Don't Miss!
- News Bengaluru Heat: ಏ.25 ರಂದು ನಗರದಲ್ಲಿ ಅತ್ಯಧಿಕ ತಾಪಮಾನ: 12 ವರ್ಷಗಳ ದಾಖಲೆ ಉಡೀಸ್
- Lifestyle ದೇಹದಲ್ಲಿ ಈ ಬದಲಾವಣೆ ಆದರೆ ನಿಮ್ಮಲ್ಲಿ ವಿಟಮಿನ್ ಬಿ12 ಕೊರತೆಯಾಗಿದೆ ಎಂದರ್ಥ
- Sports IPL 2024: ಹೈದರಾಬಾದ್ ಅಂಗಳದಲ್ಲಿ ಗೆಲ್ಲುವುದೆ ಆರ್ಸಿಬಿ: ಟಾಸ್ ವರದಿ ಹೀಗಿದೆ
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅಣ್ಣನ ಮಗನ ಹೊಸ ಸಿನಿಮಾಕ್ಕೆ ಶುಭ ಹಾರೈಸಿದ ಪುನೀತ್ ರಾಜ್ಕುಮಾರ್
ನಟ ಪುನೀತ್ ರಾಜ್ಕುಮಾರ್ ನಟಿಸಿದ್ದ 'ನಮ್ಮ ಬಸವ' ಸಿನಿಮಾದಲ್ಲಿ 'ಅಂದೊದಿತ್ತು ಕಾಲ, ಸುರಯ್ಯಾ, ಮಧು ಬಾಲಾ' ಎಂದು ಹಾಡಿ ಕುಣಿದಿದ್ದು ನೆನಪಿರಬಹುದು. ಈಗ ಅದೇ ಹೆಸರಿನಲ್ಲಿ ಸಿನಿಮಾ ವೊಂದು ಬರುತ್ತಿದ್ದು, ಸಿನಿಮಾ ನಾಯಕ ರಾಘವೇಂದ್ರ ರಾಜ್ಕುಮಾರ್ ಪುತ್ರ ವಿನಯ್ ರಾಜ್ಕುಮಾರ್.
Recommended Video
ನಾಗರಬಾವಿಯ ವಿನಾಯಕ ವೆಂಟೇಶ್ವರ ದೇವಸ್ಥಾನದಲ್ಲಿ ಸಿನಿಮಾದ ಮುಹೂರ್ತ ನಡೆದಿದ್ದು, ನಟ ಪುನೀತ್ ರಾಜ್ಕುಮಾರ್ ಅವರು ಸಿನಿಮಾ ಕ್ಲ್ಯಾಪ್ ಮಾಡಿ ಶುಭಕೋರಿದರು.
ಸಿನಿಮಾದಲ್ಲಿ ವಿನಯ್ ರಾಜ್ಕುಮಾರ್ ಎದುರು ಅದಿತಿ ಪ್ರಭುದೇವ ನಾಯಕಿಯಾಗಿದ್ದಾರೆ. ಜೊತೆಗೆ ಈ ಸಿನಿಮಾ ಮೂಲಕ ಕಿರುತೆರೆಯಿಂದ ಹಿರಿತೆರೆಗೆ ಪ್ರಮೋಷನ್ ಗಿಟ್ಟಿಸಿಕೊಂಡಿದ್ದಾರೆ ಗಟ್ಟಿಮೇಳ ಧಾರಾವಾಹಿ ಖ್ಯಾತಿಯ ನಿಶಾ.
ಸಿನಿಮಾದಲ್ಲಿನ ತಮ್ಮ ಪಾತ್ರ ಹಾಗೂ ಕತೆಯ ಬಗ್ಗೆ ಮಾತನಾಡಿದ ವಿನಯ್ ರಾಜ್ಕುಮಾರ್, 'ಸಿನಿಮಾದಲ್ಲಿ ನನ್ನದು ಸಿನಿಮಾ ನಿರ್ದೇಶಕನ ಪಾತ್ರ. ಸಿನಿಮಾವು ಕೆಲವು ದಶಕಗಳ ಹಿಂದಿನ ಸಮಾಜವನ್ನು, ಮಾನವ ಸಂಬಂಧದಲ್ಲಿದ್ದ ತೀವ್ರತೆಯನ್ನು ತೆರೆದಿಡುತ್ತದೆ' ಎಂದರು.
1990 -2005 ರ ನಡೆವ ಕತೆ 'ಅಂದೊಂದಿತ್ತು ಕಾಲ'
ಸಿನಿಮಾವು 1990 -2005 ರ ನಡೆವ ಕತೆಯಾಗಿದ್ದು, ಅಂದಿನ ದಿನಗಳು ಹೇಗಿದ್ದವು, ಅಂದಿನ ಸಮಾಜ ಹೇಗಿತ್ತು, ಜನರು ಹೇಗಿದ್ದರು, ಜನಗಳ ನಡುವಿನ ಸಂಬಂಧ ಹೇಗಿತ್ತು ಎಂಬುದನ್ನು ತೋರಿಸುವ ಸಿನಿಮಾ ಇದಾಗಿರಲಿದೆ ಎಂದರು ವಿನಯ್ ರಾಜ್ಕುಮಾರ್.
ಮೂರು ಭಿನ್ನ ಶೇಡ್ನಲ್ಲಿ ಕಾಣಿಸಿಕೊಳ್ಳಲಿದ್ದೇನೆ: ವಿನಯ್
'ಮೂರು ಭಿನ್ನ ಶೇಡ್ನಲ್ಲಿ ನಾನು ಕಾಣಿಸಿಕೊಳ್ಳಲಿದ್ದೇನೆ. 16, 21, 26 ರ ವಯಸ್ಸಿನ ವ್ಯಕ್ತಿಯಾಗಿ ನಾನು ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತೇನೆ. ಬಹಳ ಫ್ರೆಶ್ ಮೂಡ್ನಲ್ಲಿ ಸಿನಿಮಾದ ಚಿತ್ರೀಕರಣಕ್ಕೆ ಇಳಿದಿದ್ದೇನೆ' ಎಂದರು ವಿನಯ್.
ನನಗೆ ಉಪೇಂದ್ರ ಎಂದರೆ ಬಹಳ ಇಷ್ಟ: ವಿನಯ್
ತಮ್ಮ ಮೆಚ್ಚಿನ ನಿರ್ದೇಶಕರ ಬಗ್ಗೆಯೂ ಮಾತನಾಡಿದ ವಿನಯ್, 'ನನಗೆ ಉಪೇಂದ್ರ ಎಂದರೆ ಬಹಳ ಇಷ್ಟ. ಮೊದಲಿನಿಂದಲೂ ಅವರ ನಿರ್ದೇಶನದ ಅಭಿಮಾನಿ, ಅವರು ನಿರ್ದೇಶಿಸಿ, ನಟಿಸಿರುವ ಸಿನಿಮಾಗಳನ್ನು ನೋಡಿಕೊಂಡು ಬಂದಿದ್ದೇನೆ' ಎಂದರು ವಿನಯ್.
ನಾನು ರಾಜ್ಕುಮಾರ್ ಅವರ ಅಭಿಮಾನಿ: ಅದಿತಿ
ಅದಿತಿ ಪ್ರಭುದೇವ ಮಾತನಾಡಿ, 'ನಾನು ರಾಜ್ಕುಮಾರ್ ಅವರ ಅಭಿಮಾನಿ, ಮೊದಲ ಬಾರಿಗೆ ಅವರ ಕುಟುಂಬದವರೊಂದಿಗೆ ನಟಿಸುವ ಅವಕಾಶ ಸಿಕ್ಕಿದೆ. ಈವರೆಗೆ ನಾನು ನಟಿಸಿರುವ ಪಾತ್ರಗಳಲ್ಲಿ ಇದು ಸ್ವಲ್ಪ ಭಿನ್ನ. ಸಿನಿಮಾದಲ್ಲಿ ಭಾವನೆಗಳಿಗೆ ಹೆಚ್ಚು ಅವಕಾಶ. ಮಧ್ಯಮವರ್ಗದ ಹುಡುಗಿಯಾಗಿ ನಟಿಸಲಿದ್ದೇನೆ, ಎರಡು ಲುಕ್ನಲ್ಲಿ ನಾನಿಲ್ಲಿ ಕಾಣಿಸಿಕೊಳ್ಳಲಿದ್ದೇನೆ' ಎಂದರು.