Don't Miss!
- News ಬೆಂಗಳೂರಿನಲ್ಲಿ 647 ಎಕರೆಯಲ್ಲಿ ಕೈಗಾರಿಕಾ ಪಾರ್ಕ್ ಸ್ಥಾಪಿಸಲು ಕೆಐಎಡಿಬಿ ಯೋಜನೆ
- Lifestyle ಕಂಡ ಕಂಡಲ್ಲಿ ಏಕೆ ಉಗುಳಬಾರದು ಗೊತ್ತಾ? ಈ ವಿಡಿಯೋ ನೋಡಿ..!
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Sports IPL 2024: ರಾಜಸ್ಥಾನ್ ರಾಯಲ್ಸ್ vs ಡೆಲ್ಲಿ ಕ್ಯಾಪಿಟಲ್ಸ್ ರೋಚಕ ಪಂದ್ಯದ ಟಾಸ್ ವರದಿ, ಆಡುವ 11ರ ಬಳಗ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ವಿಷ್ಣು ಸ್ಮಾರಕಕ್ಕಾಗಿ ಉಪವಾಸ ಮಾಡಲು ಸಿದ್ಧ: ವಿನಯ್ ಗುರೂಜಿ
Recommended Video
ಡಾ ವಿಷ್ಣುವರ್ಧನ್ ಅವರ ಹುಟ್ಟುಹಬ್ಬ, ಪುಣ್ಯ ಸ್ಮರಣೆ ವರ್ಷದಿಂದ ವರ್ಷಕ್ಕೆ ಬರುತ್ತಲೇ ಇದೆ. ಆದರೆ ವಿಷ್ಣು ಸ್ಮಾರಕ ಕೆಲಸ ಮಾತ್ರ ಅಭಿಮಾನ್ ಸ್ಟುಡಿಯೋದಲ್ಲಿ ಆರಂಭವಾಗಲೇ ಇಲ್ಲ.
ಪರ್ಯಾಯವಾಗಿ ಮೈಸೂರಿನಲ್ಲಿ ಸಾಹಸ ಸಿಂಹನ ಸ್ಮಾರಕ ನಿರ್ಮಾಣ ಕೆಲಸ ಶುರುವಾಗಿದೆ ಎಂಬ ಮಾಹಿತಿ ಇದೆ. ಈ ಬಗ್ಗೆ ವಿನಯ್ ಗುರೂಜಿ ಮಾತನಾಡಿದ್ದು, ''ವಿಷ್ಣು ಸ್ಮಾರಕಕ್ಕಾಗಿ ನಾನು ಉಪವಾಸ ಮಾಡಲು ಸಿದ್ಧವಾಗಿದ್ದೇನೆ'' ಎಂದು ತಿಳಿಸಿದ್ದಾರೆ.
ವಿಷ್ಣುವರ್ಧನ್ ಸ್ಮಾರಕ ಸ್ಥಳಾಂತರದ ಬಗ್ಗೆ ವದಂತಿ ನಂಬಬೇಡಿ
ಡಾ ವಿಷ್ಣುವರ್ಧನ್ ಅವರ 69ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ಅಭಿಮಾನ್ ಸ್ಟುಡಿಯೋಗೆ ಭೇಟಿ ನೀಡಿದ ವಿನಯ್ ಗೂರುಜಿ, ವಿಷ್ಣು ಸಮಾಧಿಗೆ ನಮನ ಸಲ್ಲಿಸಿದರು. ಬಳಿಕ ಮಾತನಾಡಿದ ಅವರು ''ಹುಟ್ಟಿದ ಮೇಲೆ ಯಾರೂ ಸಾರ್ಥಕತೆ ಕಾಣ್ತಾರೋ ಅವರೇ ಹುಟ್ಟೆ ಒಂದು ಹಬ್ಬ. ವಿಷ್ಣುವರ್ಧನ್ ಅವರು ಯಾವಾಗಲೂ ಹುಟ್ಟಿದವರು, ಅವರಿಗೆ ಸಾವಿಲ್ಲ. ಅಂತಹ ಹಬ್ಬ ಇಲ್ಲಿ ಕಾಣ್ತಿದೆ'' ಎಂದು ಸಂತಸ ವ್ಯಕ್ತಪಡಿಸಿದರು.
ಮೊದಲು ವಿಷ್ಣು ಸ್ಮಾರಕ ಆಗಲಿ, ಆಮೇಲೆ ಅಂಬಿ ಸ್ಮಾರಕ ಮಾಡಲಿ: ಸುಮಲತಾ
''ಅಭಿಮಾನಿಗಳು ಅನ್ನೋದಕ್ಕಿಂತ ನೀವೆಲ್ಲ ಅವರ ದತ್ತು ಮಕ್ಕಳು ಎಂದುಕೊಳ್ಳಿ. ಈಗಿನ ಕಾಲದಲ್ಲಿ ನೆಂಟರೇ ಬರಲ್ಲ. ರಕ್ತ ಸಂಬಂಧಿಗಳೇ ಬೇರೆ, ಹೃದಯ ಸಂಬಂಧಿಗಳೇ ಬೇರೆ. ನೀವೆಲ್ಲ ವಿಷ್ಣು ಅವರ ಹೃದಯ ಸಂಬಂಧಿಗಳು'' ಎಂದು ಅಭಿಮಾನಿಗಳಿಗೆ ಸಲಹೆ ನೀಡಿದರು.
''ವಿಷ್ಣು ಅವರ ಸಮಾಧಿ ಎನ್ನುವುದಕ್ಕಿಂತ ಇದು ವಿಷ್ಣು ಮಂದಿರವಾಗಲಿ ಎಂಬ ಆಶಯ ನನ್ನದು. ಆ ಜಾಗಕ್ಕಾಗಿ ನಾನು ನಿಮ್ಮೆಲ್ಲರ ಜೊತೆ ಉಪವಾಸ ಮಾಡಲು ಕೂಡ ತಯಾರಿದ್ದೇನೆ. ಇದು ಕೇವಲ ಭರವಸೆ ಅಲ್ಲ'' ಎಂದು ಹೇಳುವ ಮೂಲಕ ಅಭಿಮಾನ್ ಸ್ಟುಡಿಯೋದಲ್ಲೇ ಸ್ಮಾರಕ ನಿರ್ಮಾಣವಾಗಲಿ ಎಂಬ ವಾದ ಮಂಡಿಸಿದರು.