Don't Miss!
- Lifestyle ಲಿವರ್ ಸಮಸ್ಯೆಯಿದೆ ಎಂದು ಸೂಚಿಸುವ ಲಕ್ಷಣಗಳಿವು, ಕುಟುಂಬಸ್ಥರು ಲಿವರ್ ದಾನ ಮಾಡಿದರೆ ವ್ಯಕ್ತಿಯ ಪ್ರಾಣ ಉಳಿಸಬಹುದು
- News ಲೋಕಸಭಾ ಚುನಾವಣೆ 2024: ಈ ಆರು ಜಿಲ್ಲೆಗಳಲ್ಲಿ ಬಹುತೇಕ ಶೂನ್ಯ ಮತದಾನ; ಕಾರಣವೇನು?
- Sports LSG vs CSK IPL 2024: ಮತ್ತೊಮ್ಮೆ ಧೋನಿ, ಜಡೇಜಾ ಅಬ್ಬರ; ಲಕ್ನೋ ತಂಡಕ್ಕೆ ಸವಾಲಿನ ಗುರಿ ನೀಡಿದ ಸಿಎಸ್ಕೆ
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬುರ್ಜ್ ಖಲೀಫಾ ಸಂಭ್ರಮ ಬಳಿಕ ಮತ್ತೊಂದು ಭರ್ಜರಿ ಸುದ್ದಿ ನೀಡಿದ ಸುದೀಪ್
ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ 3 ಹಾಗೂ ವಿಕ್ರಾಂತ್ ರೋಣ ಚಿತ್ರಗಳು ಶೂಟಿಂಗ್ ಮುಗಿಸಿ ತೆರೆಗೆ ಬರಲು ಸಜ್ಜಾಗಿದೆ. ಭಾರತೀಯ ಚಿತ್ರರಂಗದಲ್ಲಿ 25 ವರ್ಷ ಪೂರೈಸಿದ ಹಿನ್ನೆಲೆ ದುಬೈನ ಬುರ್ಜ್ ಖಲೀಫಾ ಮೇಲೆ ವಿಕ್ರಾಂತ್ ರೋಣ ಟೈಟಲ್ ಟೀಸರ್ ಬಿಡುಗಡೆಯಾಗಿತ್ತು.
Recommended Video
ದುಬೈನಲ್ಲಿ ಬೆಳ್ಳಿ ಸಂಭ್ರಮ ಮುಗಿಸಿ ಬೆಂಗಳೂರಿಗೆ ಬಂದ ನಟ ಸುದೀಪ್ ಮತ್ತೊಂದು ಭರ್ಜರಿ ಸುದ್ದಿ ನೀಡಿದ್ದಾರೆ. 50ಕ್ಕೂ ದೇಶಗಳು ಆರು ಭಾಷೆಯಲ್ಲಿ ವಿಕ್ರಾಂತ್ ರೋಣ ಸಿನಿಮಾ ರಿಲೀಸ್ ಆಗಲಿದೆ. ಹಾಲಿವುಡ್ ಶೈಲಿಯ ಮೇಕಿಂಗ್ ಮೂಲಕ ಥ್ರಿಲ್ ಹುಟ್ಟುಹಾಕಿರುವ ಈ ಚಿತ್ರ ಈಗ ಸ್ಯಾಂಡಲ್ವುಡ್ ಪ್ರೇಕ್ಷಕರಿಗೆ ಖುಷಿಯ ವಿಚಾರ ನೀಡಿದೆ. ಏನದು? ಮುಂದೆ ಓದಿ...
ಕಿಚ್ಚ ಸುದೀಪ್ಗೆ 'ಕನ್ನಡ ಕಲಾತಿಲಕ' ಬಿರುದು ನೀಡಿ ಗೌರವಿಸಿದ ದುಬೈ ಕನ್ನಡಿಗರು
3ಡಿಯಲ್ಲಿ 'ವಿಕ್ರಾಂತ್ ರೋಣ'
ಅನೂಪ್ ಭಂಡಾರಿ ನಿರ್ದೇಶನದ ವಿಕ್ರಾಂತ್ ರೋಣ ಸಿನಿಮಾ ಈಗ 3 ಡಿ ವರ್ಷನ್ನಲ್ಲಿ ತೆರೆಕಾಣಲಿದೆ ಎಂಬ ವಿಚಾರ ಬಹಿರಂಗವಾಗಿದೆ. ಈ ವಿಷಯವನ್ನು ಖುದ್ದು ಸುದೀಪ್ ಅವರೇ ತಿಳಿಸಿದ್ದಾರೆ. ''ವಿಕ್ರಾಂತ್ ರೋಣ 3ಡಿ ವರ್ಷನ್ ಬಿಡುಗಡೆಯಾಗಲಿದೆ. ಅದಕ್ಕೆ ಅಗತ್ಯವಾದ ಕೆಲಸ ನಡೆಯುತ್ತಿದೆ'' ಎಂದು ಭಾನುವಾರ ಸಂಜೆ ಬೆಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಜಾಕ್ ಮಂಜು ನಿರ್ಮಾಣದ ವಿಕ್ರಾಂತ್ ರೋಣ
'ವಿಕ್ರಾಂತ್ ರೋಣ'ದ ಚಿತ್ರದ ಪ್ರಮೋಷನ್ ಇನ್ನೊಂದು ಮಟ್ಟದಲ್ಲಿದೆ. ಪ್ರಪಂಚದ ಅತ್ಯಂತ ಎತ್ತರದ ಕಟ್ಟಡದ ಮೇಲೆ ಟೈಟಲ್ ಲೋಗೋ ಅನಾವರಣ. ಈಗ 3ಡಿ ವರ್ಷನ್ಗೆ ಸಿದ್ಧತೆ. ಜಾಕ್ ಮಂಜು ಅವರ ಧೈರ್ಯ ಮತ್ತು ಸಾಹಸಕ್ಕೆ ಸ್ಯಾಂಡಲ್ವುಡ್ ಬೆರಗಾಗಿ ನೋಡುವಂತಾಗಿದೆ.
'ವಿಕ್ರಾಂತ್ ರೋಣ' ಬಳಿಕ ಸುದೀಪ್ ಮುಂದಿನ ಸಿನಿಮಾ ಯಾವುದು? ಯಾವಾಗ ಆರಂಭವಾಗುತ್ತೆ? ಇಲ್ಲಿದೆ ಮಾಹಿತಿ
3ಡಿ ತಂತ್ರಜ್ಞಾನದ ಚಿತ್ರಗಳು
3ಡಿ ತಂತ್ರಜ್ಞಾನ ಬಳಸಿ ಕನ್ನಡದಲ್ಲಿ ಬಿಡುಗಡೆಯಾಗಿರುವ ಚಿತ್ರಗಳ ಬಹಳ ಕಡಿಮೆ. ಅಂಬರೀಶ್-ಉಪೇಂದ್ರ ನಟಿಸಿದ್ದ ಕಠಾರಿವೀರ ಸುರಸುಂದರಾಂಗಿ ಹಾಗೂ ಮುನಿರತ್ನ ನಿರ್ಮಾಣದಲ್ಲಿ ದರ್ಶನ್ ನಟಿಸಿದ್ದ ಕುರುಕ್ಷೇತ್ರ ಚಿತ್ರಗಳು 3ಡಿ ವರ್ಷನ್ನಲ್ಲಿ ರಿಲೀಸ್ ಆಗಿತ್ತು. ಈ ಚಿತ್ರಗಳ ಬಳಿಕ ವಿಕ್ರಾಂತ್ ರೋಣ ಆ ಹಾದಿಯಲ್ಲಿದೆ.
ಸೆಕೆಂಡ್ ಹಾಫ್ನಲ್ಲಿ ಬಿಡುಗಡೆ!
ಸದ್ಯಕ್ಕೆ ವಿಕ್ರಾಂತ್ ರೋಣ ಸಿನಿಮಾ ಎದುರು ನೋಡುವಂತಿಲ್ಲ. ಸರದಿ ಸಾಲಿನಲ್ಲಿ ಇತರೆ ಸ್ಟಾರ್ ನಟರ ಚಿತ್ರಗಳು ರಿಲೀಸ್ ದಿನಾಂಕ ಘೋಷಣೆ ಮಾಡಿ ಕಾಯುತ್ತಿವೆ. ಮೇ ಅಂತ್ಯದವರೆಗೂ ಡೇಟ್ ಲಾಕ್ ಆಗಿದೆ. ಜುಲೈನಲ್ಲಿ 'ಕೆಜಿಎಫ್-2' ಬರಲಿದೆ. ಏಪ್ರಿಲ್ 29ಕ್ಕೆ 'ಕೋಟಿಗೊಬ್ಬ-3' ರಿಲೀಸ್ ಆಗಲಿದೆ. ಹಾಗ್ನೋಡಿದ್ರೆ ವಿಕ್ರಾಂತ್ ರೋಣ ಸಿನಿಮಾ ವರ್ಷದ ಸೆಕೆಂಡ್ ಹಾಫ್ ಅಂದ್ರೆ ಆಗಸ್ಟ್ ನಂತರ ತೆರೆಗೆ ಬರುವ ಪ್ಲಾನ್ ಮಾಡಬಹದು. ಅಥವಾ ಜೂನ್ ತಿಂಗಳಲ್ಲಿ ಯಾವ ದೊಡ್ಡ ಚಿತ್ರವೂ ಇಲ್ಲದ ಕಾರಣ ಬಂದರೂ ಅಚ್ಚರಿ ಇಲ್ಲ.