Don't Miss!
- Lifestyle ಯಾವ ದಿಕ್ಕಿಗೆ ತಲೆ ಇಟ್ಟು ಮಲಗಬಾರದು..? ಹಿರಿಯರು ಈ ರೀತಿ ಹೇಳೋದೇಕೆ.?
- Sports RCB vs KKR: ಗೇಮ್ ಚೇಂಜರ್ ಆಗಬಹುದು ಈ ಪ್ಲೇಯರ್ಸ್; ಈ ಆಟಗಾರರ ಮೇಲೆ ಕಣ್ಣು
- News Acid Attack: ಆಸ್ತಿ ವಿವಾದ: ಮಗನ ಮೇಲೆ 'ಆಸಿಡ್' ಎರಚಿದ ತಂದೆ
- Automobiles ಜೀವದ ಗೆಳೆಯನಿಗೆ ಸರ್ಪ್ರೈಸ್ ಆಗಿ 'ಬೈಕ್' ಉಡುಗೊರೆ ನೀಡಿದ ವಧು.. ಆತನ ಸಂತೋಷಕ್ಕೆ ಪಾರವೇ ಇರಲಿಲ್ಲ!
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Technology ಬಜೆಟ್ ದರದಲ್ಲಿ ಬೆಸ್ಟ್ 5G ಫೋನ್ ಬೇಕಿದ್ರೆ, ಈ ಲಿಸ್ಟ್ ಒಮ್ಮೆ ಗಮನಿಸಿ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಎರಡು ಕನಸು'ಗೆ ಮಿಡಿದ ವಿಜಯ್ ರಾಘವೇಂದ್ರ ಮನಸ್ಸು
ಎಪ್ಪತ್ತರ ದಶಕದಲ್ಲಿ ದೊರೈ-ಭಗವಾನ್ ಜೋಡಿ ನಿರ್ದೇಶಿಸಿದ ದೃಶ್ಯಕಾವ್ಯ 'ಎರಡು ಕನಸು'. ವಾಣಿ ಅವರ ಅದೇ ಹೆಸರಿನ ಕಾದಂಬರಿ ಆಧಾರಿತ ಈ ಚಿತ್ರದ ಹಾಡುಗಳು ಇಂದಿಗೂ ಮನಸೂರೆಗೊಳ್ಳುವಂತಿವೆ.
ವರನಟ ಡಾ.ರಾಜ್ ಕುಮಾರ್, ಮಂಜುಳಾ, ಕಲ್ಪನಾ ಮುಖ್ಯಭೂಮಿಕೆಯಲ್ಲಿರುವ ಚಿತ್ರಕ್ಕೆ ರಾಜನ್ ನಾಗೇಂದ್ರ ಅವರ ಸಂಗೀತ ಝಲಕ್ ಮರೆಯಲು ಸಾಧ್ಯವೇ? ಬಾಡಿ ಹೋದ ಬಳ್ಳಿಯಿಂದ, ತಮ್ ನಂ ತಮ್ ನಂ, ಇಂದು ಎನಗೆ ಗೋವಿಂದ, ಪೂಜಿಸಲೆಂದೇ ಹೂಗಳ ತಂದೆ, ಎಂದು ನಿನ್ನ ನೋಡುವೆ ಹಾಡುಗಳು ಚಿತ್ರಕ್ಕೆ ವಿಶೇಷ ಮೆರುಗು ತಂದಿವೆ. [ಹೆಸರು ಬದಲಾಯಿಸಿಕೊಂಡ ವಿಜಯ ರಾಘವೇಂದ್ರ]
ಇದೀಗ ಇದೇ ಹೆಸರಿನ ಚಿತ್ರದಲ್ಲಿ ವಿಜಯ್ ರಾಘವೇಂದ್ರ ಅಭಿನಯಿಸುತ್ತಿದ್ದಾರೆ. 'ಕೊಟ್ರೇಶಿ ಕನಸು' ಚಿತ್ರದ ಅಭಿನಯಕ್ಕೆ ರಾಷ್ಟ್ರಪ್ರಶಸ್ತಿ ಪಡೆದ ವಿಜಯ್ ರಾಘವೇಂದ್ರ ಇದೀಗ 'ಎರಡು ಕನಸು' ಕಾಣಲು ಮುಂದಾಗಿದ್ದಾರೆ. ಆದರೆ ಅಂದಿನ 'ಎರಡು ಕನಸು' (1974) ಚಿತ್ರಕ್ಕೂ ಇಂದಿನ ತಮ್ಮ ಚಿತ್ರದ ಕಥೆಗೂ ಯಾವುದೇ ಸಂಬಂಧವಿಲ್ಲ ಎನ್ನುತ್ತದೆ ಚಿತ್ರತಂಡ. [ಸ್ಯಾಂಡಲ್ ವುಡ್ ಮಹಾ ಚುನಾವಣೆ 2014 - ನಿಮ್ಮ ಮತ ಯಾರಿಗೆ?]
ಇದೊಂದು ಪಕ್ಕಾ ಲವ್ ಸ್ಟೋರಿ ಕಮ್ ಕೌಟುಂಬಿಕ ಕಥೆಯಾಧಾರಿತ ಚಿತ್ರ ಎನ್ನುತ್ತಾರೆ ವಿಜಯ್ ರಾಘವೇಂದ್ರ. ಇದೇ ಮೊದಲ ಬಾರಿಗೆ ಮದನ್ ಎಂಬುವವರು ಆಕ್ಷನ್ ಕಟ್ ಹೇಳುತ್ತಿರುವ ಚಿತ್ರ. ಆಕಾಶ್ ಸ್ಟುಡಿಯೋದಲ್ಲಿ ಹಾಡಿನ ಧ್ವನಿಮುದ್ರಣದ ಮೂಲಕ ಚಿತ್ರಕ್ಕೆ ಚಾಲನೆ ನೀಡಲಾಗಿದೆ.