Don't Miss!
- News Karnataka Lok Sabha Elections: ರಾಷ್ಟ್ರೀಯ ಮುಖಂಡರು VS ರಾಜ್ಯ ನಾಯಕರು; ಗೆಲ್ಲೋದು ಯಾರು?
- Automobiles ನಿಜವಾದ ಮಾನವತಾವಾದಿ: ನಟ ರಾಘವ ಲಾರೆನ್ಸ್ರಿಂದ ವಿಶೇಷ ಚೇತನ ಸಾಧಕರಿಗೆ 13 ಟಿವಿಎಸ್ ಸ್ಕೂಟರ್ ಗಿಫ್ಟ್
- Lifestyle ರಸ್ತೆ ಬದಿಯ ಮರಗಳಿಗೆ ಬಣ್ಣ ಏಕೆ ಬಳಿದಿರುತ್ತಾರೆ..? ಕೆವಿನ್ ಪೀಟರ್ಸನ್ಗೆ ಈ ಪ್ರಶ್ನೆ ಕಾಡಿದ್ದೇಕೆ..?
- Finance ಬಿಸಿಲ ಬೇಗೆಯಿಂದ ರಕ್ಷಿಸಿಕೊಳ್ಳಲು ಟ್ರಾಫಿಕ್ ಪೊಲೀಸರಿಗೆ ರಿಲಿಫ್: ಬಂತು ಹವಾನಿಯಂತ್ರಿತ ಎಸಿ ಹೆಲ್ಮೆಟ್!
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Sports ಟಿ20 ವಿಶ್ವಕಪ್ ಬಗ್ಗೆ ಸ್ಪಷ್ಟನೆ ಕೇಳಿದ ವಿರಾಟ್ ಕೊಹ್ಲಿ; ಕಹಾನಿ ಮೇ ಟ್ವಿಸ್ಟ್ ನೀಡಿದ ಬಿಸಿಸಿಐ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮುಂಬೈ ಅಪಾರ್ಟ್ ಮೆಂಟ್, 40 ಕೋಟಿ ಆಫರ್ ತಿರಸ್ಕರಿಸಿದ ವಿಜಯ್ ದೇವರಕೊಂಡ.!
ಟಾಲಿವುಡ್ ಸ್ಟಾರ್ ವಿಜಯ್ ದೇವರಕೊಂಡ ಈಗ ನ್ಯಾಷನಲ್ ಸ್ಟಾರ್. ಅರ್ಜುನ್ ರೆಡ್ಡಿ ಸಿನಿಮಾದ ಬಳಿಕ ರಿಲೀಸ್ ಆದ ಗೀತಾ ಗೋವಿಂದಂ ಮತ್ತು ಡಿಯರ್ ಕಾಮ್ರೇಡ್ ಕೂಡ ಕೊಂಚ ಮಟ್ಟಿಗೆ ಎಲ್ಲ ವರ್ಗದ ಪ್ರೇಕ್ಷಕರ ಗಮನ ಸೆಳೆದಿದೆ.
ವಿಜಯ್ ದೇವರಕೊಂಡ ಅವರಿಗೆ ಈ ಹಿಂದೆಯಿಂದಲೂ ಬಾಲಿವುಡ್ ಆಫರ್ ಬರ್ತಿದೆ. ಆದರೆ, ಅದ್ಯಾಕೋ ದೇವರಕೊಂಡ ಮಾತ್ರ ಬಿಟೌನ್ ಮೆಟ್ಟಿಲೇರಲು ಒಪ್ಪುತ್ತಿಲ್ಲ.
40 ಕೋಟಿ ಮತ್ತು ಮುಂಬೈನಲ್ಲೊಂದು ಮೆಗಾ ಅಪಾರ್ಟ್ ಮೆಂಟ್ ಆಫರ್ ನೀಡಿದ್ದರೂ 'ಬೇಡ' ಎಂದು ನಿರಾಕರಿಸಿದ್ದಾರಂತೆ. ಹೌದು, ಬಾಲಿವುಡ್ ಸ್ಟಾರ್ ನಿರ್ಮಾಪಕ ಕರಣ್ ಜೋಹರ್, ದೇವರಕೊಂಡ ಅವರನ್ನ ಹಿಂದಿ ಚಿತ್ರರಂಗದಲ್ಲಿ ಪರಿಚಯಿಸುವ ಆಸಕ್ತಿ ತೋರಿದ್ದರಂತೆ. 'ಡಿಯರ್ ಕಾಮ್ರೇಡ್' ಚಿತ್ರದ ಹಿಂದಿ ರೀಮೇಕ್ ಚಿತ್ರಕ್ಕಾಗಿ ಸ್ವತಃ ದೇವರಕೊಂಡ ಅವರನ್ನೇ ಕರೆತರುವ ಪ್ಲಾನ್ ಮಾಡಿದ್ದರಂತೆ.
'ವಿಜಯ್ ಜೊತೆ ಸಿನಿಮಾ ಬೇಡ' ಎಂದಿದ್ದ ರಶ್ಮಿಕಾ ತಾಯಿ 'ಕಾಮ್ರೇಡ್' ನೋಡಿ ಏನಂದ್ರು?
ಇದಕ್ಕಾಗಿ ದೇವರಕೊಂಡಗೆ 40 ಕೋಟಿ ಆಫರ್ ನೀಡಿದ್ದರಂತೆ. ಬಟ್, ಈ ಅವಕಾಶವನ್ನ ವಿಜಯ್ ತಿರಸ್ಕರಿಸಿದ್ದಾರೆ. ಈ ಹಿಂದೆ 'ಅರ್ಜುನ್ ರೆಡ್ಡಿ' ಸಿನಿಮಾ ಬಂದಾಗಲೂ ಕರಣ್ ಜೋಹರ್ ಇಂತಹ ಪ್ರಯತ್ನ ಮಾಡಿದ್ದರು. ಮುಂಬೈನಲ್ಲಿ ದುಬಾರಿ ಅಪಾರ್ಟ್ ಮೆಂಟ್ ಆಫರ್ ನೀಡಲಾಗಿತ್ತು. ಆಗಲೂ ವಿಜಯ್ ದೇವರಕೊಂಡ ಆಗಲ್ಲ ಎಂದಿದ್ದರು.
ವಿಜಯ್ ದೇವರಕೊಂಡಗೆ ಹೇರ್ ಸ್ಟೈಲ್ ಮಾಡಿದ ರಶ್ಮಿಕಾ ಮಂದಣ್ಣ
ಒಮ್ಮೆ ನಟಿಸಿದ ಪಾತ್ರದಲ್ಲಿ ಮತ್ತೊಮ್ಮೆ ನಟಿಸಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ, ಅರ್ಜುನ್ ರೆಡ್ಡಿ ರೀಮೇಕ್ ಮತ್ತು ಡಿಯರ್ ಕಾಮ್ರೇಡ್ ರೀಮೇಕ್ ನಲ್ಲಿ ನಟಿಸಲು ವಿಜಯ್ ಒಪ್ಪಲಿಲ್ಲವಂತೆ. ಅರ್ಜುನ್ ರೆಡ್ಡಿ ರೀಮೇಕ್ ನಲ್ಲಿ ಶಾಹೀದ್ ಕಪೂರ್ ನಟಿಸಿದರು. ಸದ್ಯ, 'ಡಿಯರ್ ಕಾಮ್ರೇಡ್' ರೀಮೇಕ್ ಚಿತ್ರದಲ್ಲಿ ದಢಕ್ ಸಿನಿಮಾ ಖ್ಯಾತಿಯ ಜಾಹ್ನವಿ ಕಪೂರ್ ಮತ್ತು ಇಶಾನ್ ಕತ್ತಾರ್ ನಟಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.