Don't Miss!
- Finance ಇಂಜಿನಿಯರಿಂಗ್ ಪದವೀಧರರಿಗೆ ಉದ್ಯೋಗಾವಕಾಶ: ಟಿಸಿಎಸ್ನಿಂದ ನೇಮಕಾತಿ ಆರಂಭ
- Automobiles ಫ್ಯಾಮಿಲಿ ಕಾರ್ Maruti Suzuki Ertiga ಖರೀದಿಸಲು ಡೌನ್ಪೇಮೆಂಟ್ ಎಷ್ಟು?: EMI, ಲೋನ್ ಸಂಪೂರ್ಣ ಮಾಹಿತಿ!
- News ಬೆಂಗಳೂರಿನಲ್ಲಿ ಜೋರಾದ ಖರ್ಜೂರ ಮಾರಾಟ- ಒಣಹಣ್ಣುಗಳ ವ್ಯಾಪಾರ ಭರ್ಜರಿ..!
- Technology ನೀವು ಏರ್ಟೆಲ್ ಗ್ರಾಹಕರೇ?..ಹಾಗಿದ್ರೆ, ಯಾವುದಕ್ಕೂ ಈ ಪ್ಲ್ಯಾನ್ಗಳನ್ನು ಒಮ್ಮೆ ನೋಡಿ!
- Sports Mitchell Starc: KKR ತಂಡದ ದುಬಾರಿ ಆಟಗಾರನ ಪ್ರದರ್ಶನ ಹೊಳೆಯಲ್ಲಿ ಹುಣಸೆಹಣ್ಣು ತೊಳೆದಂತೆ
- Lifestyle ಮಹಿಳೆಯರ ಆರೋಗ್ಯ: ಬಿಳುಪು ಹೋಗುವ ಸಮಸ್ಯೆಗೆ ಈ ಮನೆಮದ್ದು ಪರಿಣಾಮಕಾರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಿಖಿಲ್ ದಂಪತಿಗೆ ಯಾವ ಮಗು ಆಗಲಿದೆ? ಭವಿಷ್ಯ ನುಡಿದ ವಿನಯ್ ಗುರೂಜಿ
ನಿಖಿಲ್ ಕುಮಾರಸ್ವಾಮಿ ಹಾಗೂ ರೇವತಿ ದಂಪತಿ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಸಂತಸದ ಸುದ್ದಿಯನ್ನು ಕುಮಾರಸ್ವಾಮಿ ಹಾಗೂ ನಿಖಿಲ್ ಕುಮಾರಸ್ವಾಮಿ ಇಬ್ಬರೂ ಸಂತಸದಿಂದ ಮಾಧ್ಯಮಗಳೊಟ್ಟಿಗೆ ಹಂಚಿಕೊಂಡಿದ್ದಾರೆ.
Recommended Video
ಮೊದಲ ಮಗುವಿನ ಆಗಮನದ ಪುಳಕದಲ್ಲಿ ನಿಖಿಲ್ ಕುಮಾರಸ್ವಾಮಿ ದಂಪತಿ ಇರುವ ಸಮಯದಲ್ಲಿಯೇ ವಿನಯ್ ಗುರೂಜಿ ನಿಖಿಲ್ ದಂಪತಿಗೆ ಯವ ಮಗು ಆಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
ಜೆಡಿಎಸ್ ಪ್ರಮುಖ ಮುಖಂಡ ಟಿ.ಎ.ಶರವಣ ಮನೆಗೆ ಆಗಮಿಸಿದ್ದ ವಿಜಯ್ ಗುರೂಜಿ ಅಲ್ಲಿಯೇ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದರು. ಈ ವೇಳೆ ಕುಮಾರಸ್ವಾಮಿ ಅವರಿಗೆ ಆಶೀರ್ವಚನ ನೀಡುತ್ತಾ ''ನಿಖಿಲ್ಗೆ ಗಂಡು ಮಗು ಆಗುತ್ತದೆ ಮುಂದಿನ ದಿನಗಳು ಉಜ್ವಲವಾಗಿದೆ'' ಎಂದಿದ್ದಾರೆ.
''ನಿಖಿಲ್ ಕುಮಾರಸ್ವಾಮಿ ಮುಂದಿನ ದಿನಗಳು ಉಜ್ವಲವಾಗಿವೆ''
''ನಿಖಿಲ್ ಕುಮಾರಸ್ವಾಮಿಗೆ ಶಾಸಕನಾಗುವ ಯೋಗವಿದೆ. ಅವರ ರಾಜಕೀಯ ಭವಿಷ್ಯವೂ ಉತ್ತಮವಾಗಿದೆ. ನಿಖಿಲ್ಗೆ ಗಂಡು ಮಗು ಆಗಲಿದೆ. ಆ ನಂತರದ ಅವರ ದಿನಗಳು ಉಜ್ವಲವಾಗಿವೆ'' ಎಂದು ವಿನಯ್ ಗುರೂಜಿ ಹೇಳಿದ್ದಾರೆ ಎನ್ನಲಾಗಿದೆ.
ಚಿತ್ರಗಳನ್ನು ಹಂಚಿಕೊಂಡಿರುವ ಟಿ.ಎ.ಶರವಣ
ವಿನಯ್ ಗುರೂಜಿ, ತಮ್ಮ ಮನೆಗೆ ಬಂದ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಮಾಹಿತಿ ಹಂಚಿಕೊಂಡಿರುವ ಟಿ.ಎ.ಶರವಣ, ''ಇಂದು ನಮ್ಮ ಮನೆಯಲ್ಲಿ ಅವಧೂತ ಶ್ರೀ ವಿನಯ್ ಗುರೂಜಿ ಅವರು ನಮ್ಮೆಲ್ಲರ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಶ್ರೀ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಆಶೀರ್ವಚನ ನೀಡಿದರು'' ಎಂದಿದ್ದು. ಭೇಟಿಯ ಹಲವು ಚಿತ್ರಗಳನ್ನು ಸಹ ಅವರು ಫೇಸ್ಬುಕ್ನಲ್ಲಿ ಹಂಚಿಕೊಂಡಿದ್ದಾರೆ.
ಸಂತಸದ ವಿಷಯ ಹಂಚಿಕೊಂಡಿದ್ದ ಕುಮಾರಸ್ವಾಮಿ
ನಿಖಿಲ್ ಕುಮಾರಸ್ವಾಮಿ ಹಾಗೂ ರೇವತಿ 2020ರ ಏಪ್ರಿಲ್ 17 ರಂದು ವಿವಾಹವಾಗಿದ್ದರು. ಇದೀಗ ಅವರು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ತಮ್ಮ ಪುತ್ರ ಹಾಗೂ ಸೊಸೆ ಮಗುವಿನ ನಿರೀಕ್ಷೆಯಲ್ಲಿರುವ ವಿಚಾರವನ್ನು ಕುಮಾರಸ್ವಾಮಿ ಅವರು ಮಾಧ್ಯಮಗಳೊಟ್ಟಿಗೆ ಹಂಚಿಕೊಂಡಿದ್ದರು. ನಂತರ ನಿಖಿಲ್ ಸಹ ಈ ವಿಷಯವನ್ನು ಮಾಧ್ಯಮಗಳಿಗೆ ಖಾತ್ರಿ ಪಡಿಸಿದರು.
'ರೈಡರ್' ಸಿನಿಮಾ ಬಿಡುಗಡೆಗೆ ರೆಡಿ
ಸಿನಿಮಾ ವಿಷಯಕ್ಕೆ ಬರುವುದಾದರೆ ನಿಖಿಲ್ ನಟನೆಯ 'ರೈಡರ್' ಸಿನಿಮಾ ಬಹುತೇಕ ತಯಾರಾಗಿದೆ. ಇದರ ನಂತರ ಶಿವರಾಜ್ ಕುಮಾರ್ ಜೊತೆ ನಿಖಿಲ್ ತೆರೆ ಹಂಚಿಕೊಳ್ಳಲಿದ್ದು ಆ ಸಿನಿಮಾವನ್ನು ನಂದ ಕಿಶೋರ್ ನಿರ್ದೇಶನ ಮಾಡಲಿದ್ದಾರೆ ಎನ್ನಲಾಗುತ್ತಿದೆ.