Don't Miss!
- News ‘ಸೋಲಿನ ಭೀತಿಯಿಂದ ಕಮಲ-ದಳ ಮೈತ್ರಿ; ರಾಜ್ಯದ 25 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು’
- Automobiles ಆಕರ್ಷಕ ಯಮಹಾ ಏರಾಕ್ಸ್ 155 ವರ್ಷನ್ ಎಸ್ ಸ್ಕೂಟರ್ ಬಿಡುಗಡೆ
- Finance BMRCL: ಚಲ್ಲಘಟ್ಟ ನಮ್ಮ ಮೆಟ್ರೋ ನಿಲ್ದಾಣದಲ್ಲಿ ಹೊಸ ಪಾದಚಾರಿ ಸೇತುವೆ
- Technology ವಿವೋ T3x 5G ಫೋನಿನ ಫಸ್ಟ್ ಸೇಲ್ ಯಾವಾಗ?..ಆಫರ್ ಬೆಲೆ ಎಷ್ಟು?
- Lifestyle ಮೊದಲ ಯತ್ನದಲ್ಲೇ ಯುಪಿಎಸ್ಸಿ ಪಾಸ್..! ಸ್ಫೂರ್ತಿಯಾಗಿದ್ದು ವಿರಾಟ್..!
- Sports ಟಿ20 ವಿಶ್ವಕಪ್ ಬಗ್ಗೆ ಸ್ಪಷ್ಟನೆ ಕೇಳಿದ ವಿರಾಟ್ ಕೊಹ್ಲಿ; ಕಹಾನಿ ಮೇ ಟ್ವಿಸ್ಟ್ ನೀಡಿದ ಬಿಸಿಸಿಐ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಮಹರ್ಷಿ' ಚಿತ್ರದಲ್ಲಿ ವಿಜಯ್ ಪ್ರಕಾಶ್ ಹಾಡಿರುವ ಹಾಡು ಸೂಪರ್ ಹಿಟ್
Recommended Video
ತೆಲುಗು ಸ್ಟಾರ್ ನಟ ಮಹೇಶ್ ಬಾಬು ಅಭಿನಯದ ಮಹರ್ಷಿ ಸಿನಿಮಾ ಕಳೆದ ವಾರ ಬಿಡುಗಡೆಯಾಗಿದ್ದು, ಎಲ್ಲರಿಂದಲೂ ಮೆಚ್ಚುಗೆ ಪಡೆದುಕೊಂಡಿದೆ. ಪ್ರಿನ್ಸ್ ಅಭಿನಯ, ಚಿತ್ರದ ಕಾನ್ಸೆಪ್ಟ್ ವಿಚಾರಕ್ಕೆ ಶಬ್ಬಾಶ್ ಎನಿಸಿಕೊಳ್ಳುತ್ತಿರುವ ಈ ಸಿನಿಮಾ ಹಾಡಿನ ವಿಚಾರದಲ್ಲೂ ಗಮನ ಸೆಳೆದಿದೆ.
ಅದರಲ್ಲೂ ಕನ್ನಡದ ಗಾಯಕ ವಿಜಯ್ ಪ್ರಕಾಶ್ ಹಾಡಿರುವ ಹಾಡೊಂದು ಸಖತ್ ಸದ್ದು ಮಾಡ್ತಿದೆ. ಕೇಳುಗರ ಮನಕ್ಕೆ ಖುಷಿ ಕೊಡ್ತಿದೆ. 'ಓಹ್...ವಿಜಯ್ ಪ್ರಕಾಶ್ ಹಾಡಿರೋ ಹಾಡಾ ಇದು....ಅದಕ್ಕೆ ಸೂಪರ್ ಆಗಿದೆ' ಎಂಬ ಮಾತುಗಳು ಕೇಳಿ ಬರುತ್ತಿದೆ.
ಹೌದು, ದೇವಿಶ್ರೀ ಪ್ರಸಾದ್ ಸಂಗೀತ ನಿರ್ದೇಶನ ಹೊಂದಿರುವ ಮಹರ್ಷಿ ಚಿತ್ರದಲ್ಲಿ 'ಇದೇ ಕದ ನೀ ಕಥಾ.....' ಎಂಬ ಹಾಡನ್ನ ವಿಜಯ್ ಪ್ರಕಾಶ್ ಹಾಡಿದ್ದಾರೆ.
ಸ್ಫೂರ್ತಿಯಾಯ್ತು 'ಮಹರ್ಷಿ' ಚಿತ್ರದ 'ವಾರಾಂತ್ಯದ ವ್ಯವಸಾಯ' ಕಾನ್ಸೆಪ್ಟ್
ಕಥೆಗೆ ಅನುಸಾರವಾಗಿ ಈ ಹಾಡು ಚಿತ್ರದಲ್ಲಿ ಬರಲಿದ್ದು, ಅದಕ್ಕೆ ತಕ್ಕಂತೆ ಕೊರಿಯೋಗ್ರಫಿ ಮಾಡಲಾಗಿದೆ. ಅದಕ್ಕೆ ಈ ಹಾಡು ಕೇಳುವುದಕ್ಕೂ ಹಾಗೂ ಬೆಳ್ಳಿತೆರೆಯ ಮೇಲೆ ನೋಡುವುದಕ್ಕೂ ತುಂಬಾ ಇಷ್ಟ ಆಗುತ್ತೆ.ಯಜಮಾನ ಸಿನಿಮಾ ಟೈಟಲ್ ಹಾಡು 'ಬಂದ ನೋಡೋ ಯಜಮಾನ....', ರಾಜಕುಮಾರ ಚಿತ್ರದ 'ಬೊಂಬೆ ಹೇಳುತೈತೆ....' ಹಾಡು, ಬಂಗಾರ ಸನ್ ಆಫ್ ಬಂಗಾರದ ಮನುಷ್ಯ ಚಿತ್ರದ 'ಒಂದಾನೊಂದು ಊರಲ್ಲಿ.....' ಹಾಡುಗಳಂತೆ ಮಹರ್ಷಿ ಚಿತ್ರದ 'ಇದೇ ಕದ ನೀ ಕಥಾ.....' ಹಾಡು ಮೂಡಿಬಂದಿದೆ.
ಅಲ್ಲಿ ಮಹೇಶ್ ಬಾಬು, ಇಲ್ಲಿ ದರ್ಶನ್ ಮತ್ತು ಶಿವಣ್ಣ
ಇನ್ನುಳಿದಂತೆ ಶ್ರೀಮಣಿ ಈ ಹಾಡಿಗೆ ಸಾಹಿತ್ಯ ಬರೆದಿದ್ದು, ವಂಶಿ ಚಿತ್ರವನ್ನ ನಿರ್ದೇಶನ ಮಾಡಿದ್ದಾರೆ. ಮಹೇಶ್ ಬಾಬು, ಪೂಜಾ ಹೆಗ್ಡೆ, ಅಲ್ಲರಿ ನರೇಶ್, ಜಗಪತಿ ಬಾಬು ಸೇರಿದಂತೆ ಹಲವು ನಟಿಸಿದ್ದಾರೆ. ಅಂದ್ಹಾಗೆ, ವಿಜಯ್ ಪ್ರಕಾಶ್ ತೆಲುಗಿನಲ್ಲಿ ಹಾಡಿರುವ ಮೊದಲ ಹಾಡು ಇದಲ್ಲ. ಅನೇಕ ಹಾಡುಗಳನ್ನ ಹಾಡಿದ್ದಾರೆ.