Don't Miss!
- Sports CSK vs LSG IPL 2024: ಮಾರ್ಕಸ್ ಸ್ಟೋಯಿನಿಸ್ ಆರ್ಭಟಕ್ಕೆ ಸಿಎಸ್ಕೆ ಥಂಡಾ; ಚೆನ್ನೈಗೆ ನೀರು ಕುಡಿಸಿದ ಲಕ್ನೋ
- News ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ: ಕಾರಣ ತಿಳಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
- Lifestyle ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಶ್ರೀರೆಡ್ಡಿ-ನಾನಿ ವಿವಾದಕ್ಕೆ ನಟ ವಿಶಾಲ್ ಎಂಟ್ರಿ: ನಟಿಯ ವಿರುದ್ಧ ಬೇಸರ
ತೆಲುಗು ಇಂಡಸ್ಟ್ರಿಯಲ್ಲಿ ದೊಡ್ಡ ಸಂಚಲನ ಸೃಷ್ಠಿ ಮಾಡಿರುವ ನಟಿ ಶ್ರೀರೆಡ್ಡಿ ವಿರುದ್ಧ ಬಹುಭಾಷಾ ನಟ ವಿಶಾಲ್ ಕಿಡಿಕಾರಿದ್ದಾರೆ.
ತೆಲುಗು ನಟ ಅಭಿರಾಮ್ ದಗ್ಗುಬಾಟಿ, ನಿರ್ಮಾಪಕ ಸುರೇಶ್ ಬಾಬು ಸೇರಿದಂತೆ ಮೇಲೆ ಗಂಭೀರ ಆರೋಪಗಳನ್ನ ಮಾಡಿರುವ ಶ್ರೀರೆಡ್ಡಿ, ಸದ್ಯ ನಾನಿ ವಿರುದ್ಧ ಕೀಳುಮಟ್ಟದಲ್ಲಿ ಹೇಳಿಕೆಗಳನ್ನ ನೀಡುತ್ತಿದ್ದಾರೆ.
ನಟ ನಾನಿ ಜೊತೆ ನನ್ನದು ಲವ್ ಸ್ಟೋರಿ ಅಲ್ಲ...ಕಾಮ ಸ್ಟೋರಿ.!
ಇದು ಟಾಲಿವುಡ್ ಇಂಡಸ್ಟ್ರಿಯನ್ನ ಬೆಚ್ಚಿಬೀಳಿಸಿದ್ದು, ಇದಕ್ಕೊಂದು ಅಂತ್ಯವಾಡಲೇಬೇಕು ಎಂದು ನಿರ್ಧರಿಸಿದಂತಿದೆ. ಈಗಾಗಲೇ ಶ್ರೀರೆಡ್ಡಿಗೆ ಲೀಗಲ್ ನೋಟಿಸ್ ನೀಡಿರುವ ನಾನಿ, ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಅಷ್ಟಿದ್ದರೂ, ನಾನಿ ಬಗ್ಗೆ ಆರೋಪಗಳನ್ನ ಮಾಡ್ತಿದ್ದಾರೆ. ಇದೀಗ, ಈ ವಿವಾದದ ಬಗ್ಗೆ ವಿಶಾಲ್ ಮಾತನಾಡಿದ್ದು, ಮತ್ತಷ್ಟು ಚರ್ಚೆಗೆ ಕಾರಣವಾಗಿದೆ. ಮುಂದೆ ಓದಿ....
ಸಾಕ್ಷಿ ಸಮೇತ ಮಾತನಾಡಲಿ ಮಾಡಲಿ
''ಶ್ರೀರೆಡ್ಡಿ ಅವರು ಸುಮ್ಮನೆ ಚಿತ್ರರಂಗದ ಮೇಲೆ ಆರೋಪ ಮಾಡುವುದು ಸರಿಯಿಲ್ಲ. ಏನಾದರೂ ಅಂತಹ ಸಮಸ್ಯೆಗಳಿದ್ರೆ ಅದನ್ನ ಸಾಕ್ಷಿ ಸಮೇತ ಎದುರಿಸಬೇಕು. ಹೀಗೆ, ಆಧಾರ ರಹಿತ ಆರೋಪ ಮಾಡಿ ಮಾನಹಾನಿ ಮಾಡಬಾರದು'' ಎಂದು ವಿಶಾಲ್ ಹೇಳಿದ್ದಾರೆ.
ಇಂಡಸ್ಟ್ರಿಯ ಗೌರವಕ್ಕೆ ಧಕ್ಕೆ
''ಕಾಸ್ಟಿಂಗ್ ಕೌಚ್ ನಡೆಯುತ್ತಿದೆ ಎಂದು ಹೇಳುವುದು ಸುಲಭ, ಆದ್ರೆ, ಅದಕ್ಕೆ ಸಾಕ್ಷಿ ಸಮೇತ ಬಯಲು ಮಾಡುವುದಕ್ಕೆ ಧೈರ್ಯ ಬೇಕು. ಸುಮ್ಮನೆ ಎಲ್ಲರ ಮೇಲೂ ಆರೋಪ ಮಾಡಬಾರದು. ಇಡೀ ಇಂಡಸ್ಟ್ರಿಯ ಗೌರವಕ್ಕೆ ಧಕ್ಕೆ ಬರುತ್ತೆ'' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಶ್ರೀರೆಡ್ಡಿ ವಿರುದ್ಧ ಸಿಡಿದೆದ್ದ ನಾನಿ: ಇಬ್ಬರ ಮಧ್ಯೆ ನೇರಾನೇರ ಫೈಟ್
ಕಲಾವಿದರ ಸಂಘ ಬಗೆಹರಿಸಬೇಕು
''ಶ್ರೀರೆಡ್ಡಿಯ ವಿವಾದ ದಿನೇ ದಿನೇ ಹೆಚ್ಚಾಗುತ್ತಿದೆ. ಈ ಬಗ್ಗೆ ಕಲಾವಿದರ ಸಂಘ ಒಂದು ನಿರ್ಧಾರಕ್ಕೆ ಬರಬೇಕು, ಈ ವಿವಾದ ಬಗ್ಗೆ ಚರ್ಚೆ ಮಾಡಿ, ಇದಕ್ಕೆ ಅಂತ್ಯವಾಡಬೇಕಿದೆ'' ಎಂದು ಅಭಿಪ್ರಾಯಪಟ್ಟಿದ್ದಾರೆ.
ಶ್ರೀರೆಡ್ಡಿ ಮತ್ತು ನಾನಿ ವಿವಾದಕ್ಕೆ ಎಂಟ್ರಿ ಕೊಟ್ಟ ನಾನಿ ಪತ್ನಿ
ಅಮಲಾ-ವರಲಕ್ಷ್ಮಿಗೆ ಮೆಚ್ಚುಗೆ
ಇನ್ನು ಇದೇ ಸಂದರ್ಭದಲ್ಲಿ ಮಾತನಾಡಿದ ವಿಶಾಲ್ ''ಈ ಹಿಂದೆ ಈ ರೀತಿಯ ಸಮಸ್ಯೆಗಳನ್ನ ಎದುರಿಸಿ, ಅದನ್ನ ಸಾಕ್ಷಿ ಸಮೇತ ಬಹಿರಂಗಪಡಿಸಿದ ನಟಿ ಅಮಲಾ ಪೌಲ್ ಮತ್ತು ವರಲಕ್ಷ್ಮಿ ಅವರಿಗೆ ಈ ವಿಷ್ಯದಲ್ಲಿ ಮೆಚ್ಚುಗೆ ಹೇಳಲೇಬೇಕು'' ಎಂದರು.