Don't Miss!
- Lifestyle ನರಿ ಮತ್ತು ಕೋಳಿಗೂ ಮೂರ್ಖರ ದಿನಕ್ಕೂ ಇದೆ ನಂಟು..! ಏನದು.?
- News RBI: ಬ್ಯಾಂಕ್ ಕೆಲಸ ಮುಗಿದಿಲ್ವಾ? ಭಯ ಬೇಡ ಮಾರ್ಚ್ 30, 31ಕ್ಕೂ ಓಪನ್ ಇರುತ್ತೆ ಆರ್ಬಿಐ ಕಚೇರಿಗಳು!
- Automobiles ಶಿಯೋಮಿಯ ಈ ಎಲೆಕ್ಟ್ರಿಕ್ ಕಾರು ಸ್ಮಾರ್ಟ್ಫೋನ್ಗಳಂತೆ ಅಗ್ಗದ ಬೆಲೆ: ರೇಂಜ್ ಕೇಳಿದ್ರೆ ತಲೆ ತಿರುಗುತ್ತೆ!
- Technology ಈ Amoled ಡಿಸ್ಪ್ಲೇ ಫೋನ್ ಬೆಲೆಯಲ್ಲಿ ಭಾರೀ ಇಳಿಕೆ!..ಈ ಆಫರ್ಗೆ ನೀವು ಫಿದಾ ಆಗ್ತೀರಾ!
- Finance ಮೊದಲ ಬಾರಿಗೆ ಅಂಬಾನಿ ಅದಾನಿ ಸೇರಿ ವ್ಯಾಪಾರ ಒಪ್ಪಂದ, ಇಲ್ಲಿದೆ ಒಪ್ಪಂದ ವಿವರ
- Sports IPL 2024: ವಿರಾಟ್ ಕೊಹ್ಲಿ ಕೆಕೆಆರ್ ಡಗೌಟ್ ನೋಡಿದ್ರೆ ಉರಿದು ಬೀಳ್ತಾರೆ; ಆರ್ಸಿಬಿ ಮಾಜಿ ಕ್ರಿಕೆಟಿಗ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ವಿನೋದ್ ಪ್ರಭಾಕರ್ 'ಸಿ ಎಂ' ಆಗೋದಕ್ಕೆ ಬೇಕಿದೆ ಉಪ್ಪಿ ಪರ್ಮಿಷನ್
ಸದ್ಯ ರಾಜ್ಯದ ಎಲ್ಲಾ ಕಡೆ ಚುನಾವಣೆಯದ್ದೇ ಸದ್ದು. ಮುಂದಿನ ಸಿ ಎಂ ಯಾರು ಆಗುತ್ತಾರೆ. ಯಾವ ಪಕ್ಷ ಅಧಿಕಾರಕ್ಕೆ ಬರುತ್ತೆ ಎನ್ನುವ ಕುತೂಹಲ ಜನರಿಗೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ರಾಜ್ಯ ರಾಜಕೀಯದಲ್ಲಿ ಸಿ ಎಂ ಸುದ್ದಿಯಂತೆ ಸ್ಯಾಂಡಲ್ ವುಡ್ ನಲ್ಲಿಯೂ ಸಿ ಎಂ ವಿಚಾರ ಸಾಕಷ್ಟು ಚರ್ಚೆ ಆಗುತ್ತೆ.
ಸದ್ಯ ಸಿನಿಮಾರಂಗದಲ್ಲಿ 'ಸಿ ಎಂ' ಆಗಲು ತಯಾರಾಗಿರುವವರು ನಟ ವಿನೋದ್ ಪ್ರಭಾಕರ್. ಆದರೆ ಅದಕ್ಕೆ ಉಪೇಂದ್ರ ಅವರ ಅನುಮತಿ ಬೇಕಾಗಿದೆಯಂತೆ. ಹೌದು ವಿನೋದ್ ಪ್ರಬಾಕರ್ ಅಭಿನಯದ ಹೊಸ ಸಿನಿಮಾ ಸೆಟ್ಟೇರಲು ಸಜ್ಜಾಗಿದೆ. ಚಿತ್ರಕ್ಕೆ 'ಸಿ ಎಂ' ಎನ್ನುವ ಶೀರ್ಷಿಕೆ ಫಿಕ್ಸ್ ಮಾಡಲು ಸಿನಿಮಾ ನಿರ್ದೇಶಕರು ತಯಾರಿ ಮಾಡಿಕೊಂಡಿದ್ದಾರೆ.
'ಚೇರ್ಮನ್' ಟೈಟಲ್ ಸಾಂಗ್ ಬಿಡುಗಡೆ ಮಾಡಿದ ಮರಿಟೈಗರ್
ಆದರೆ 'ಸಿ ಎಂ' ಅನ್ನುವ ಟೈಟಲ್ ಉಪೇಂದ್ರ ಅವರ ಬಳಿ ಇದೆ. ಆದ್ದರಿಂದ ಉಪ್ಪಿ ಕಾಮನ್ ಮ್ಯಾನ್(ಸಿ ಎಂ) ಎನ್ನುವ ಟೈಟಲ್ ಬಿಟ್ಟುಕೊಟ್ಟರೆ ಚಿತ್ರಕ್ಕೆ ಉಪಯೋಗವಾಗುತ್ತೆ ಅಂತಾರೆ ಡೈರೆಕ್ಟರ್ ರವಿಗೌಡ. ನಿರ್ದೇಶಕ ರವಿಗೌಡ ಈ ಹಿಂದೆ ಪೂರಿ ಜಗನ್ನಾಥ್ ಬಳಿ ಸಹಾಯ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.
ಅಂದ್ಹಾಗೆ ವಿನೋದ್ ಪ್ರಭಾಕರ್ ಅಭಿನಯದ ಹೊಸ ಚಿತ್ರವನ್ನ ಕುಮಾರ್ ಹಾಗೂ ಚಕ್ರಿ ಎನ್ನುವವರು ಜಂಟಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ. ಮೇ 11 ರಂದು ಚಿತ್ರದ ಮುಹೂರ್ತ ಕಾರ್ಯಕ್ರಮ ನಡೆಯಲಿದ್ದು ಮೇ 15 ರಿಂದ ಹೈದ್ರಾಬಾದ್ ನಲ್ಲಿ ಚಿತ್ರೀಕರಣ ನಡೆಯಲಿದೆ.