Don't Miss!
- News ಕ್ವಿಟ್ ಎನ್ಡಿಎ ಮತ್ತು ಸೇವ್ ಇಂಡಿಯಾ: ಪ್ರೊ. ಮಹೇಶ್ಚಂದ್ರಗುರು
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Lifestyle ನೀವು ಸಹ ಈ ಶರ್ಬತ್ನ ರುಚಿ ಸವಿದಿದ್ದೀರಾ..? ಮರೆಯಾಯ್ತು ಈ ಹಳೆಯ ನೆನಪು
- Sports LSG vs CSK IPL 2024: ಲಕ್ನೋ vs ಚೆನ್ನೈ ಮಹಾಕದನ; ಟಾಸ್ ವರದಿ, ಆಡುವ 11ರ ಬಳಗ
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ವಿನಯ್ ರಾಜ್ ಕುಮಾರ್ ಸಿನಿಮಾಗೆ ತಾತನ ಚಿತ್ರದ ಟೈಟಲ್
'ದಾರಿ ತಪ್ಪಿದ ಮಗ' ಸಿನಿಮಾದ ಟೈಟಲ್ ನಲ್ಲಿ ಈಗಾಗಲೇ ರಾಜ್ ಮೊಮ್ಮಗ ಧೀರನ್ ರಾಜ್ಕುಮಾರ್ ಸಿನಿಮಾ ಮಾಡುತ್ತಿದ್ದಾರೆ. ಈಗ ಮತ್ತೊಬ್ಬ ಮೊಮ್ಮಗ ವಿನಯ್ ರಾಜ್ ಕುಮಾರ್ ಕೂಡ ತಾತನ ಚಿತ್ರದ ಹೆಸರನ್ನು ಇಟ್ಟುಕೊಂಡಿದ್ದಾರೆ.
ವಿನಯ್ ರಾಜ್ ಕುಮಾರ್ ಹೊಸ ಸಿನಿಮಾಗೆ 'ವೀರ ಕೇಸರಿ' ಎಂಬ ಟೈಟಲ್ ಇಡಲಾಗಿದೆ. ರಘು ವರ್ಧನ್ ಈ ಸಿನಿಮಾದ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದ ಕಥೆಗೆ 'ವೀರ ಕೇಸರಿ' ಎನ್ನುವ ಹೆಸರು ತುಂಬ ಚೆನ್ನಾಗಿ ಹೋಲುತ್ತಿದ್ದು, ಅದೇ ಹೆಸರನ್ನು ಬಳಸಿಕೊಳ್ಳಲಾಗಿದೆಯಂತೆ.
ಶಿವಣ್ಣ, ಪುನೀತ್ ನಂತರ 'ಬಾಕ್ಸರ್' ಆದ ವಿನಯ್
ರಾಜ್ ಕುಮಾರ್ ನಟನೆಯ 'ವೀರ ಕೇಸರಿ' ಸಿನಿಮಾ 1963 ರಲ್ಲಿ ಬಿಡುಗಡೆಯಾಗಿತ್ತು. ರಾಜ್ ಕುಮಾರ್, ಟಿ ಎಸ್ ಬಾಲಕೃಷ್ಣ, ಉದಯ್ ಕುಮಾರ್ ಆ ನಾಗೇಂದ್ರ ರಾವ್ ಸಿನಿಮಾದಲ್ಲಿ ನಟಿಸಿದ್ದರು.
ಖ್ಯಾತ ನಿರ್ದೇಶಕ ವಿಠಲಾಚಾರ್ಯ ಚಿತ್ರದ ನಿರ್ದೇಶನ ಮಾಡಿದ್ದರು. ಶೇಕ್ಸ್ ಪಿಯರ್ ಬರೆದಿರುವ 'ಟೇಮಿಂಗ್ ಆಫ್ ದಿ ಶ್ರ್ಯೂ' ಕೃತಿ ಆಧಾರಿಸಿ ಈ ಸಿನಿಮಾ ಮಾಡಲಾಗಿತ್ತು.
ಇಂತಹ 'ವೀರ ಕೇಸರಿ' ಚಿತ್ರದ ಹೆಸರನ್ನು ತಮ್ಮ ಸಿನಿಮಾಗೆ ಬಳಸಿಕೊಂಡಿದ್ದರೂ, ಹಳೆ ಚಿತ್ರಕ್ಕೂ ಇದಕ್ಕೂ ಯಾವುದೇ ರೀತಿಯ ಸಂಬಂಧ ಇಲ್ಲ ಎಂದು ನಿರ್ದೇಶಕ ರಘುವರ್ಧನ್ ತಿಳಿಸಿದ್ದಾರೆ.