Don't Miss!
- Sports CSK vs LSG IPL 2024: ಐಪಿಎಲ್ನಲ್ಲಿ ಈ ದಾಖಲೆ ಮಾಡಿದ ಮೊದಲ ಸಿಎಸ್ಕೆ ನಾಯಕ ರುತುರಾಜ್ ಗಾಯಕ್ವಾಡ್
- News India weather: ಮಳೆಗಾಗಿ ಕಾಯುತ್ತಿದ್ದವರಿಗೆ ಶಾಕ್ ಕೊಟ್ಟ ಹವಾಮಾನ ಇಲಾಖೆ
- Finance ಅಯೋಧ್ಯೆಯಲ್ಲಿ ಓಲಾ ಕ್ಯಾಬ್ ಸೇವೆ ಆರಂಭ
- Lifestyle ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕ್ಷಣ ಮಾತ್ರದಲ್ಲೇ ಅಪಾಯದಿಂದ ಪಾರಾದ ಸಂಚಾರಿ ವಿಜಯ್
Recommended Video
ನಾಯಕನಾಗಿ ಅಭಿನಯಿಸಿದ ಮೊದಲ ಸಿನಿಮಾದಲ್ಲೇ ಸಾಕಷ್ಟು ಪ್ರಶಸ್ತಿಗಳನ್ನ ಪಡೆದುಕೊಂಡ ನಟ ಸಂಚಾರಿ ವಿಜಿ. ನಾನು ಅವನಲ್ಲ ಅವಳು ಸಿನಿಮಾದ ನಂತ್ರ ಸಾಲು ಸಾಲು ಚಿತ್ರಗಳಲ್ಲಿ ತೆರೆ ಮೇಲೆ ಕಾಣಿಸಿಕೊಂಡರು. ಸದ್ಯ ಸಂಚಾರಿ ವಿಜಯ್ ಮಲೆಯಾಳಂನ ಥಿಯೆಟರ್ ಚಿತ್ರದಲ್ಲಿ ಆಕ್ಟ್ ಮಾಡುತ್ತಿದ್ದಾರೆ. ಸಾರುನ್ ಚಿತ್ರವನ್ನ ನಿರ್ದೇಶನ ಮಾಡುತ್ತಿದ್ದಾರೆ.
ಸಂಚಾರಿ ವಿಜಯ್ ಥಿಯೇಟರ್ ಸಿನಿಮಾದ ಚಿತ್ರೀಕರಣದ ವೇಳೆಯಲ್ಲಿ ಅಪಾಘಾತಕ್ಕೆ ಸಿಲುಕಿದ್ದಾರೆ. ಕನ್ಯಾಕುಮಾರಿ ಹತ್ತಿರ ಕೊಲಾಚೆಲ್ ಮುಟ್ಟಂ ಬೀಚ್, ನಲ್ಲಿ ಥಿಯೇಟರ್ ಚಿತ್ರದ ಶೂಟಿಂಗ್ ಮಾಡಲಾಗುತ್ತಿತ್ತು . ನೀರಿಗಿಳಿಯುವ ದೃಶ್ಯವನ್ನ ಚಿತ್ರೀಕರಿಸುವ ಸಂದರ್ಭದಲ್ಲಿ ಸಿನಿಮಾತಂಡದ ಮಾತು ಕೇಳದೆ ನೀರಿಗಿಳಿದ ಸಂಚಾರಿ ವಿಜಿ ಕ್ಷಣ ಮಾತ್ರದಲ್ಲಿ ದುರಂತದಿಂದ ಪಾರಾಗಿದ್ದಾರೆ.
ಸಮುದ್ರದಲ್ಲಿರುವ ಚೂಪಾದ ಕಲ್ಲುಗಳಿಂದ ಗಾಯಗೊಂಡಿರುವ ವಿಜಯ್ ಸದ್ಯ ವಿಶ್ರಾಂತಿ ಪಡೆದುಕೊಳ್ಳುತ್ತಿದ್ದಾರೆ. ಈ ಬಗ್ಗೆ ತಮ್ಮ ಫೇಸ್ ಬುಕ್ ನಲ್ಲಿ ಹೀಗೆ ಬರೆದುಕೊಂಡಿದ್ದಾರೆ "JUST MIS!!! ಒಂದೊಂದ್ಸಾರಿ ಎಷ್ಟು ಉದ್ಘಟತನ ಮಾಡೋಕೋಗ್ತೀನಿ ಅನ್ನೋದಕ್ಕೆ ಈ picture ಸಾಕು, ನೋಡಿ ಇವತ್ತು ಮಲೆಯಾಳಂ ಸಿನಿಮಾ ಚಿತ್ರೀಕರಣ ಮಾಡೋ ಟೈಮಲ್ಲಿ ನಾನಾಗ್ ನಾನೇ ಮಾಡ್ಕೊಂಡ ಯಡವಟ್ಟು. ಡೈರೆಕ್ಟರ್ ಬೇಡ ಅಂದ್ರೂ ತುಂಬಾ ರಿಸ್ಕ್ ತಗೊಂಡು ನೀರಿಗಿಳಿದಿದ್ದರ ಪರಿಣಾಮ".
"ದೇವರ ದಯೆ ಏನೂ ಆಗ್ಲಿಲ್ಲ. ಯಾಕೆ ಈ ಪೋಸ್ಟ್ ಹಾಕಿದ್ದೀನಿ ಅಂದ್ರೆ ನನ್ನಂತ ಕೆಲವ್ರು ಈಥರ risk ಬೇಡ ಅಂದ್ರೂ ಮಾಡೇ ತೀರ್ತೀನಿ ಅಂತಾರೆ ಅಂತವ್ರಿಗೆ ಅರ್ಥ ಆಗ್ಲಿ ಅಂತ ಅಷ್ಟೆ ಹಾಗೇ ನಮ್ಮ ಲಿಮಿಟ್ಸ್ ನಮ್ಗೆ ಗೊತ್ತಿದ್ದರೆ ಒಳ್ಳೆಯದು, ತುಂಬಾ risk ತಗೊಂಡ್ ಕೆಲ್ಸ ಮಾಡ್ತೀನಿ ಅನ್ನೋವ್ರು ಸ್ವಲ್ಪ ಜಾಗೃತರಾಗಿ ಕೆಲಸ ಮಾಡಿ. Life is precious".
ಫೋಟೋಗಳ ಜೊತೆಯಲ್ಲಿ ಈ ರೀತಿ ಸ್ಟೇಟಸ್ ಹಾಕಿರುವ ಸಂಚಾರಿ ವಿಜಿ ನನ್ನ ರೀತಿಯಲ್ಲಿ ನೀವು ಯಾರು ಮಾಡಿಕೊಳ್ಳಬೇಡಿ. ಜೀವನದಲ್ಲಿ ಜೀವನಕ್ಕೆ ಆಪಾಯ ತರುವಂತಹ ಯಾವುದೇ ಕೆಲಸವನ್ನ ಮಾಡಬೇಡಿ ಎಂದು ಮನವಿಯನ್ನೂ ಮಾಡಿದ್ದಾರೆ.