ಬಿಸಿಲಿನ ಬೇಗೆಗೆ ಬೇಸತ್ತು ಈ ಕೆಲಸ ಮಾಡಿದ್ರು ವಿಜಯ್ ದೇವರಕೊಂಡ
ಬಿಸಿಲಿನ ಬೇಗೆ ಯಾರನ್ನು ಬಿಡುವುದಿಲ್ಲ .ಈ ವರ್ಷ ಸೂರ್ಯನ ತಾಪ ಸ್ವಲ್ಪ ಹೆಚ್ಚಾಗಿಯೇ ಇದೆ. ಬಿಸಿಲಿಗೆ ಸಾಮಾನ್ಯ ಜನರು, ಸೆಲಬ್ರೆಟಿಗಳು ಎನ್ನುವ ಬೇದ ಬಾವವಿಲ್ಲ. ಸಿನಿಮಾ ಸ್ಟಾರ್ ಗಳು ಬಿಸಿಲಿನ ಬೇಗೆಗೆ ಬೇಸತ್ತಿದ್ದಾರೆ.
ಬಿಸಿಲಿಗೆ ತಡೆದುಕೊಳ್ಳಲು ಸಾಧ್ಯವಿಲ್ಲದೆ ನಟ ವಿಜಯ್ ದೇವರಕೊಂಡ ಒಂದು ನಿರ್ಧಾರಕ್ಕೆ ಬಂದಿದ್ದಾರೆ. ಬಿಸಿಲಿನ ಬೇಗೆಯಲ್ಲಿ ಸುಸ್ತಾಗಿರುವ ಕಾರ್ಮಿಕರಿಗೆ, ಟ್ರಾಫಿಕ್ ಪೋಲೀಸರಿಗೆ ಹಾಗೂ ವಿದ್ಯಾರ್ಥಿಗಳಿಗೆ ಉಚಿತವಾಗಿ ಐಸ್ ಕ್ರೀಂ ನೀಡಲು ನಿರ್ಧರಿಸಿದ್ದಾರೆ.
ಹೈದ್ರಾಬಾದ್ ನಲ್ಲಿ 'ದಿ ದೇವರಕೊಂಡ ಬರ್ತಡೇ ಟ್ರಕ್' ಎನ್ನುವ ಹೆಸರಿನಲ್ಲಿ ಮೂರು ಗಾಡಿಗಳು ಹೈದ್ರಾಬಾದ್ ನಲ್ಲಿ ಓಡಾಡುತ್ತಿವೆ. ಬಿಸಿಲು ಹೆಚ್ಚಾಗಿರುವುದನ್ನ ಅರಿತುಕೊಂಡಿರುವ ವಿಜಯ್ ಈ ನಿರ್ಧಾರ ಮಾಡಿದ್ದಾರೆ.

ಈ ಬಗ್ಗೆ ಟ್ವಿಟ್ಟರ್ ನಲ್ಲಿ ಬರೆದುಕೊಂಡಿರುವ ವಿಜಯ್ ದೇವರಕೊಂಡ ನಿಮಗೆ ಐಸ್ ಕ್ರೀಂ ಗಾಡಿ ಸಿಕ್ಕಿದರೆ, ಒಂದು ಸೆಲ್ಫಿಯನ್ನ ನನಗೆ ಕಳುಹಿಸಿ. ನಾನು ನಿಮ್ಮ ಮುಖದಲ್ಲಿನ ಸಂತೋಷ ನೋಡಬೇಕು ಎಂದಿದ್ದಾರೆ. ಸಿನಿಮಾ ನಾಯಕರು ಕೇವಲ ತಮ್ಮ ಒಳಿತನ್ನು ಮಾತ್ರ ಯೋಚಿಸದೇ ಜನ ಸಾಮಾನ್ಯರ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸುವುದು ಖುಷಿಯ ವಿಚಾರ.


Click it and Unblock the Notifications