Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಪುತ್ಥಳಿಗಳ ಮೂಲಕ ವಿಷ್ಣುವರ್ಧನ್ ರನ್ನ ಜೀವಂತವಾಗಿರಿಸಿದ ಅಭಿಮಾನಿ
ಕಲಾವಿದನ ದೇಹಕ್ಕೆ ಮಾತ್ರ ಸಾವು ಆತ ಮಾಡಿರುವ ಕೆಲಸಗಳಿಗಲ್ಲ ಎನ್ನುವ ಮಾತಿದೆ. ಅದೇ ರೀತಿಯಲ್ಲಿ ಡಾ ವಿಷ್ಣುವರ್ಧನ್ ಅಭಿನಯದ ಸಿನಿಮಾಗಳ ಮೂಲಕ ಹಾಗೂ ಅವರು ಮಾಡಿರುವ ಕೆಲಸಗಳಿಂದ ಅವರ ನೆನಪು ಎಂದೆಂದಿಗೂ ಅಭಿಮಾನಿಗಳು ಮತ್ತು ಜನರ ಮಧ್ಯೆ ಉಳಿದುಕೊಂಡು ಬಿಟ್ಟಿದೆ. ಅಭಿಮಾನಿಗಳ ಅಭಿಮಾನವನ್ನ ಎಂದಿಗೂ ಅಳೆಯಲು ಸಾಧ್ಯವಿಲ್ಲ. ಅದೇ ಕಾರಣದಿಂದ ಅಭಿಮಾನಿಗಳನ್ನ ದೇವರು ಎಂದು ಕರೆದಿದ್ದು.
ನೆಚ್ಚಿನ ನಟನ ಮೇಲಿನ ಪ್ರೀತಿ ಅಭಿಮಾನವನ್ನ ತೋರಿಸಲು ಸಾಕಷ್ಟು ಹಾದಿಗಳಿವೆ. ಆದರೆ ವಿಷ್ಣುವರ್ಧನ್ ಅವರ ಅಭಿಮಾನಿ ವೀರಕಪುತ್ರ ಶ್ರೀನಿವಾಸ್ ವಿಷ್ಣು ಅವರ ಪುತ್ಥಳಿಗಳನ್ನ ಸ್ಥಾಪನೆ ಮಾಡುವ ಮೂಲಕ ಮುಂದಿನ ಪೀಳಿಗೆಯ ಮನಸ್ಸಿನಲ್ಲಿಯೂ ವಿಷ್ಣುವರ್ಧನ್ ನೆನಪಿನಲ್ಲಿರುವಂತಹ ಕೆಲಸ ಮಾಡುತ್ತಿದ್ದಾರೆ.
ಅಂದು-ಇಂದು ಕನ್ನಡಕ್ಕೆ ಒಬ್ಬರೇ ಯಜಮಾನ !
ಇಲ್ಲಿಯ ತನಕ ವೀರಕಪುತ್ರ ಶ್ರೀನಿವಾಸ್ ಸುಮಾರು 24 ಪುತ್ಥಳಿಯನ್ನ ತಮ್ಮ ಸ್ವಂತ ಖರ್ಚಿನಿಂದ ಸ್ಥಾಪನೆ ಮಾಡಿದ್ದಾರೆ. ಜಯನಗರ, ಜೆಪಿನಗರ, ಹೆಣ್ಣೂರು, ಮೆಜೆಸ್ಟಿಕ್, ಮೈಸೂರು ರಸ್ತೆ, ಕುಂಬಳಗೋಡು, ಪಾವಗಡ, ಮಧುಗಿರಿ ಸೇರಿದಂತೆ ಇನ್ನೂ ಅನೇಕ ಕಡೆಗಳಲ್ಲಿ ಅಭಿಮಾನಿಗಳಿಗೆ ವಿಷ್ಣು ದರ್ಶನವಾಗುವಂತೆ ಮಾಡಿದ್ದಾರೆ.
ಸದ್ಯ ವಿಷ್ಣು ದಾದನ 25 ನೇ ಪುತ್ಥಳಿಯನ್ನ ದಾವಣಗೆರೆಯಲ್ಲಿ ಮಾರ್ಚ್ 31 ರಂದು ಅನಾವರಣಗೊಳ್ಳಲಿದೆ. ಕಲಾವಿದ ಶಿವಕುಮಾರ್ ಹಾಗೂ ರಾಜು ಕೈನಲ್ಲಿ ವಿಷ್ಣು ಪುತ್ಥಳಿಗಳು ಕೆತ್ತನೆಯಾಗಿದೆ. ನೆಚ್ಚಿನ ನಟರ ಮೇಲಿನ ಪ್ರೀತಿಯನ್ನ ಒಂದು ಎರಡು ದಿನಗಳಿಗೆ ಮೀಸಲು ಮಾಡದೇ ಸಾಕಷ್ಟು ವರ್ಷಗಳು ನಾವಿಲ್ಲ ಎಂದರೂ ಜನರು ನೆನಪಿಸಿಕೊಳ್ಳುವಂತೆ ಮಾಡುತ್ತಿರುವ ಅಭಿಮಾನಿಯ ಕೆಲಸ ನಿಜಕ್ಕೂ ಮೆಚ್ಚುವಂತದ್ದೆ.
'ಆಪ್ತಮಿತ್ರ 2' ಚಿತ್ರಕ್ಕೆ ಕ್ರೇಜಿ ಸ್ಟಾರ್ ರವಿಚಂದ್ರನ್ ಹೀರೋ!