Don't Miss!
- News ಹಾಸನ ಪೆನ್ಡ್ರೈವ್ ಪ್ರಕರಣ: ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದ ಮಹಿಳಾ ಆಯೋಗ
- Sports IPL 2024: ಆರ್ಸಿಬಿಗೆ ವಿರಾಟ್, ಪಾಟಿದಾರ್ ಆಸರೆ: ಹೈದರಾಬಾದ್ಗೆ ಸವಾಲಿನ ಟಾರ್ಗೆಟ್
- Lifestyle ಪುಟ್ಟ ಕಂದಮ್ಮಗಳ ಮುಖದಲ್ಲಿ ನಗು ತರಿಸಲು ಟೀಚರ್ ಮಾಡಿದ ಕೆಲಸ ನೋಡಿ, ಮಕ್ಕಳ ಪಾಲಿನ ದೇವತೆ ಇವರು
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ವಿನೋದ್ ಪ್ರಭಾಕರ್ 'ಸಿ ಎಂ' ಆಗೋದಕ್ಕೆ ಬೇಕಿದೆ ಉಪ್ಪಿ ಪರ್ಮಿಷನ್
ಸದ್ಯ ರಾಜ್ಯದ ಎಲ್ಲಾ ಕಡೆ ಚುನಾವಣೆಯದ್ದೇ ಸದ್ದು. ಮುಂದಿನ ಸಿ ಎಂ ಯಾರು ಆಗುತ್ತಾರೆ. ಯಾವ ಪಕ್ಷ ಅಧಿಕಾರಕ್ಕೆ ಬರುತ್ತೆ ಎನ್ನುವ ಕುತೂಹಲ ಜನರಿಗೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ರಾಜ್ಯ ರಾಜಕೀಯದಲ್ಲಿ ಸಿ ಎಂ ಸುದ್ದಿಯಂತೆ ಸ್ಯಾಂಡಲ್ ವುಡ್ ನಲ್ಲಿಯೂ ಸಿ ಎಂ ವಿಚಾರ ಸಾಕಷ್ಟು ಚರ್ಚೆ ಆಗುತ್ತೆ.
ಸದ್ಯ ಸಿನಿಮಾರಂಗದಲ್ಲಿ 'ಸಿ ಎಂ' ಆಗಲು ತಯಾರಾಗಿರುವವರು ನಟ ವಿನೋದ್ ಪ್ರಭಾಕರ್. ಆದರೆ ಅದಕ್ಕೆ ಉಪೇಂದ್ರ ಅವರ ಅನುಮತಿ ಬೇಕಾಗಿದೆಯಂತೆ. ಹೌದು ವಿನೋದ್ ಪ್ರಬಾಕರ್ ಅಭಿನಯದ ಹೊಸ ಸಿನಿಮಾ ಸೆಟ್ಟೇರಲು ಸಜ್ಜಾಗಿದೆ. ಚಿತ್ರಕ್ಕೆ 'ಸಿ ಎಂ' ಎನ್ನುವ ಶೀರ್ಷಿಕೆ ಫಿಕ್ಸ್ ಮಾಡಲು ಸಿನಿಮಾ ನಿರ್ದೇಶಕರು ತಯಾರಿ ಮಾಡಿಕೊಂಡಿದ್ದಾರೆ.
'ಚೇರ್ಮನ್' ಟೈಟಲ್ ಸಾಂಗ್ ಬಿಡುಗಡೆ ಮಾಡಿದ ಮರಿಟೈಗರ್
ಆದರೆ 'ಸಿ ಎಂ' ಅನ್ನುವ ಟೈಟಲ್ ಉಪೇಂದ್ರ ಅವರ ಬಳಿ ಇದೆ. ಆದ್ದರಿಂದ ಉಪ್ಪಿ ಕಾಮನ್ ಮ್ಯಾನ್(ಸಿ ಎಂ) ಎನ್ನುವ ಟೈಟಲ್ ಬಿಟ್ಟುಕೊಟ್ಟರೆ ಚಿತ್ರಕ್ಕೆ ಉಪಯೋಗವಾಗುತ್ತೆ ಅಂತಾರೆ ಡೈರೆಕ್ಟರ್ ರವಿಗೌಡ. ನಿರ್ದೇಶಕ ರವಿಗೌಡ ಈ ಹಿಂದೆ ಪೂರಿ ಜಗನ್ನಾಥ್ ಬಳಿ ಸಹಾಯ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.
ಅಂದ್ಹಾಗೆ ವಿನೋದ್ ಪ್ರಭಾಕರ್ ಅಭಿನಯದ ಹೊಸ ಚಿತ್ರವನ್ನ ಕುಮಾರ್ ಹಾಗೂ ಚಕ್ರಿ ಎನ್ನುವವರು ಜಂಟಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ. ಮೇ 11 ರಂದು ಚಿತ್ರದ ಮುಹೂರ್ತ ಕಾರ್ಯಕ್ರಮ ನಡೆಯಲಿದ್ದು ಮೇ 15 ರಿಂದ ಹೈದ್ರಾಬಾದ್ ನಲ್ಲಿ ಚಿತ್ರೀಕರಣ ನಡೆಯಲಿದೆ.