Don't Miss!
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Automobiles ಪ್ರಸಿದ್ಧ ಪುಣ್ಯಕ್ಷೇತ್ರ ಶೃಂಗೇರಿ ಶಾರದಾಂಬಾ ದರ್ಶನಕ್ಕೆ ತೆರಳಬೇಕೇ.. ಹಾಗಾದರೆ ಈ ಸ್ಟೋರಿ ನೋಡಿ
- Lifestyle ಹನುಮಂತನ ಪವಾಡ: ಈ ದೇವಾಲಯದಲ್ಲಿ ಹನುಮಾನ್ ಮೂರ್ತಿ ವರ್ಷದಿಂದ ವರ್ಷಕ್ಕೆ ಎತ್ತರ ಬೆಳೆಯುತ್ತಿದೆ!
- News ಮೀಸಲಾತಿ ಅಸ್ತ್ರ ಪ್ರಯೋಗಿಸಿದ ಮೋದಿ; ಮುಸ್ಲಿಂ ಸಮುದಾಯಕ್ಕೆ 4% ಮೀಸಲಾತಿ: ಸಿದ್ದರಾಮಯ್ಯ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Technology Qubo InstaView ವಿಡಿಯೋ ಡೋರ್ ಫೋನ್ ಲಾಂಚ್!..ಬೆಲೆ ಎಷ್ಟು, ಫೀಚರ್ಸ್ ಏನಿವೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ವಿಷ್ಣು ಅಭಿಮಾನಿಯ ಈ ಅಭಿಮಾನಕ್ಕೆ ಏನ್ ಹೇಳ್ಬೇಕು.!
ಡಾ.ವಿಷ್ಣುವರ್ಧನ್ ಅಭಿಮಾನಿಗಳ ಪಾಲಿನ ನಿಜವಾದ ಯಜಮಾನ. ''ಅಭಿಮಾನಿಗಳೇ ನನ್ನ ಪ್ರಾಣ, ಅಭಿಮಾನಿಗಳೇ ನನ್ನ ಧ್ಯಾನ'' ಎಂದು ಹೇಳುವ ಮೂಲಕ ಅಭಿಮಾನಗಳಿಗಾಗಿ ಈ ಜೀವ ಆಗಿದ್ದರು.
ಇನ್ನು ಅಭಿಮಾನಿಗಳು ಕೂಡ ಹಾಗೆ, ವಿಷ್ಣುವರ್ಧನ್ ಅವರನ್ನ ದೇವರಂತೆ ಕಾಣುತ್ತಿದ್ದರು. ತಮ್ಮ ಮನೆಗಳಲ್ಲಿ ದೇವರ ಪಕ್ಕದಲ್ಲಿ ವಿಷ್ಣು ಫೋಟೋ ಹಾಕಿ ಪೂಜೆ ಮಾಡುವವರು ಇದ್ದಾರೆ.[ಮದುವೆ ಆಮಂತ್ರಣ ಪತ್ರಿಕೆಯಲ್ಲೂ ಅಭಿಮಾನ ಮೆರೆದ ವಿಷ್ಣು ಫ್ಯಾನ್]
ಆದ್ರೆ, ಇಲ್ಲೊಬ್ಬ ವಿಷ್ಣು ಅಭಿಮಾನಿ ಎಲ್ಲರಿಗಿಂತ ವಿಭಿನ್ನ ಹಾಗೂ ವಿಶೇಷ. ಯಾಕೆ ಅಂತ ಮುಂದೆ ನೋಡಿ.....
ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಅಭಿಮಾನ
'ಮದುವೆಯ ಆಮಂತ್ರಣ ಪತ್ರಿಕೆ'ಯಲ್ಲಿ ವಿಷ್ಣು ಅವರ ಅಭಿಮಾನ ಮರೆದಿದ್ದಾರೆ. ಸಾಮಾನ್ಯವಾಗಿ ಲಗ್ನ ಪತ್ರಿಕೆಯ ಮುಂಭಾಗದಲ್ಲಿ ದೇವರ ಫೋಟೋ ಹಾಕಲಾಗುತ್ತೆ. ಆದ್ರೆ, ಈ ಅಭಿಮಾನಿ ವಿಷ್ಣು ವರ್ಧನ್ ಅವರ ಫೋಟೋ ಹಾಕಿದ್ದಾರೆ.
ದಾದಾ ಆಶೀರ್ವಾದ
ಅಷ್ಟೇ ಅಲ್ಲದೇ, ತಮ್ಮ ಕುಟುಂಬದ ಗುರು ಹಿರಿಯರ ಜೊತೆ, ವಿಷ್ಣುವರ್ಧನ್ ಅವರ ಹೆಸರನ್ನ ಹಾಕಲಾಗಿದ್ದು, ಡಾ.ವಿಷ್ಣುವರ್ಧನ್ ಅವರ ಆಶೀರ್ವಾದದೊಂದಿಗೆ ಮದುವೆಯಾಗುತ್ತಿದ್ದಾರೆ.[ಡಾ.ರಾಜ್ ಕುಮಾರ್ ಮದುವೆಯ ಲಗ್ನಪತ್ರಿಕೆ ನೋಡಿ ಹೇಗಿತ್ತು?]
ಮದುವೆ ಯಾವಾಗ
ಪಾಂಡುರಂಗಯ್ಯ ಬಿ.ಆರ್ ಮತ್ತು ಮಹಾಲಕ್ಷ್ಮಿ ಅವರ ಮದುವೆಯ ಆಮಂತ್ರಣ ಪತ್ರಿಕೆ ಇದಾಗಿದ್ದು, ಇದೇ ತಿಂಗಳ 12 ರಂದು ತುಮಕೂರಿನ ಶಿರಾ ಟೌನ್ ನಲ್ಲಿ ಈ ವಿವಾಹ ಜರುಗಲಿದೆ.
ಇದು ಎರಡನೇ ಪತ್ರಿಕೆ
ಅಂದ್ಹಾಗೆ, ಈ ರೀತಿ ತಮ್ಮ ಮದುವೆಯ ಆಮಂತ್ರಣ ಪತ್ರಿಕೆಯಲ್ಲಿ ವಿಷ್ಣು ಅವರ ಅಭಿಮಾನ ಮೆರೆದಿರುವುದು ಇದೇ ಮೊದಲಲ್ಲ. ಇದಕ್ಕೂ ಮುಂಚೆ ಕೂಡ ಒಬ್ಬರು ಈ ರೀತಿಯಾಗಿ ಲಗ್ನ ಪತ್ರಿಕೆಯಲ್ಲಿ ದಾದಾ ಹೆಸರು ಮತ್ತು ಫೋಟೋ ಹಾಕಿಸಿದ್ದರು.
ಈ ಅಭಿಮಾನಕ್ಕೆ ಏನ್ ಹೇಳ್ತಿರಾ?
ಈ ಅಭಿಮಾನಕ್ಕೆ ಏನ್ ಹೇಳ್ಬೇಕು ಅಂತ ಗೊತ್ತಿಲ್ಲ. ಆದ್ರೆ, ವಿಷ್ಣವರ್ಧನ್ ಅವರ ಕನ್ನಡ ಚಿತ್ರರಂಗದ ಯಜಮಾನ ಮಾತ್ರವಲ್ಲ, ಅಭಿಮಾನಿಗಳ ಪಾಲಿಗೆ ಕೂಡ ಅವರೇ ನಿಜವಾದ ಯಜಮಾನ ಎನ್ನುವುದು ಮಾತ್ರ ಸುಳ್ಳಾಲ್ಲ.