇಶ್ ಕೃಷ್ಣನ್ ನಾಯಕರಾಗಿದ್ದರು. ಗಾಳಿಪಟ 2 ನಲ್ಲಿ ರಾಜೇಶ್ ಕೃಷ್ಣನ್ ಸ್ಥಾನವನ್ನು ನಿರ್ದೇಶಕ, ನಟ ಪವನ್ ಕುಮಾರ್ ತುಂಬುತ್ತಿದ್ದಾರೆ. ಗಣೇಶ್, ದಿಗಂತ್ ಮುಂದುವರೆದಿದ್ದಾರೆ.
ಗಾಳಿಪಟ 2 ಸಿನಿಮಾದ ನಾಯಕರು, ಶೂಟಿಂಗ್, ಪೋಸ್ಟರ್ಗಳು ಇನ್ನಿತರೆ ವಿಷಯಗಳನ್ನು ಬಹಿರಂಗಗೊಳಿಸಿದ್ದ ಭಟ್ಟರು ನಾಯಕಿಯರು ಯಾರಾಗಲಿದ್ದಾರೆ ಎಂಬ ಬಗ್ಗೆ ಪೂರ್ಣ ಮಾಹಿತಿ ನೀಡಿರಲಿಲ್ಲ. ಇದೀಗ ಅದೂ ಸಹ ಬಹಿರಂಗಗೊಂಡಿದೆ. ಹೊಸ ಗಾಳಿಪಟಕ್ಕೆ ಹೊಸ ನಾಯಕಿಯರನ್ನು ಆರಿಸಿ ತಂದಿದ್ದಾರೆ ನಿರ್ದೇಶಕ ಯೋಗರಾಜ್ ಭಟ್.
ತಮಿಳು, ಕನ್ನಡ, ಮಲಯಾಳಂ ನಟಿಯರು
ತಮಿಳು, ಮರಾಠಿ ಹಾಗೂ ಒಂದು ಕನ್ನಡ ಸಿನಿಮಾದಲ್ಲಿ ನಟಿಸಿರುವ ವೈಭವಿ ಶಾಂಡಿಲ್ಯ, ನಟಿ ಶರ್ಮಿಳಾ ಮಾಂಡ್ರೆ ಹಾಗೂ ಮಲಯಾಳಂ ಚೆಲುವೆ ಸಂಯುಕ್ತಾ ಮೆನನ್ ಅವರುಗಳು ಗಾಳಿಪಟ 2 ಸಿನಿಮಾದಲ್ಲಿ ನಾಯಕಿಯರಾಗಿ ನಟಿಸಲಿದ್ದಾರೆ. ಆದರೆ ಯಾವ ನಟಿ ಯಾವ ನಟರಿಗೆ ಜೋಡಿ ಎಂಬುದು ಗೊತ್ತಾಗಿಲ್ಲ.
ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ
ಸಿನಿಮಾದ ಮೂರು ನಾಯಕರಲ್ಲಿ ಒಬ್ಬರಾದ ಪವನ್ ಕುಮಾರ್ ಅವರು ಗಾಳಿಪಟ 2 ಸಿನಿಮಾದ ನಾಯಕಿಯರ ಚಿತ್ರಗಳನ್ನು ತಮ್ಮ ಇನ್ಸ್ಟಾಗ್ರಾಂ ನಲ್ಲಿ ಹಂಚಿಕೊಂಡಿದ್ದಾರೆ. ಶರ್ಮಿಳಾ ಮಾಂಡ್ರೆ ಗಾಳಿಪಟ 2 ಸಿನಿಮಾದಲ್ಲಿದ್ದಾರೆ ಎಂಬುದು ಬಹಿರಂಗಗೊಂಡಿತ್ತು. ಆದರೆ ಇನ್ನಿಬ್ಬರು ನಟಿಯರ ಬಗ್ಗೆ ಪೂರ್ಣ ಮಾಹಿತಿ ಇರಲಿಲ್ಲ.
ಕಜಕಿಸ್ತಾನದಲ್ಲಿ ಚಿತ್ರೀಕರಣ ನಡೆಯುತ್ತಿದೆ
ಪ್ರಸ್ತುತ ಗಾಳಿಪಟ 2 ಸಿನಿಮಾ ಕಜಕಿಸ್ತಾನ ಹಾಗೂ ಯೂರೋಪ್ ನ ಇನ್ನು ಕೆಲವು ಸುಂದರ ಹಿಮಚ್ಛಾಧಿತ ಪ್ರದೇಶಗಳಲ್ಲಿ ಚಿತ್ರೀಕರಣದಲ್ಲಿ ನಿರತವಾಗಿದೆ. ಗಾಳಿಪಟ 2 ಸಿನಿಮಾದ ಕೊನೆಯ ಹಂತದ ಚಿತ್ರೀಕರಣ ಇದಾಗಿದೆ ಎನ್ನಲಾಗುತ್ತಿದೆ. ಆ ನಂತರ ಬಿಡುಗಡೆ ದಿನಾಂಕ ಘೋಷಣೆ ಆಗಲಿದೆ.
Recommended Video
ಶಿವರಾಜ್ ಕುಮಾರ್-ಪ್ರಭುದೇವ ಸಿನಿಮಾ ನಿರ್ದೇಶಿಸಲಿರುವ ಭಟ್ಟರು
ಗಾಳಿಪಟ 2 ಸಿನಿಮಾದ ಬಳಿಕ ಯೋಗರಾಜ್ ಭಟ್ ಅವರು ಶಿವರಾಜ್ ಕುಮಾರ್ ಹಾಗೂ ಪ್ರಭುದೇವ ಅವರ ಸಿನಿಮಾವನ್ನು ನಿರ್ದೇಶಿಸಲಿದ್ದಾರೆ. ಇದೊಂದು ಸ್ವಾತಂತ್ರ್ಯ ಪೂರ್ವದ ಕತೆ ಎಂದು ಹೇಳಲಾಗುತ್ತಿದೆ. ಶಿವರಾಜ್ ಕುಮಾರ್ ಹಾಗೂ ಪ್ರಭುದೇವ ಇಬ್ಬರೂ ಸಿನಿಮಾಕ್ಕೆ ಒಪ್ಪಿಗೆ ನೀಡಿದ್ದಾರೆ.