twitter
    For Quick Alerts
    ALLOW NOTIFICATIONS  
    For Daily Alerts

    ಬೆಂಗಳೂರಿಗೆ ಬಂದಿದ್ದ ವಿಜಯ ದೇವರಕೊಂಡ ರಕ್ಷಿತ್, ರಶ್ಮಿಕಾ ಬಗ್ಗೆ ಹೀಗಂದ್ರು!

    |

    Recommended Video

    ರಶ್ಮಿಕಾಗೆ ಮುತ್ತು ಕೊಟ್ಟ ಬಗ್ಗೆ ವಿಜಯ್ ಹೇಳಿದ್ದೇನು..? | Filmibeat Kannada

    ಸ್ಯಾಂಡಲ್ ವುಡ್ ನ ಕಿರಿಕ್ ಜೋಡಿ ಎಂದೇ ಫೇಮಸ್ ಆಗಿದ್ದ ನಟ ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ನಡುವೆ ಬಿರುಕು ಮೂಡಿರುವ ಸಂಗತಿ ಎಲ್ಲರಿಗೆ ತಿಳಿದಿದೆ. ಈ ಪ್ರೇಮ ಪಕ್ಷಗಳು ಆಕಾಶದಲ್ಲಿ ಹಾರುವ ಸಮಯಕ್ಕೆ ಬ್ರೇಕ್ ಅಪ್ ಎಂಬ ಕಲ್ಲು ಬಿದ್ದಿದೆ.

    ರಕ್ಷಿತ್ ಹಾಗೂ ರಶ್ಮಿಕಾ ಇಬ್ಬರು ಬೇರೆ ಬೇರೆ ಆಗುವುದಕ್ಕೆ ಸೂಕ್ತ ಕಾರಣ ಏನು? ಎಂಬುದು ಯಾರಿಗೂ ತಿಳಿದಿಲ್ಲ. ಆದರೆ, ಇಷ್ಟೆಲ್ಲ ರಾದ್ಧಾಂತ ಮೊದಲು ಶುರು ಆಗಿದ್ದು 'ಗೀತಾ ಗೋವಿಂದಂ' ಸಿನಿಮಾದ ಕಿಸ್ಸಿಂಗ್ ದೃಶ್ಯದಿಂದ ಎನ್ನುವ ಗಾಸಿಪ್ ಒಂದು ಕಡೆ ಇದೆ. ಹಾಗಾದ್ರೆ, ಅದು ನಿಜಾನಾ ಈ ಬಗ್ಗೆ ಈಗ ನಟ ವಿಜಯ್ ದೇವರಕೊಂಡ ಮಾತನಾಡಿದ್ದಾರೆ.

    ಕೊನೆಗೂ 'ಬ್ರೇಕ್ ಅಪ್' ಸುದ್ದಿ ಬಗ್ಗೆ ಮಾತನಾಡಿದ ನಟ ರಕ್ಷಿತ್ ಶೆಟ್ಟಿ!ಕೊನೆಗೂ 'ಬ್ರೇಕ್ ಅಪ್' ಸುದ್ದಿ ಬಗ್ಗೆ ಮಾತನಾಡಿದ ನಟ ರಕ್ಷಿತ್ ಶೆಟ್ಟಿ!

    ಸದ್ಯ, ರಕ್ಷಿತ್ ಹಾಗೂ ರಶ್ಮಿಕಾ ಬಗ್ಗೆ ತೆಲುಗು ನಟ ವಿಜಯ್ ದೇವರಕೊಂಡ ಹೇಳಿಕೆ ನೀಡಿದ್ದಾರೆ. ಅವರಿಬ್ಬರ ಬ್ರೇಕ್ ಅಪ್ ಗೆ ಸಿನಿಮಾದ ಈ ದೃಶ್ಯ ಕಾರಣವಾಯ್ತಾ? ಎನ್ನುವ ಪ್ರಶ್ನೆಗೆ ಅವರು ಮೊದಲ ಬಾರಿಗೆ ಉತ್ತರ ನೀಡಿದ್ದಾರೆ. ಮುಂದೆ ಓದಿ...

    ಬೆಂಗಳೂರಿಗೆ ಬಂದಿದ್ದ ವಿಜಯ್ ದೇವರಕೊಂಡ

    ಬೆಂಗಳೂರಿಗೆ ಬಂದಿದ್ದ ವಿಜಯ್ ದೇವರಕೊಂಡ

    ನಿನ್ನೆ ತೆಲುಗು ನಟ ವಿಜಯ್ ದೇವರಕೊಂಡ‌ ತಮ್ಮ 'ನೋಟ' ಸಿನಿಮಾದ ಪ್ರಚಾರಕ್ಕಾಗಿ ಬೆಂಗಳೂರಿಗೆ ಬಂದಿದ್ದರು. ಈ ಸುದ್ದಿಗೋಷ್ಠಿ ಕಾರ್ಯಕ್ರಮದಲ್ಲಿ ವಿಜಯ್ ಗೆ ರಶ್ಮಿಕಾ ಬ್ರೇಕ್ ಅಪ್ ಪ್ರಶ್ನೆ ಕೂಡ ತೇಲಿ ಬಂತು. ಸೊ, ಇಷ್ಟ ಇಲ್ಲದ್ದರೂ ವಿಜಯ್ ಉತ್ತರ ನೀಡಲು ಮುಂದಾದರು.

    ರಶ್ಮಿಕಾ ಒಬ್ಬ ಅದ್ಭುತ ಸಹ ನಟಿ

    ರಶ್ಮಿಕಾ ಒಬ್ಬ ಅದ್ಭುತ ಸಹ ನಟಿ

    "ರಶ್ಮಿಕಾ ಒಬ್ಬ ಅದ್ಭುತ ಸಹ ನಟಿ. 'ಗೀತಾ ಗೋವಿಂದಂ' ಸಿನಿಮಾದಲ್ಲಿ ನಾಯಕಿ ಪಾತ್ರಕ್ಕೆ ತುಂಬ ಪ್ರಾಮುಖ್ಯತೆ ಇತ್ತು. ರಶ್ಮಿಕಾ ಬ್ರಿಲಿಯಂಟ್ ಆಗಿ ಚಿತ್ರದಲ್ಲಿ ನಟಿಸಿದ್ದಾರೆ. ಕೆಲವೇ ಕೆಲವು ಸಿನಿಮಾದಲ್ಲಿ ಮಾತ್ರ ಹೀರೋಯಿನ್ ಹೆಸರನ್ನು ಚಿತ್ರದ ಪೋಸ್ಟರ್ ನಲ್ಲಿ ಹಾಕಲಾಗುತ್ತದೆ. ಆದರೆ, 'ಗೀತಾ ಗೋವಿಂದಂ' ಚಿತ್ರದಲ್ಲಿ ನನ್ನ ಹೆಸರಿನ ಜೊತೆಗೆ ರಶ್ಮಿಕಾ ಮಂದಣ್ಣ starting ಎಂದು ಅವರ ಹೆಸರು ಕೂಡ ಇತ್ತು'' - ವಿಜಯ ದೇವರಕೊಂಡ, ನಟ

    ''ಇಲ್ಲಿ ತಲೆ ಹೋಗುವಂತದ್ದು ಏನು ಇಲ್ಲ'' ರಶ್ಮಿಕಾ ತಾಯಿಯ ನೇರ ನುಡಿಗಳು! ''ಇಲ್ಲಿ ತಲೆ ಹೋಗುವಂತದ್ದು ಏನು ಇಲ್ಲ'' ರಶ್ಮಿಕಾ ತಾಯಿಯ ನೇರ ನುಡಿಗಳು!

     I love Rakshith's work

    I love Rakshith's work

    "ಕಿಸ್ಸಿಂಗ್ ದೃಶ್ಯ ಲೀಕ್ ಆಗಿದ್ದು, ನನಗೂ ಬೇಸರ ತಂದಿರುವ ಸಂಗತಿ. ಇದರಿಂದ ಯಾವ ರೀತಿಯ ತೊಂದರೆ ಆಗುತ್ತದೆ ಎನ್ನುವುದು ನನಗೆ ತಿಳಿದಿದೆ. ಇಬ್ಬರು ವ್ಯಕ್ತಿಗಳ ವೈಯಕ್ತಿಕ ವಿಚಾರದ ಬಗ್ಗೆ ನಾನು ಮಾತನಾಡುವುದು ಸೂಕ್ತವಲ್ಲ. ಅವರಿಬ್ಬರನ್ನು ನಾನು ಗೌರವಿಸುತ್ತೇನೆ. I love Rakshith's work, i love Rashmika as a co star." - ವಿಜಯ ದೇವರಕೊಂಡ, ನಟ

    ಈ ಬಗ್ಗೆ ಮಾತನಾಡಲು ನಾನು ಮೂರನೇಯ ವ್ಯಕ್ತಿ

    ಈ ಬಗ್ಗೆ ಮಾತನಾಡಲು ನಾನು ಮೂರನೇಯ ವ್ಯಕ್ತಿ

    "ರಕ್ಷಿತ್ ಹಾಗೂ ರಶ್ಮಿಕಾ ನಡುವಿನ ಘಟನೆಯ ಬಗ್ಗೆ ಮಾತನಾಡಲು ನಾನು ಮೂರನೇಯ ವ್ಯಕ್ತಿ. ಅವರಿಗೆ ಈ ಸುದ್ದಿಗಳಿಂದ ಎಷ್ಟು ನೋವಾಗುತ್ತದೆ ಎನ್ನುವ ಅರಿವು ನನಗೆ ಇದೆ. ಅವರನ್ನು ಅವರ ಪಾಡಿಗೆ ಸ್ಪಲ್ಪ ಬಿಡಿ. ಅವರ ಭಾವನೆ ಮತ್ತು ನೋವುಗಳು ಬೇರೆಯವರ ಮನರಂಜನೆ ಆಗಬಾರದು.'' - ವಿಜಯ ದೇವರಕೊಂಡ, ನಟ

    ನಾಳೆ 'ನೋಟ' ಬಿಡುಗಡೆ

    ನಾಳೆ 'ನೋಟ' ಬಿಡುಗಡೆ

    ವಿಜಯ ದೇವರಕೊಂಡ ಅವರ 'ನೋಟ' ಸಿನಿಮಾ ನಾಳೆ ಬಿಡುಗಡೆಯಾಗುತ್ತಿದೆ. ಈ ಚಿತ್ರದ ಸುದ್ದಿಗೋಷ್ಟಿ ಕಾರ್ಯಕ್ರಮ ನಿನ್ನೆ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ನಡೆದಿದೆ. ನಟ ಶಿವರಾಜ್ ಕುಮಾರ್ ಹಾಗೂ ನಿರ್ಮಾಪಕ ರಾಜ್ ಲೈನ್ ವೆಂಕಟೇಶ್ ಈ ಕಾರ್ಯಕ್ರಮದಲ್ಲಿ ವಿಜಯ್ ಗೆ ಸಾಥ್ ನೀಡಿದ್ದಾರೆ.

    English summary
    Telugu actor Vijay Devarakonda spoke about Rakshith Shetty and Rashmika Mandanna's break up controversy.
    Thursday, October 4, 2018, 13:00
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X