Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಫಲ ಕೊಡುವ ವೃಕ್ಷದ ಪರಿಕಲ್ಪನೆಯಲ್ಲಿ ಡಾ ವಿಷ್ಣುವರ್ಧನ್ ನಿಮ್ಮ ಮುಂದೆ
ಡಾ.ವಿಷ್ಣುವರ್ಧನ್, ಸಾವಿರಾರು ಅಭಿಮಾನಿಗಳ ಹೃದಯದಲ್ಲಿ ಸಾಹಸ ಸಿಂಹನಾಗಿ ಮೆರೆದವರು. ಕನ್ನಡ ಸಿನಿಮಾರಂಗಕ್ಕೆ ಸಾಂಸ್ಕೃತಿಕ ರಾಯಭಾರಿಯಾಗಿದ್ದ ವಿಷ್ಣುವರ್ಧನ್ ಹೆಸರಲ್ಲಿ ಈ ವರ್ಷವೂ ಕ್ಯಾಲೆಂಡರ್ ಹೊರ ಬರ್ತಿದೆ. ಕಳೆದ ಐದು ವರ್ಷಗಳಿಂದ ಡಾ.ವಿಷ್ಣು ಸೇನಾ ಸಮಿತಿ ಅಭಿಮಾನಿಗಳಿಗಾಗಿ ಕ್ಯಾಲೆಂಡರ್ ರಿಲೀಸ್ ಮಾಡುತ್ತಾ ಬರುತ್ತಿದ್ದಾರೆ.
ಡಾ.ವಿಷ್ಣು ಸೇನಾ ಸಮಿತಿಯಿಂದ ಈ ವರ್ಷ ಬರುತ್ತಿರುವ ಕ್ಯಾಲೆಂಡರ್ ಸಾಕಷ್ಟು ವಿಶೇಷತೆಯಿಂದ ಕೂಡಿದೆ. ಫಲ ಕೊಡುವ ವೃಕ್ಷದ ಪರಿಕಲ್ಪನೆಯಲ್ಲಿ ವಿಷ್ಣುವರ್ಧನ್ ರನ್ನ ಹೋಲಿಕೆ ಮಾಡಿ ಕ್ಯಾಲೆಂಡರ್ ಡಿಸೈನ್ ಮಾಡಿದ್ದಾರೆ.
ಹಲವು ವಿಶೇಷತೆಗಳ ಜೊತೆ ವಿಷ್ಣುವರ್ಧನ್
ಈ ತರಹದ ಪರಿಕಲ್ಪನೆ ಇದೇ ಮೊದಲು. ಡಾ.ವಿಷ್ಣು ಎಂದರೆ ಏನು? ಅವರು ಬಿತ್ತಿದ ಆದರ್ಶಗಳೇನು? ಎಂಬುದನ್ನು ಅತ್ಯಂತ ಕ್ರಿಯಾಶೀಲ ಮತ್ತು ಸಾಂಕೇತಿಕವಾಗಿ ತೋರಿಸುವ ಪ್ರಯತ್ನವನ್ನ ಡಾ.ವಿಷ್ಣು ಕ್ಯಾಲೆಂಡರ್ ಮೂಲಕ ಮಾಡಲಾಗಿದೆ.
ಕ್ಯಾಲೆಂಡರ್ ನಲ್ಲಿ ವಿಷ್ಣು ಬಗ್ಗೆ ಮಾಹಿತಿ
ಭರ್ಜರಿ ವಿನ್ಯಾಸದ, ಡಾ.ವಿಷ್ಣು ಅವರ ಅತಿ ಅಪರೂಪದ ಫೋಟೋ ಮತ್ತು ಸಂದರ್ಶನದ ಆಯ್ದ ನುಡಿಗಳು, ಕೆಲವು ಶ್ರೇಷ್ಠ ಅಭಿಮಾನಿಗಳ ವಿವರಗಳು, ಡಾ.ವಿಷ್ಣು ರಾಷ್ಟ್ರೀಯ ಉತ್ಸವದ ಚಿತ್ರ ಸಹಿತ ವಿವರಣೆ ಇಲ್ಲಿ ಸಿಗಲಿದೆ.
ಕ್ಯಾಲೆಂಡರ್ ನಲ್ಲಿದೆ ಹತ್ತು ಹಲವು ವಿಶೇಷ
ಸಾಮಾನ್ಯವಾಗಿ ಕ್ಯಾಲೆಂಡರ್ ಅಂದರೆ 12 ಪುಟಗಳು ಇರುತ್ತವೆ. ಆದರೆ ವಿಷ್ಣು ಕ್ಯಾಲೆಂಡರ್ ನಲ್ಲಿ 14 ಪುಟಗಳಿವೆ. ಅದರ ಸ್ಪೆಷಲ್ ಏನು ಅನ್ನೋದು ಕ್ಯಾಲೆಂಡರ್ ಕೈಗೆ ಬಂದಾಗ ಮಾತ್ರ ತಿಳಿಯುತ್ತೆ ಅನ್ನೋದು ವಿಷ್ಣು ಸೇನಾ ಸಮಿತಿಯವರ ಮಾತು.
ಕ್ಯಾಲೆಂಡರ್ ಫೋಟೋ ಪ್ರೊಫೈಲ್ ಪಿಚ್ಚರ್
ವಿಷ್ಣು ಕ್ಯಾಲೆಂಡರ್ ನ ಫೋಟೋ ಸಖತ್ ವೈರಲ್ ಆಗಿದೆ. ಈಗಾಗಲೇ ಐದು ಸಾವಿರ ಜನರು ತಮ್ಮ ಫೇಸ್ ಬುಕ್ ನಲ್ಲಿ ಫೋಟೋವನ್ನ ಪ್ರೋಫೈಲ್ ಪಿಕ್ ಆಗಿ ಮಾಡಿಕೊಂಡಿದ್ದಾರೆ. ಪ್ರತಿ ಜಿಲ್ಲೆಯಲ್ಲೂ ಕ್ಯಾಲೆಂಡರ್ ಲಭ್ಯವಿದ್ದು ಆಯಾ ಜಿಲ್ಲೆಯ ವಿಷ್ಣು ಸೇನಾ ಸಮಿತಿಯವರನ್ನ ಸಂಪರ್ಕಿಸಿ ವಿಭಿನ್ನವಾಗಿರುವ ಕ್ಯಾಲೆಂಡರ್ ಖರೀದಿ ಮಾಡಬಹುದು.