Don't Miss!
- News Lok Sabha Election 2024: ಈ 6 ಜಿಲ್ಲೆಗಳಲ್ಲಿ 0% ಮತದಾನ-ಎಲ್ಲಿ ಹಾಗೂ ಕಾರಣ ಏನು?
- Automobiles ಟಿವಿಎಸ್ ಐಕ್ಯೂಬ್ಗೆ ನಡುಕ ಶುರು!: ಸದ್ಯದಲ್ಲೇ ಕಡಿಮೆ ಬೆಲೆ ಮಾರುಕಟ್ಟೆಗೆ ಬಜಾಜ್ ಚೇತಕ್ ಎಲೆಕ್ಟ್ರಿಕ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Lifestyle 5 ನಿಮಿಷದಲ್ಲಿ ಪಾತ್ರೆಯನ್ನು ಹೊಳೆಯುವಂತೆ ಮಾಡಿ..! ಸುಲಭದ ಟಿಪ್ಸ್ ಇಲ್ಲಿದೆ
- Sports LSG vs CSK IPL 2024: ಲಕ್ನೋ vs ಚೆನ್ನೈ ಪಂದ್ಯದ ವರದಿ, ಫ್ಯಾಂಟಸಿ ಡ್ರೀಮ್ ಟೀಂ, ಸಂಭಾವ್ಯ ಆಡುವ 11ರ ಬಳಗ
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಕೆಜಿಎಫ್' ಸಿನಿಮಾಗೂ ಕಮಲ್ ಹಾಸನ್ ಗೂ ಸಂಬಂಧ ಇದ್ಯಾ?
Recommended Video
ರಾಕಿಂಗ್ ಸ್ಟಾರ್ ನಟನೆಯ 'ಕೆಜಿಎಫ್' ಸಿನಿಮಾ ಬಿಡುಗಡೆಗೆ ನಾಲ್ಕೆ ನಾಲ್ಕು ದಿನ ಬಾಕಿ ಇದೆ. ಈಗಾಗಲೇ ಮೊದಲ ದಿನದ ಟಿಕೆಟ್ ಬಹುತೇಕ ಸೋಲ್ಡ್ ಔಟ್ ಆಗಿದೆ. ಮೊದಲ ದಿನ ಮೊದಲ ಶೋ ಸಿನಿಮಾ ನೋಡಬೇಕು ಎಂದು ಅನೇಕರು ಸಾಹಸ ಪಡುತ್ತಿದ್ದಾರೆ.
ಒಂದು ಟಿಕೆಟ್ ವಿಷಯವಾದರೆ, ಇನ್ನೊಂದು ಕಡೆ ಸಿನಿಮಾದ ಪೈರಸಿ ಬಗ್ಗೆ ದೊಡ್ಡ ಸುದ್ದಿಯಾಗಿದೆ. ಆದರೆ, ಚಿತ್ರತಂಡ ನಮ್ಮ ಸಿನಿಮಾ ಲೀಕ್ ಆಗಿಲ್ಲ ಎಂದು ಸ್ಪಷ್ಟಪಡಿಸಿದೆ. ಇವೆಲ್ಲವುಗಳ ನಡುವೆ ಈಗ ಸಿನಿಮಾದ ಬಗ್ಗೆ ಮತ್ತೊಂದು ಗೊಂದಲ ಸೃಷ್ಟಿಯಾಗಿದ್ದು, ಇದಕ್ಕೂ ಉತ್ತರ ಸಿಕ್ಕಿದೆ.
ಸಿನಿಮಾ ನೋಡುವ ಮೊದಲು 'ಕೆಜಿಎಫ್' ತಂಡದ ಕೋರಿಕೆ ಕೇಳಿ
ಚಿತ್ರದ ನಿರ್ಮಾಪಕ ವಿಜಯ್ ಕಿರಗಂದೂರು ಮಾಡಿರುವ ಟ್ವೀಟ್ ನೋಡಿ ಕೆಲವರು ನಟ ಕಮಲ್ ಹಾಸನ್ ಅವರಿಗೂ, ಈ ಸಿನಿಮಾಗೂ ಸಂಬಂಧ ಇದ್ಯಾ? ಎಂದು ಕೇಳುತ್ತಿದ್ದರು.ಆದರೆ, ಇಂತಹ ಗೊಂದಲಕ್ಕೆ ಈಗ ಸ್ಪಷ್ಟತೆ ಸಿಕ್ಕಿದೆ. ಅಂದಹಾಗೆ, ಆ ವಿವರ ಮುಂದಿದೆ ಓದಿ...
|
ವಿಜಯ್ ಕಿರಗಂದೂರು ಟ್ವೀಟ್
ನಿನ್ನೆ 'ಕೆಜಿಎಫ್' ಸಿನಿಮಾದ ನಿರ್ಮಾಪಕ ವಿಜಯ್ ಕಿರಗಂದೂರು ಒಂದು ಟ್ವೀಟ್ ಮಾಡಿದ್ದರು. ''ಕೆಜಿಎಫ್' ಸಿನಿಮಾದ ಹಿಂದೆ ನಾಲ್ಕು ವರ್ಷದ ಶ್ರಮ ಇದೆ. ಈ ಸಿನಿಮಾಗೆ ನಿಮ್ಮ ಪೂರ್ಣ ಪ್ರೋತ್ಸಾಹ ಬೇಕು. ಯಾರಾದರೂ, ಪೈರಸಿ ಮಾಡಿಸಿದರೆ ಗಮನಕ್ಕೆ ತನ್ನಿ'' ಎಂದು ಹೇಳಿದ್ದರು.
ಕಮಲ್ ಗಮನಕ್ಕೆ ತಂದ ನಿರ್ಮಾಪಕರು
ನಿರ್ಮಾಪಕ ವಿಜಯ್ ಕಿರಗಂದೂರು ಮಾಡಿರುವ ಟ್ವೀಟ್ ನಲ್ಲಿ ಚಿತ್ರಕ್ಕೆ ಸಂಬಂಧಪಟ್ಟ ಕೆಲವರ ಟ್ವಿಟ್ಟರ್ ಖಾತೆಯ ಹ್ಯಾಂಡಲ್ ಹಾಕಲಾಗಿದೆ. ನಟ ಯಶ್, ನಾಯಕಿ ಶ್ರೀನಿಧಿ ಶೆಟ್ಟಿ, ತಮ್ಮ ಹೊಂಬಾಳೆ ಸಂಸ್ಥೆ, ನಿರ್ದೇಶಕ ಪ್ರಶಾಂತ್ ನೀಲ್, ಹಿಂದಿ, ತೆಲುಗು, ತಮಿಳು, ಮಲೆಯಾಳಂ ಭಾಷೆಯ ವಿತರಕರ ಸಂಸ್ಥೆಯ ಟ್ವಿಟ್ಟರ್ ಹ್ಯಾಂಡಲ್ ಗಳನ್ನು ಹಾಕಿದ್ದಾರೆ. ಇವುಗಳ ಜೊತೆಗೆ ಕಮಲ್ ಹಾಸನ್ ಖಾತೆ ಕೂಡ ಸೇರಿಕೊಂಡಿದೆ.
ಏನು.. ಆನ್ ಲೈನ್ ನಲ್ಲಿ 'ಕೆ.ಜಿ.ಎಫ್' ಚಿತ್ರ ಲೀಕ್ ಆಗಿದ್ಯಂತೆ.! ಹೌದಾ.?
ಪೈರಸಿ ವಿರುದ್ಧ ಹೋರಾಟ ಮಾಡಿದ್ದ ನಟ
ನಟ ಕಮಲ್ ಹಾಸನ್ ಹಾಗೂ ಕನ್ನಡದ 'ಕೆಜಿಎಫ್' ಸಿನಿಮಾಗೆ ಯಾವುದೇ ಲಿಂಕ್ ಇಲ್ಲ. ಆದರೆ, ಕಮಲ್ ಹಾಸನ್ ತಮ್ಮ 'ವಿಶ್ವರೂಪಂ 2' ಸಿನಿಮಾ ಬಂದಾಗ ಪೈರಸಿ ಬಗ್ಗೆ ದೊಡ್ಡ ಹೋರಾಟ ಮಾಡಿದ್ದರು. ಈ ಕಾರಣ ವಿಜಯ್ ಕಿರಗಂದೂರು ಟ್ವೀಟ್ ಮಾಡಿ 'ಕೆಜಿಎಫ್' ಪೈರಸಿ ಆಗಬಾರದು ಎಂಬ ವಿಷಯವನ್ನ ಅವರ ಗಮನಕ್ಕೆ ತಂದಿದ್ದಾರೆ.
ಶ್ರಮವನ್ನು ಗೌರವಿಸಿ
ಒಂದು ಸಿನಿಮಾದ ಹಿಂದೆ ಅದೆಷ್ಟೋ ಜನರ ಶ್ರಮ ಇರುತ್ತದೆ. ಅದರಲ್ಲಿಯೂ 'ಕೆಜಿಎಫ್' ರೀತಿಯ ದೊಡ್ಡ ಸಿನಿಮಾದ ಮಾಡುವುದು ಸಣ್ಣ ಮಾತಲ್ಲ. ಇಡೀ ಭಾರತದಲ್ಲಿ ಕನ್ನಡ ಚಿತ್ರವನ್ನ ಪ್ರತಿನಿಧಿಸುತ್ತಿರುವ ಈ ಸಿನಿಮಾವನ್ನು ಪೈರಸಿ ಮಾಡಬೇಡಿ. ಇಡೀ ತಂಡದ ಶ್ರಮಕ್ಕೆ ಗೌರವ ನೀಡಿ ಎನ್ನುವುದು ತಮ್ಮ ಮನವಿ.