Just In
Don't Miss!
- News
ಬೆಂಗಳೂರಿನಲ್ಲಿ ಭೀತಿ: ಕೊರೊನಾ ಹೆಚ್ಚು ರೆಮ್ಡೆಸಿವಿರ್ ಔಷಧಿ ಕಡಿಮೆ!
- Sports
ಐಪಿಎಲ್ ಇತಿಹಾಸದಲ್ಲಿ ಅಪರೂಪದ ದಾಖಲೆ ಬರೆದ ಆರ್ಸಿಬಿ!
- Automobiles
ಕೊನೆಯ ಆಸೆಯೆಂತೆ ರಾಜಕುಮಾರ ಪ್ರಿನ್ಸ್ ಫಿಲಿಪ್ ಅಂತಿಮ ಯಾತ್ರೆಗೆ ಸಿದ್ದವಾಗಿದೆ ಮಾಡಿಫೈ ಲ್ಯಾಂಡ್ ರೋವರ್
- Finance
ಚಿನ್ನ, ಬೆಳ್ಳಿ ಸ್ವಲ್ಪ ಕುಸಿತ: ಏಪ್ರಿಲ್ 14ರಂದು ಎಲ್ಲೆಡೆ ಬೆಲೆ ಎಷ್ಟಿದೆ?
- Education
SSLC Exams 2021: ಸಿಬಿಎಸ್ಇ ಪರೀಕ್ಷೆ ರದ್ದು ಬೆನ್ನಲ್ಲೇ ಎಸ್ಎಸ್ಎಲ್ಸಿ ಪರೀಕ್ಷೆ ಊಹಾಪೋಹ: ಸುರೇಶ್ ಕುಮಾರ್ ಸ್ಪಷ್ಟನ
- Lifestyle
ನಿಮ್ಮ ಮಗು 10ವರ್ಷ ತಲುಪುವಾಗ ಕಲಿಸಬೇಕಾದ ಜೀವನ ಕೌಶಲ್ಯಗಳಿವು
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಬುರ್ಜ್ ಖಲೀಫಾ ಮೇಲೆ ಕನ್ನಡ ಧ್ವಜ: ಸುದೀಪ್ ಹೇಳಿದ್ದೇನು?
ಕಿಚ್ಚ ಸುದೀಪ್ ಚಿತ್ರರಂಗದಲ್ಲಿ 25 ವರ್ಷ ಪೂರೈಸಿದ ಹಿನ್ನೆಲೆ ಪ್ರಪಂಚ ಅತಿ ಎತ್ತರದ ಕಟ್ಟಡ ಬುರ್ಜ್ ಖಲೀಫಾ ಮೇಲೆ 'ವಿಕ್ರಾಂತ್ ರೋಣ' ಸಿನಿಮಾದ ಟೈಟಲ್ ಲೋಗೋ ಅನಾವರಣಗೊಂಡಿದೆ.
ಸುದೀಪ್ ನಡೆದು ಬಂದ ಹಾದಿಯ ಝಲಕ್ ಸಹ ದುಬೈನ ದೊಡ್ಡ ಕಟ್ಟಡದ ಮೇಲೆ ಪ್ರದರ್ಶನವಾಗಿದೆ. ಸಿನಿಮಾಗಳು, ಪಾತ್ರಗಳು, ಕ್ರಿಕೆಟ್, ಗಾಯನ ಹೀಗೆ ಕಿಚ್ಚನ ಜರ್ನಿಯ ಕುರಿತು ವಿಡಿಯೋ ಕ್ಲಿಪ್ ಬಿತ್ತರಿಸಲಾಯಿತು. ಈ ವಿಡಿಯೋ ನಡುವೆ ಬುರ್ಜ್ ಖಲೀಫಾ ಮೇಲೆ ಕನ್ನಡ ಧ್ವಜ ಹಾರಿದ್ದು ನಿಜಕ್ಕೂ ಕನ್ನಡಿಗರಿಗೆ ರೋಮಾಂಚನ ಉಂಟು ಮಾಡಿತು.
ವಿಶ್ವವಿಖ್ಯಾತ ಕಟ್ಟಡ ಬುರ್ಜ್ ಖಲೀಫಾ ಮೇಲೆ ಘರ್ಜಿಸಿದ 'ವಿಕ್ರಾಂತ್ ರೋಣ'
ಈ ದೃಶ್ಯ ಕಂಡು ಸ್ವತಃ ಸುದೀಪ್ ಅವರು ಒಂದು ಕ್ಷಣ ರೋಮಾಂಚನಗೊಂಡರು. ಬುರ್ಜ್ ಖಲೀಫಾ ಮೇಲೆ ಕನ್ನಡದ ಧ್ವಜ ಬಿತ್ತರವಾದುದ್ದನ್ನು ಕಂಡ ಕಿಚ್ಚ ಸಂತಸ ವ್ಯಕ್ತಪಡಿಸಿದರು. ಕಾರ್ಯಕ್ರಮದ ನಡುವೆ ಮಾತನಾಡಿದ ''ಕರ್ನಾಟಕ ಭಾವುಟ ಪ್ರದರ್ಶಿಸಿದ್ದು ಬಹಳ ಹೆಮ್ಮೆ ಆಯಿತು. ಇದು ನಿಜಕ್ಕೂ ಸರ್ಪ್ರೈಸ್ ನನಗೆ, ತುಂಬಾ ಖುಷಿ ಆಯಿತು'' ಎಂದರು.
2 ಸಾವಿರ ಅಡಿಗೂ ಎತ್ತರ ಕಟ್ಟಡದ ಮೇಲೆ ಕರ್ನಾಟಕದ ಧ್ವಜ ಪ್ರದರ್ಶನವಾಗಿದ್ದಕ್ಕೆ ಕನ್ನಡ ಅಭಿಮಾನಿಗಳು ವಿಕ್ರಾಂತ್ ರೋಣ ಚಿತ್ರತಂಡ ಧನ್ಯವಾದ ಅರ್ಪಿಸಿದ್ದಾರೆ.
ಸುದೀಪ್ 'ವಿಕ್ರಾಂತ್ ರೋಣ' ಬಿಡುಗಡೆ ಯಾವಾಗ? ಕಿಚ್ಚ ಹೇಳಿದ್ದೇನು?
ಕನ್ನಡ ರಾಜ್ಯೋತ್ಸವ ದಿನದಂದು ಕರ್ನಾಟಕದ ಕೆಲವು ಕಡೆ ಕನ್ನಡ ಧ್ವಜ ಹಾರಿಸಲು ವಿರೋಧ ಮಾಡ್ತಾರೆ. ಅಂತಹದ್ರಲ್ಲಿ ಬುರ್ಜ್ ಖಲೀಫಾದಲ್ಲಿ ಕನ್ನಡ ಧ್ವಜ ಹಾರಿದೆ, ಇದು ನಿಜವಾದ ಖುಷಿ ಎಂದು ನೆಟ್ಟಿಗರು ಸಂಭ್ರಮಿಸಿದ್ದಾರೆ.