Don't Miss!
- Automobiles ಹ್ಯುಂಡೈ ವೆರ್ನಾ ಕಾರಿಗೆ ಭಾರೀ ಡಿಸ್ಕೌಂಟ್: ರಾಶಿ ಫೀಚರ್ನ ಕಾರಿಗೆ ಇಷ್ಟು ಆಫರ್ ಯಾಕೆಂದ ನೆಟ್ಟಿಗರು!
- News Rain Death: ಬೀದರ್ನಲ್ಲಿ ಭರ್ಜರಿ ಮಳೆ, ಸಿಡಿಲು ಬಡಿದು ಕಾರ್ಮಿಕ ಸಾವು
- Finance ಎವರೆಸ್ಟ್ ಮಾತ್ರವಲ್ಲ ಎಂಡಿಎಚ್ನ ಉತ್ಪನ್ನದಲ್ಲೂ ಕೀಟನಾಟಕ ಪತ್ತೆ
- Sports ಟಿ20 ವಿಶ್ವಕಪ್ನಲ್ಲಿ ವಿರಾಟ್ ಕೊಹ್ಲಿಗೆ ಬ್ಯಾಟಿಂಗ್ ಕ್ರಮಾಂಕ ನೀಡಿದ ಆರೋನ್ ಫಿಂಚ್
- Lifestyle ರಾಜ್ಯದಲ್ಲಿ ಮುಂದಿನ 1 ವಾರ ಹವಾಮಾನ ಹೇಗಿರಲಿದೆ? ಎಲ್ಲೆಲ್ಲಿ ಮಳೆಯಾಗಲಿದೆ?
- Technology ಲಾವಾ ಅಗ್ನಿ 2 5G ಮೊಬೈಲ್ ಬೆಲೆಯಲ್ಲಿ ದಿಢೀರ್ ಇಳಿಕೆ; ಗ್ರಾಹಕರಿಗೆ ಖುಷಿ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ವಿಡಿಯೋ: ಪ್ರಕೃತಿ ನಡುವೆ ನಿಖಿಲ್ ಕುಮಾರಸ್ವಾಮಿ-ರೇವತಿ ವರ್ಕ್ಔಟ್
ನವ ಜೋಡಿ ನಿಖಿಲ್ ಕುಮಾರಸ್ವಾಮಿ ಮತ್ತು ರೇವತಿ ಲಾಕ್ಡೌನ್ ಸಮಯದಲ್ಲಿ ಸಾಕಷ್ಟು ಕ್ವಾಲಿಟಿ ಸಮಯವನ್ನು ಪರಸ್ಪರ ಒಟ್ಟಿಗೆ ಕಳೆಯುತ್ತಿದ್ದಾರೆ.
Recommended Video
ಲಾಕ್ಡೌನ್ನಿಂದಾಗಿ ಎಲ್ಲಿಯೂ ಹೊರಗೆ ಹೋಗಲಾಗದ ಸಂದರ್ಭ ಈಗಿದೆ. ಆದರೆ ಅವರು ತಮ್ಮ ತೋಟದ ಮನೆ ಸೇರಿ ಪ್ರಕೃತಿ ಮಧ್ಯೆ ಲಾಕ್ಡೌನ್ ದಿನಗಳನ್ನು ಸಂತೋಷದಿಂದ ಕಳೆಯುತ್ತಿದ್ದಾರೆ.
ಲಾಕ್ಡೌನ್ ಸಮಯದಲ್ಲಿ ಕೆಲಸ ಮಾಡದೆ ಸೋಮಾರಿಯಾಗಿದೆ ನಿಖಿಲ್ ಕುಮಾರಸ್ವಾಮಿ ಅವರು ರೈತನಾಗಲು ಹೊರಟಿದ್ದು, ಪತ್ನಿ ರೇವತಿ ಅದಕ್ಕೆ ಬೆಂಬಲ ನೀಡಿದ್ದಾರೆ.
ಯುವಕರಿಗೆ ಸ್ಫೂರ್ತಿಯಾಗಲು ರೈತನಾಗಲು ನಿರ್ಧರಿಸಿದ ನಟ ನಿಖಿಲ್ ಕುಮಾರಸ್ವಾಮಿ
ಇದೀಗ ಇಬ್ಬರೂ ಬೆಳಂಬೆಳಿಗ್ಗೆ ವರ್ಕ್ಔಟ್ ಮಾಡುತ್ತಿರುವ ವಿಡಿಯೋವನ್ನು ನಿಖಿಲ್ ಕುಮಾರಸ್ವಾಮಿ ಅವರು ಇನ್ಸ್ಟಾಗ್ರಾಂ ನಲ್ಲಿ ಹಂಚಿಕೊಂಡಿದ್ದಾರೆ.
ವಿಡಿಯೋ ಹಂಚಿಕೊಂಡಿರುವ ನಿಖಿಲ್
ನಿಖಿಲ್ ಕುಮಾರಸ್ವಾಮಿ ಹಾಗೂ ಪತ್ನಿ ರೇವತಿ ಮಹಡಿಯ ಮೇಲೆ ನಿಂತು ವ್ಯಾಯಾಮ ಮಾಡುತ್ತಿದ್ದಾರೆ. ವಿಡಿಯೋದ ಹಿನ್ನೆಲೆಯಲ್ಲಿ ಕಣ್ಣುಹಾಯಿಸಿದಷ್ಟೂ ಹಸಿರೇ ಕಾಣುತ್ತಿದೆ. ಪತಿ-ಪತ್ನಿ ಇಬ್ಬರೂ ಫಿಟ್ನೆಸ್ಗೆ ಮಹತ್ವ ನೀಡುವವರು ಎಂಬುದು ವಿಡಿಯೋದಿಂದ ಗೊತ್ತಾಗುತ್ತಿದೆ.
ಜಿಮ್ ಅಲ್ಲ ವ್ಯಾಯಾಮ ಮಾಡಲು ಪ್ರೇರಣೆ ಬೇಕಷ್ಟೆ
'ವ್ಯಾಯಾಮ ಮಾಡಲು ಯಾವಾಗಲೂ ಜಿಮ್ ಬೇಕು ಎಂದೇನೂ ಇಲ್ಲ, ವ್ಯಾಯಾಮ ಮಾಡಲು ಪ್ರೇರಣೆ ಬೇಕು, ನನ್ನ ಪಾರ್ಟನ್ ಜೊತೆ ಸೇರಿ ನಿಸರ್ಗದ ಮಧ್ಯೆ ವ್ಯಾಯಾಮ ಮಾಡಿದೆ' ಎಂದು ವಿಡಿಯೋ ಹಂಚಿಕೊಂಡಿರುವ ನಿಖಿಲ್ ಬರೆದುಕೊಂಡಿದ್ದಾರೆ.
ನಿಖಿಲ್ ಕುಮಾರಸ್ವಾಮಿ ಮದುವೆ ಟೀಕಿಸಿ ಮಾಡಿದ್ದ ಟ್ವೀಟ್ ಡಿಲೀಟ್ ಮಾಡಿದ ರವೀನಾ ಟಂಡನ್
ಕೃಷಿಕನಾಗುತ್ತಿರುವ ನಿಖಿಲ್ ಕುಮಾರಸ್ವಾಮಿ
ನಿಖಿಲ್ ಸಹ ಕೃಷಿಕನಾಗಲು ಹೊರಟಿದ್ದು, ತಮ್ಮ ಜನೀನಿನಲ್ಲಿ ಕೃಷಿ ಚಟುವಟಿಕೆ ಪ್ರಾರಂಭ ಮಾಡುವುದಾಗಿ ಕೆಲವು ದಿನಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು. ಇದಕ್ಕೆ ಪೂರಕವಾಗಿ ಕೆಲವು ಚಿತ್ರಗಳನ್ನು ಸಹ ಹಂಚಿಕೊಂಡಿದ್ದರು.
ಫಾರಿನ್ ಟ್ರಿಪ್ ಕ್ಯಾನ್ಸಲ್
ಭಾರಿ ಅದ್ಧೂರಿಯಾಗಿ ನಡೆಸಲಿಚ್ಛಿಸಿದ್ದ ನಿಖಿಲ್ ಕುಮಾರಸ್ವಾಮಿ ಮದುವೆ ಲಾಕ್ಡೌನ್ ಕಾರಣದಿಂದ ಬಹು ಸರಳವಾಗಿ ಮಾಡಲಾಯಿತು. ನಂತರ ಈ ಯುವಜೋಡಿ ತಮ್ಮ ಫಾರಿನ್ ಟ್ರಿಪ್ ಯೋಜನೆಗಳನ್ನೂ ಸಹ ಕೊರೊನಾ ಕಾರಣಕ್ಕೆ ರದ್ದುಪಡಿಸಿ ಸದ್ಯ ರಾಮನಗರ ಬಳಿಯ ತೋಟದ ಮನೆ, ಬೆಂಗಳೂರು ಮನೆಗಳಿಗೆ ಓಡಾಡಿಕೊಂಡಿದ್ದಾರೆ.