Don't Miss!
- News DK Shivakumar: ಕಾಂಗ್ರೆಸ್ ಭವಿಷ್ಯದಲ್ಲಿ ನನ್ನನ್ನು ಸಿಎಂ ಮಾಡಲಿದೆ
- Automobiles ಅಡ್ವೆಂಚರ್ ಬೈಕ್ ಪ್ರಿಯರಿಗೆ ಸಿಹಿಸುದ್ದಿ: ಬಿಡುಗಡೆಗೆ ಸಜ್ಜಾದ ಸುಜುಕಿ V-Strom 800 DE ಬೈಕ್
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Lifestyle ವಿಭಿನ್ನ ಶೈಲಿಯಲ್ಲಿ ಮೊಟ್ಟೆ ಸಾಂಬಾರ್ ಮಾಡಿ..! ಇಲ್ಲಿದೆ ಸಿಂಪಲ್ ಅಡುಗೆ
- Sports IPL 2024: ಕೆಕೆಆರ್ ವಿರುದ್ಧದ ಪಂದ್ಯಕ್ಕೂ ಮುನ್ನ ಕ್ರಿಕೆಟ್ ಬಿಟ್ಟು ಆರ್ಸಿಬಿ ಆಟಗಾರರು ಮಾಡಿದ್ದೇನು?
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಗಾಜನೂರಿನ ಗ್ರಾಮದಲ್ಲಿ ಮರುಹುಟ್ಟು ಪಡೆದ ವಿನಯ್ ರಾಜ್ ಕುಮಾರ್
Recommended Video
'ಸಿದ್ದಾರ್ಥ' ಸಿನಿಮಾ ಮೂಲಕ ಕನ್ನಡ ಸಿನಿಮಾರಂಗಕ್ಕೆ ನಾಯಕನಾಗಿ ಎಂಟ್ರಿಕೊಟ್ಟ ನಟ ವಿನಯ್ ರಾಜ್ ಕುಮಾರ್. ಈಗಾಗಲೇ ಎರಡು ಸಿನಿಮಾಗಳಲ್ಲಿ ಹೀರೋ ಆಗಿ ಕಾಣಿಸಿಕೊಂಡಿರುವ ವಿನಯ್ ರಾಜ್ ಕುಮಾರ್ ಅಭಿನಯದ ಹೊಸ ಸಿನಿಮಾದ ಚಿತ್ರೀಕರಣ ಶುರುವಾಗಿದೆ.
'ಸಿದ್ದಾರ್ಥ' ಹಾಗೂ 'ರನ್ ಆಂಟನಿ' ಸಿನಿಮಾ ನೋಡಿದ ಅಭಿಮಾನಿಗಳು ಏನೋ ಮಿಸ್ ಆಗುತ್ತಿದೆ ಎನ್ನುವ ಅಭಿಪ್ರಾಯವನ್ನು ಕೊಟ್ಟಿದ್ದರು. ಈ ರೀತಿಯ ಮಾತುಗಳನ್ನ ಪಾಸಿಟಿವ್ ಆಗಿ ಸ್ವೀಕರಿಸಿದ ವಿನಯ್ ರಾಜ್ ಕುಮಾರ್ ಈಗ ವಿಭಿನ್ನ ಕಥೆಗಳ ಆಯ್ಕೆ ಮಾಡಲು ನಿರ್ಧಾರ ಮಾಡಿರುವಂತಿದೆ.
ಇಷ್ಟೊಂದು ಫಿಟ್ ಆಗಿರೋ ಶಿವಣ್ಣನ ಹಿಂದಿನ ಸೀಕ್ರೆಟ್ ಇದು
ಅದಕ್ಕೆ ಮೊದಲ ಉದಾಹರಣೆ 'ಗ್ರಾಮಾಯಣ' ಸಿನಿಮಾ, 'ಗ್ರಾಮಾಯಣ' ಚಿತ್ರದ ಟೀಸರ್ ಬಿಡುಗಡೆ ಆಗಿದೆ. ಮನಸ್ಸು ಮುಟ್ಟುವಂತ ಟೀಸರ್ ರಿಲೀಸ್ ಮಾಡಿರುವ ನಿರ್ದೇಶಕರು ವಿನಯ್ ರಾಜ್ ಕುಮಾರ್ ಅವರನ್ನು 6th ಸೆನ್ಸ್ ಸೀನನಾಗಿ ಪರಿಚಯ ಮಾಡುತ್ತಿದ್ದಾರೆ. ಟೀಸರ್ ನೋಡಿದ ಪ್ರತಿಯೊಬ್ಬರು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಹಾಗಾದರೆ ಟೀಸರ್ ನ ವಿಶೇಷತೆಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ ಮುಂದೆ ಓದಿ
ವಿನಯ್ ಈಗ 6th ಸೆನ್ಸ್ ಸೀನ
ವಿನಯ್ ರಾಜ್ ಕುಮಾರ್ ಅಭಿನಯದ ಗ್ರಾಮಾಯಣ ಸಿನಿಮಾದ ಚಿತ್ರೀಕರಣ ಆರಂಭವಾಗಿದೆ. ಸಿನಿಮಾ ಬಗ್ಗೆ ಮಾಹಿತಿ ನೀಡಲು ಮತ್ತು ಕುತೂಹಲ ಮೂಡಿಸಲು ಸಿನಿಮಾ ತಂಡ ಇತ್ತೀಚಿಗಷ್ಟೆ ಚಿತ್ರದ ಟೀಸರ್ ಬಿಡುಗಡೆ ಮಾಡಿದೆ. ಸಿನಿಮಾದಲ್ಲಿ ವಿನಯ್ ರಾಜ್ ಕುಮಾರ್ 6th ಸೆನ್ಸ್ ಸೀನನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಹಳ್ಳಿ ನಡುವಿನ ಬಾಂದವ್ಯದ ಕಥೆ
'ಗ್ರಾಮಾಯಣ' ಸಿನಿಮಾದ ಪೋಸ್ಟರ್ ಬಿಡುಗಡೆ ಆದಾಗ ಚಿತ್ರದ ಬಗ್ಗೆ ಕುತೂಹಲ ಮೂಡಿಸಿತ್ತು. ಹಳ್ಳಿ ಬಿಟ್ಟು ಬಂದ ಜನರು ಹಾಗೂ ಹಳ್ಳಿ ಬಿಟ್ಟು ಹೋದವರನ್ನ ಅಲ್ಲಿ ವಾಸವಿರುವವರು ಎಷ್ಟು ಮಿಸ್ ಮಾಡಿಕೊಳ್ಳುತ್ತಾರೆ ಎನ್ನುವುದರ ಬಗ್ಗೆ ಟೀಸರ್ ನಲ್ಲಿ ಸಣ್ಣದಾಗಿ ತಿಳಿಸಿದ್ದಾರೆ.
ವಿನಯ್ ಅವತಾರಕ್ಕೆ ಮೆಚ್ಚುಗೆ
ವಿನಯ್ ರಾಜ್ ಕುಮಾರ್ ಕಂಪ್ಲೀಟ್ ಮಾಸ್ ಲುಕ್ ನಲ್ಲಿ ಕಾಣಿಸಿಕೊಳ್ಳುತ್ತಾರೆ ಎನ್ನುವ ಸೂಚನೆ 'ಗ್ರಾಮಾಯಣ' ಟೀಸರ್ ನಲ್ಲಿ ಸಿಕ್ಕಿದೆ. ಈ ಹಿಂದಿನ ಸಿನಿಮಾ ನೋಡಿದ ಅಭಿಮಾನಿಗಳ ಅಭಿಪ್ರಾಯದಂತೆ ವಿನಯ್ ರಾಜ್ ಕುಮಾರ್ ಈ ಬಾರಿ ಪಕ್ಕಾ ಲೋಕಲ್ ಸ್ಟೈಲ್ ನಲ್ಲಿ ಎಂಟ್ರಿಕೊಡಲಿದ್ದಾರೆ.
ಸಿನಿಮಾ ಬಗ್ಗೆ ಮಾಹಿತಿ
'ಗ್ರಾಮಾಯಣ' ಸಿನಿಮಾವನ್ನು ನವ ನಿರ್ದೇಶಕ ದೇವನೂರು ಚಂದ್ರು ಡೈರೆಕ್ಟ್ ಮಾಡುತ್ತಿದ್ದಾರೆ. ವಿನಯ್ ನಾಯಕನಾದರೆ ಅಮೃತಾ ಅಯ್ಯರ್ ಸಿನಿಮಾಗೆ ನಾಯಕಿ. ಪೂರ್ಣಚಂದ್ರ ತೇಜಸ್ವಿ ಸಂಗೀತ, ಅಭಿಷೇಕ್ ಜಿ ಕಾಸರಗೋಡು ಕ್ಯಾಮೆರಾ ವರ್ಕ್ ಟೀಸರ್ ನಲ್ಲಿ ಹೈಲೆಟ್. ಇನ್ನು ಚಿತ್ರವನ್ನು ಎನ್, ಎಲ್, ಎನ್ ಮೂರ್ತಿ ನಿರ್ಮಾಣ ಮಾಡುತ್ತಿದ್ದಾರೆ.