ಅಪ್ಪ ಅಮ್ಮನ ಪ್ರೀತಿ ಬಿಟ್ಟು ಗ್ರಾಮಕ್ಕೆ ಹೊರಟ ವಿನಯ್ ರಾಜ್ ಕುಮಾರ್
Recommended Video

ನಟ ವಿನಯ್ ರಾಜ್ ಕುಮಾರ್ 'ರನ್ ಆಂಟನಿ' ಆದ ನಂತರ ಸಾಲು ಸಾಲು ಸಿನಿಮಾಗನ್ನ ಒಪ್ಪಿಕೊಳ್ಳುತ್ತಿದ್ದಾರೆ. ಉತ್ತಮ ಕಥೆಯನ್ನ ಮಾತ್ರ ಆಯ್ಕೆ ಮಾಡಿಕೊಳ್ಳುತ್ತಿರುವ ವಿನಯ್ ಸಿಟಿ ಬಿಟ್ಟು ಹಳ್ಳಿ ಕಡೆ ಪ್ರಯಾಣ ಬೆಳೆಸಿದ್ದಾರೆ. ಅದಷ್ಟೇ ಅಲ್ಲದೆ ಇದೇ ಕಾರಣಕ್ಕಾಗಿ ಅಮ್ಮ ಅಮ್ಮನ ಪ್ರೀತಿ ಕೂಡ ದೂರ ಮಾಡಿಕೊಂಡಿದ್ದಾರೆ.
ನಾವು ಹೇಳುತ್ತಿರುವ ವಿಚಾರ ಸಂಪೂರ್ಣವಾಗಿ ಸಿನಿಮಾಗೆ ಸಂಬಂಧ ಪಟ್ಟದ್ದು. ಹೌದು ವಿನಯ್ ರಾಜ್ ಕುಮಾರ್ 'ಗ್ರಾಮಾಯಣ' ಎನ್ನುವ ಸಿನಿಮಾದಲ್ಲಿ ಅಭಿನಯ ಮಾಡುತ್ತಿದ್ದಾರೆ. ಇದೇ ಕಾರಣದಿಂದ 'ಅಪ್ಪ ಅಮ್ಮ ಪ್ರೀತಿ' ಸಿನಿಮಾವನ್ನು ಮುಂದಕ್ಕೆ ಹಾಕಿದ್ದಾರೆ.

ದೇವನೂರು ಚಂದ್ರು 'ಗ್ರಾಮಾಯಣ' ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದು. ನಾಗೇಶ್ ಹೆಬ್ಬುರ್ ಸಹ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರೆ. ಇನ್ನು ಪೂರ್ಣಚಂದ್ರ ತೇಜಸ್ವಿ ಅವರ ಸಂಗೀತ, ಅಭಿಷೇಕ್ ಕಾಸರಗೋಡು ಕ್ಯಾಮೆರಾ ಕೈಚಳಕ ಚಿತ್ರಕ್ಕಿದೆ. 'ಗ್ರಾಮಾಯಣ' ಟೈಟಲ್ ಗೆ ತಕ್ಕಂತೆ ಇದೊಂದು ಅಪ್ಪಟ ಹಳ್ಳಿ ಕಥೆ. ಪೊಲಿಟಿಕಲ್ ಥ್ರಿಲ್ಲರ್ ಕಥಾಹಂದರ ಹೊಂದಿದೆ.
ಚಿತ್ರವನ್ನು ಎಸ್ ಎಲ್ ಎನ್ ಮೂರ್ತಿ ನಿರ್ಮಾಣ ಮಾಡುತ್ತಿದ್ದು ಸೆಪ್ಟೆಂಬರ್ ನಲ್ಲಿ 'ಗ್ರಾಮಾಯಣ' ಚಿತ್ರದ ಶೂಟಿಂಗ್ ಶುರುವಾಗಲಿದೆ. ಇತ್ತೀಚಿಗಷ್ಟೆ ಚಿತ್ರತಂಡ ಹಾಗೂ ರಾಘವೇಂದ್ರ ರಾಜ್ ಕುಮಾರ್ ಕುಟುಂಬಸ್ಥರು ಮಂತ್ರಾಲಯದಲ್ಲಿ ಚಿತ್ರದ ಸ್ಕ್ರಿಪ್ಟ್ ಪೂಜೆ ಮಾಡಿಸಿಕೊಂಡು ಬಂದಿದ್ದಾರೆ. ಅಂದ್ಹಾಗೆ ಚಿಕ್ಕಮಂಗಳೂರಿನಲ್ಲಿ ಶೂಟಿಂಗ್ ನಡೆಯಲಿದೆ.


Click it and Unblock the Notifications











