Don't Miss!
- News Kolar Lok Sabha elections: ಕೋಲಾರ ಲೋಕಸಭಾ ಕ್ಷೇತ್ರದಲ್ಲಿ 'ಸ್ಥಳೀಯ' V/s 'ಹೊರಗಿನವ' ಫೈಟ್!
- Finance bangalore royal challengers ತಂಡದಿಂದ ನಗರದ ಎರಡು ಕೆರೆಗಳ ಪುನರುಜ್ಜೀವನ
- Automobiles ಪೆಟ್ರೋಲ್ಗೆ ಹೆಚ್ಚು ಹಣ ಖರ್ಚು ಮಾಡುತ್ತಿದ್ದೀರಾ?.. ಇಲ್ಲಿವೆ ಬೆಸ್ಟ್ ಎಲೆಕ್ಟ್ರಿಕ್ ಸ್ಕೂಟರ್ಗಳು, ಜಾಸ್ತಿ ಓ
- Technology Samsung: ಭಾರತದಲ್ಲಿ ಹೊಸ ವೇರಿಯಂಟ್ನಲ್ಲಿ ಸ್ಯಾಮ್ಸಂಗ್ ಗ್ಯಾಲಕ್ಸಿ F15 5G! ಬೆಲೆ ಎಷ್ಟು?
- Sports RCB: 'ಗೋ ಗ್ರೀನ್' ಭಾಗವಾಗಿ 3 ಕೆರೆಗಳ ಅಭಿವೃದ್ಧಿಪಡಿಸಿದ ಆರ್ಸಿಬಿ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಡಾ ವಿಷ್ಣು ಸ್ಮಾರಕ ವಿನ್ಯಾಸ: ವಾಹ್....ಎನ್ನುವಂತಿದೆ ಯೋಜನೆಗಳು, ಏನೆಲ್ಲ ಇರಲಿದೆ?
ದಿವಂಗತ ನಟ ಡಾ ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಾಣಕ್ಕೆ ಇಂದು ಶಂಕು ಸ್ಥಾಪನೆ ಕಾರ್ಯ ನಡೆದಿದೆ. ಸಿಎಂ ಯಡಿಯೂರಪ್ಪ ಅವರು ವಿಡಿಯೋ ಕಾನ್ಫೆರೆನ್ಸ್ ಮೂಲಕ ವಿಷ್ಣು ಸ್ಮಾರಕಕ್ಕೆ ಭೂಮಿ ಪೂಜೆ ನೆರವೇರಿಸಿದ್ದಾರೆ. ಈ ಮೂಲಕ ಕಳೆದ ಹತ್ತು ವರ್ಷದಿಂದ ಸ್ಮಾರಕ ವಿಚಾರದಲ್ಲಿ ಏಳುಬೀಳುಗಳನ್ನು ಕಂಡ ವಿಷ್ಣುವರ್ಧನ್ ಕುಟುಂಬ ಅಂತಿಮವಾಗಿ ಮೈಸೂರಿನಲ್ಲಿ ಸ್ಮಾರಕ ನಿರ್ಮಿಸುವಲ್ಲಿ ಮುನ್ನಡೆ ಸಾಧಿಸಿದೆ.
ಸ್ವತಃ ಭಾರತಿ ವಿಷ್ಣುವರ್ಧನ್ ಅವರೇ ಹೇಳಿದಂತೆ ಇದು ಬರಿ ಸ್ಮಾರಕವಲ್ಲ, ಗ್ರಂಥಾಲಯ, ಸ್ಟುಡಿಯೋ, ಕಲಿಕೆಯ ತರಬೇತಿ ಕೇಂದ್ರ ಹೀಗೆ ಹಲವು ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ಈ ಬಗ್ಗೆ ಬೆಂಗಳೂರು ಎಂ9 ಸ್ಡುಡಿಯೋ ಅವರು ನೀಲಿಚಿತ್ರ (blueprint) ಬಿಡುಗಡೆ ಮಾಡಿದ್ದಾರೆ. ವಿಷ್ಣು ಸ್ಮಾರಕ ಆವರಣದಲ್ಲಿ ಏನೆಲ್ಲ ಇರಲಿದೆ ಎಂಬ ಚಿತ್ರಗಳು ಗಮನ ಸೆಳೆಯುತ್ತಿದೆ. ಮುಂದೆ ಓದಿ...
20 ವರ್ಷದ ಹಿಂದೆ ವಿಷ್ಣುವರ್ಧನ್ ಮನೆಗೆ ಅಣ್ಣಾವ್ರು ಹೊರಟಿದ್ದಾಗ, ನಡೆದಿದ್ದೇನು!
5 ಎಕೆರೆ ಜಾಗದಲ್ಲಿ ವಿಷ್ಣು ಸ್ಮಾರಕ
ಮೈಸೂರಿನ ಹೊರ ವಲಯದ ಎಚ್.ಡಿ.ಕೋಟೆ ರಸ್ತೆಯ ಉದ್ಭೂರು ಗೇಟ್ ಬಳಿಯ ಹಾಲಾಳುವಿನಲ್ಲಿ 5.5 ಎಕರೆ ಜಾಗದಲ್ಲಿ ಸ್ಮಾರಕ ನಿರ್ಮಾಣವಾಗಲಿದೆ. ಒಟ್ಟು 11 ಕೋಟಿ ರೂಪಾಯಿ ಯೋಜನೆ ಇದಾಗಿದೆ.
ವಿಷ್ಣು ಪುತ್ಥಳಿಯೂ ಇರಲಿದೆ
ಎಂ9 ಸ್ಡುಡಿಯೋ ಅವರು ವಿಷ್ಣು ಸ್ಮಾರಕದ ವಿನ್ಯಾಸ ಮಾಡಿದ್ದು, ಆವರಣದಲ್ಲಿ ಏನೆಲ್ಲ ಇರಲಿದೆ ಎಂಬ ನೀಲಿಚಿತ್ರ ಪ್ರಸ್ತುತಪಡಿಸಿದ್ದಾರೆ. 2 ಎಕರೆಯಲ್ಲಿ ವಿಷ್ಣುವರ್ಧನ್ ಅವರ ಸ್ಮಾರಕ ತಲೆ ಎತ್ತಲಿದೆ. ಜೊತೆಗೆ 6 ಅಡಿ ಎತ್ತರದ ವಿಷ್ಣುವರ್ಧನ್ ಅವರ ಪುತ್ಥಳಿಯೂ ನಿರ್ಮಾಣವಾಗಲಿದೆ.
ಸ್ಮಾರಕ ಮತ್ತು ಗ್ಯಾಲರಿ
ಸ್ಮಾರಕ ಚಿತ್ರ ಮತ್ತು ಗ್ಯಾಲರಿಯನ್ನು 35.40 ಮೀಟರ್ ವೃತ್ತಾಕಾರದಲ್ಲಿ ನಿರ್ಮಿಸಲಾಗುತ್ತಿದ್ದು, ಗ್ಯಾಲರಿಯ ಮುಂಭಾಗದಲ್ಲಿ ನೀರಿನ ಚಿಲುಮೆಯನ್ನು ನಿರ್ಮಾಣ ಮಾಡಲಾಗುತ್ತಿದೆ. ನೀರಿನ ಚಿಲುಮೆಯ ಮುಂಭಾಗದಲ್ಲಿ ವಿಷ್ಣುವರ್ಧನ್ ಅವರ ಪ್ರತಿಮೆಯನ್ನು ಸ್ಥಾಪಿಸಲಾಗುತ್ತಿದೆ.
ಸಭಾಂಗಣ ಕಟ್ಟಡ
ಕಟ್ಟಡ ವಿನ್ಯಾಸ ನೋಡುವುದಾದರೆ
ತಳಮಹಡಿ - 457.70 ಚ.ಮೀ
ನೆಲಮಹಡಿ - 997.00 ಚ.ಮೀ
ಒಟ್ಟು ವಿಸ್ತೀರ್ಣ - 1454.70 ಚ.ಮೀ
ಸಭಾಂಗಣ ಕಟ್ಟಡಲ್ಲಿರುವ ಸೌಲಭ್ಯಗಳು
- ತಳಮಹಡಿಯಲ್ಲಿ ಸಂಭಾಂಗಣ, ಕಲಾವಿದರ ಕೊಠಡಿ ಮತ್ತು ಶೌಚಾಲಯ ಮಾತ್ರ ಇರುತ್ತದೆ.
-ನೆಲ ಮಹಡಿಯಲ್ಲಿ ಕಲಾವಿದರ ಕೊಠಡಿ ಮತ್ತು ಶೌಚಾಲಯ ಇರುತ್ತದೆ.
- ಲಾಬಿ
- 2 ತರಗತಿಗಳ ಕೊಠಡಿ
- ಡೈರೆಕ್ಟರ್ ಕ್ಯಾಬಿನ್
ಆಫೀಸ್ ಸ್ಟಾಫ್
- ಪುರುಷರ ಶೌಚಾಲಯ
-ಮಹಿಳಾ ಶೌಚಾಲಯ
Recommended Video
ಮ್ಯೂಸಿಯಂ ಇರಲಿದೆ
ಪುಣೆಯ ಫಿಲ್ಮ್ ಅಂಡ್ ಟೆಲಿವಿಷನ್ ಇನ್ಸಿಟಿಟ್ಯೂಟ್ ಆಫ್ ಇಂಡಿಯಾದ ಶಾಖೆ ಸಹ ಇಲ್ಲಿ ಆರಂಭವಾಗಲಿದ್ದು, ಇದರ ಮೂಲಕ ಅನೇಕ ಹೊಸ ಪ್ರತಿಭೆಗಳಿಗೆ ಅವಕಾಶ ಸಿಕ್ಕಂತಾಗುತ್ತದೆ. ಅಲ್ಲದೆ, ಇಲ್ಲಿ ಮ್ಯೂಸಿಯಂ ಸಹ ನಿರ್ಮಾಣಗೊಳ್ಳುವುದರಿಂದ ವಿಷ್ಣು ಅವರ ನೆನಪುಗಳು ಚಿತ್ರರಸಿಕರ ಕಣ್ಮನ ಸೆಳೆಯಲಿದೆ.