Don't Miss!
- News Bengaluru Suburban Rail Project: ಹಳ್ಳ ಹಿಡಿದ ₹15,767 ಕೋಟಿ ವೆಚ್ಚದ ಕಾಮಗಾರಿ, ಜನಸಾಮಾನ್ಯರು ಹೇಳೋದೇನು ಗೊತ್ತಾ?
- Automobiles ಫ್ಯಾಮಿಲಿ ಕಾರಾಗಿ ಜನರ ಮನಗೆದ್ದ ಹ್ಯುಂಡೈ ಅಲ್ಕಾಜರ್ ಎಸ್ಯುವಿಯ ಮೇಲೆ ಭರ್ಜರಿ ಡಿಸ್ಕೌಂಟ್
- Finance ಕಬ್ಬನ್ ಪಾರ್ಕ್ನಲ್ಲಿ ಮರ ಅಪ್ಪಿಕೊಳ್ಳುವ ಕಾರ್ಯಕ್ರಮಕ್ಕೆ ತಲಾ 1,500 ರೂ. ಶುಲ್ಕವಿಟ್ಟ ಕಂಪನಿ!
- Technology Itel: ಐಟೆಲ್ ಸೂಪರ್ ಗುರು 4G ಫೋನ್ ಲಾಂಚ್! ಯುಪಿಐ ಬೆಂಬಲ
- Lifestyle ಸ್ವತಂತ್ರ ಭಾರತದ ಮೊದಲ ಮತದಾರನಿಲ್ಲದ ಮೊದಲ ಚುನಾವಣೆ ಇದು..! ಯಾರು ಈ ಮತದಾರ ಗೊತ್ತಾ?
- Sports IPL 2024: ಪಂಜಾಬ್ ಕಿಂಗ್ಸ್ ವಿರುದ್ಧ ಗೆದ್ದರೂ ಹಾರ್ದಿಕ್ ಪಾಂಡ್ಯಗೆ ಭಾರೀ ಮೊತ್ತದ ದಂಡ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕಾಮಿಕ್ ಸ್ಟ್ರಿಪ್ ನಲ್ಲಿ ಮತ್ತೆ ಹುಟ್ಟಿಬಂದ ವಿಷ್ಣುವರ್ಧನ್
ಹಾಲಿವುಡ್ ಚಿತ್ರಗಳಲ್ಲಿ ಕಾಮಿಕ್ ಪಾತ್ರಗಳು ಹೊಸದಲ್ಲ. ಅಲ್ಲಿನ ಪ್ರತಿಯೊಬ್ಬ ನಟ, ನಟಿ ಮೇಲೂ ವಿನೋದ ಚಿತ್ರಾವಳಿಗಳಿವೆ. ಇತ್ತೀಚೆಗಷ್ಟೇ ಆ ಸಂಪ್ರದಾಯ ಬಾಲಿವುಡ್ ಗೂ ಲಗ್ಗೆ ಹಾಕಿತು. ಮೊದಲು ಬಂದದ್ದೇ ಸೈಫ್ ಆಲಿಖಾನ್ ಹಾಗೂ ರಾಣಿ ಮುಖರ್ಜಿ ಅವರ 'ಹಮ್ ತುಮ್' ಕಾಮಿಕ್ ಸ್ಟ್ರಿಪ್.
ಈಗ ಇದೇ ಮೊದಲ ಬಾರಿಗೆ ಸ್ಯಾಂಡಲ್ ವುಡ್ ನಲ್ಲೂ ರಂಜಿಸಲು ಕಾಮಿಕ್ ಸ್ಟ್ರಿಪ್ ರೂಪದಲ್ಲಿ ಸಾಹಸಸಿಂಹ ಡಾ.ವಿಷ್ಣುವರ್ಧನ್ ಬರುತ್ತಿದ್ದಾರೆ. ಡಾ.ವಿಷ್ಣುವರ್ಧನ್ ಅವರ ಈ ಬಾರಿಯ ವಾರ್ಷಿಕ ಪುಣ್ಯ ಸ್ಮರಣೆಯಲ್ಲಿ (ಡಿಸೆಂಬರ್ 30) ಅವರ ಅಳಿಯ ಹಾಗೂ ನಟ ಅನಿರುದ್ಧ್ ಅವರು ಈ ಕಾಮಿಕ್ ಸೀರೀಸನ್ನು ಹೊರತರುತ್ತಿದ್ದಾರೆ.
ಇನ್ನೂರು ಚಿತ್ರಗಳಲ್ಲಿ ಅಭಿನಯಿಸಿರುವ ವಿಷ್ಣುವರ್ಧನ್ ಅವರನ್ನು ಕಾಮಿಕ್ ರೂಪದಲ್ಲಿ ಹೊರತರಲು ಉದ್ದೇಶಿಸಲಾಗಿದೆ. ಇಂದಿನ ಮಕ್ಕಳನ್ನು ಗುರಿಯಾಗಿಸಿಕೊಂಡು ಈ ಕಾಮಿಕ್ ಸೀರೀಸ್ ಹೊರತರಲಾಗುತ್ತಿದೆ. 'ಡಿಟೆಕ್ಟೀವ್ ಸಾಹಸಸಿಂಹ'ನಿಗೆ ಅವರ ಮೊಮ್ಮೊಕ್ಕಳು ರಹಸ್ಯಗಳನ್ನು ಭೇದಿಸಲು ಸಹಾಯ ಮಾಡುತ್ತಾರೆ.
ಈ ಕಾಮಿಕ್ ಸರಣಿಯ ಬಹುತೇಕ ಕಂತುಗಳು ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರ ಹುಡುಕುವುದೇ ಆಗಿದೆ. ಈ ಮೂಲಕ ಮಕ್ಕಳಿಗೆ ರಂಜನೆ ಜೊತೆಗೆ ಶಿಕ್ಷಣ ನೀಡುವುದೇ ಆಗಿದೆ ಎನ್ನುತ್ತಾರೆ ಅನಿರುದ್ಧ್. ಈ ಕಾಮಿಕ್ ಸರಣಿಯಲ್ಲಿ ಅನಿರುದ್ಧ್ ಮಕ್ಕಳಾದ ಜ್ಯೇಷ್ಠ ಹಾಗೂ ಶ್ಲೋಕಾ ಸಹ ಭಾಗಿಯಾಗಲಿದ್ದಾರೆ. ವಿಷ್ಣುವರ್ಧನ್ ಅವರ ಪತ್ನಿ ಭಾರತಿ ವಿಷ್ಣುವರ್ಧನ್ ಸಹ ಕಾಣಿಸಿಕೊಳ್ಳಲಿದ್ದಾರೆ. (ಏಜೆನ್ಸೀಸ್)