Don't Miss!
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Automobiles ಪ್ರಸಿದ್ಧ ಪುಣ್ಯಕ್ಷೇತ್ರ ಶೃಂಗೇರಿ ಶಾರದಾಂಬಾ ದರ್ಶನಕ್ಕೆ ತೆರಳಬೇಕೇ.. ಹಾಗಾದರೆ ಈ ಸ್ಟೋರಿ ನೋಡಿ
- Lifestyle ಹನುಮಂತನ ಪವಾಡ: ಈ ದೇವಾಲಯದಲ್ಲಿ ಹನುಮಾನ್ ಮೂರ್ತಿ ವರ್ಷದಿಂದ ವರ್ಷಕ್ಕೆ ಎತ್ತರ ಬೆಳೆಯುತ್ತಿದೆ!
- News ಮೀಸಲಾತಿ ಅಸ್ತ್ರ ಪ್ರಯೋಗಿಸಿದ ಮೋದಿ; ಮುಸ್ಲಿಂ ಸಮುದಾಯಕ್ಕೆ 4% ಮೀಸಲಾತಿ: ಸಿದ್ದರಾಮಯ್ಯ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Technology Qubo InstaView ವಿಡಿಯೋ ಡೋರ್ ಫೋನ್ ಲಾಂಚ್!..ಬೆಲೆ ಎಷ್ಟು, ಫೀಚರ್ಸ್ ಏನಿವೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಪ್ರೇಮ್ ಅನ್ನು ದೊಡ್ಡ ನಿರ್ದೇಶಕರಿಗೆ ಹೋಲಿಸಿದ್ದ ವಿಷ್ಣುವರ್ಧನ್
ವಿಷ್ಣುವರ್ಧನ್ ಹುಟ್ಟುಹಬ್ಬದಂದು ಹಲವು ನಟ-ನಟಿಯರು ಅವರ ಆಪ್ತೇಷ್ಟರು ವಿಷ್ಣುವರ್ಧನ್ ಅವರೊಟ್ಟಿಗೆ ಕಳೆದ ಮಧುರ ಕ್ಷಣಗಳನ್ನು ಮೆಲುಕು ಹಾಕುತ್ತಿದ್ದಾರೆ.
ವಿಷ್ಣುವರ್ಧನ್ ಅವರು ಹೊಸ ಪ್ರತಿಭೆಗಳನ್ನು ಪ್ರೋತ್ಸಾಹಿಸುವುದರಲ್ಲಿ, ಅವರಿಗೆ ಹುರುಪು ತುಂಬುವುದರಲ್ಲಿ ಪ್ರಮುಖರು. ಒಳ್ಳೆಯ ನಿರ್ದೇಶಕ, ನಟರನ್ನು ವೈಯಕ್ತಿಕವಾಗಿ ಅಭಿನಂದಿಸುತ್ತಿದ್ದರು ಅವರು.
'ಸೆಪ್ಟೆಂಬರ್ 18....ಇದು ನಮ್ಮ ಹಬ್ಬ': ಕಿಚ್ಚ ಸುದೀಪ್
ವಿಷ್ಣುವರ್ಧನ್ ಅವರಿಂದ ಹೊಗಳಿಸಿಕೊಂಡವರಲ್ಲಿ ನಿರ್ದೇಶಕ ಪ್ರೇಮ್ ಸಹ ಒಬ್ಬರು. ಇಂದು ವಿಷ್ಣುವರ್ಧನ್ ಹುಟ್ಟುಹಬ್ಬದ ದಿನ ವಿಷ್ಣು ಅಭಿಮಾನಿಗಳು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿರುವ ನಿರ್ದೇಶಕ ಪ್ರೇಮ್, ವಿಷ್ಣುವರ್ಧನ್ ಅವರೊಂದಿಗೆ ಕಳೆದ ಕೆಲವು ಸಿಹಿ ನೆನಪುಗಳನ್ನು ಹಂಚಿಕೊಂಡಿದ್ದಾರೆ.
ಪ್ರೇಮ್ ಅನ್ನು ಪುಟ್ಟಣ್ಣ ಕಣಗಾಲ್ ಗೆ ಹೋಲಿಸಿದ್ದ ವಿಷ್ಣು
ನಿರ್ದೇಶಕ ಪ್ರೇಮ್ ಅವರ ಸೂಪರ್ ಹಿಟ್ ಸಿನಿಮಾ 'ಜೋಗಿ' ಯನ್ನು ಬಹುವಾಗಿ ಮೆಚ್ಚಿಕೊಂಡಿದ್ದ ವಿಷ್ಣುವರ್ಧನ್, 'ಕನ್ನಡಕ್ಕೆ ಮತ್ತೊಬ್ಬ ಪುಟ್ಟಣ್ಣ ಕಣಗಾಲ್ ಸಿಕ್ಕರು' ಎಂದು ಪ್ರೇಮ್ ಅನ್ನು ಹೊಗಳಿದ್ದರಂತೆ. ಈ ಬಗ್ಗೆ ಅವರೇ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.
ಒಟ್ಟಿಗೆ ಸಿನಿಮಾ ಮಾಡುವ ಎಂದಿದ್ದರಂತೆ ವಿಷ್ಣು
ಅಷ್ಟೇ ಅಲ್ಲ, ಪ್ರೇಮ್ ಅವರನ್ನು ಮನೆಗೆ ಕರೆಸಿ, 'ಒಂದು ಕತೆ ಮಾಡು ಸಿನಿಮಾ ಮಾಡುವ' ಎಂದಿದ್ದರಂತೆ ವಿಷ್ಣುವರ್ಧನ್. ಅಂತೆಯೇ ಪ್ರೇಮ್ ಸಹ ಸ್ಕ್ರಿಪ್ಟ್ ಕೆಲಸದಲ್ಲಿ ನಿರತಾದರಂತೆ ಆದರೆ ಅನಿವಾರ್ಯ ಕಾರಣಗಳಿಂದ ಸಿನಿಮಾ ತಡವಾಗಿದೆ. ಕೊನೆಗೆ ವಿಷ್ಣು ಅವರೊಟ್ಟಿಗೆ ಸಿನಿಮಾ ಮಾಡಲು ಆಗಲೇ ಇಲ್ಲವೆಂದು ನೊಂದುಕೊಂಡರು ಪ್ರೇಮ್.
ವಿಷ್ಣುವರ್ಧನ್ ಹುಟ್ಟುಹಬ್ಬಕ್ಕೆ ಸಂಚಾರಿ ವಿಜಯ್ 'ದಾದಾ ನೆನಪು'
ರಕ್ಷಿತಾ ಗೆ ಸಲಹೆ ನೀಡಿದ್ದ ವಿಷ್ಣುವರ್ಧನ್
ಮತ್ತೊಂದು ಸ್ವಾರಸ್ಯಕರ ಘಟನೆ ನೆನಪಿಸಿಕೊಂಡ ಪ್ರೇಮ್, 'ರಕ್ಷಿತಾ ನಾನು ಮದುವೆಯಾದ ಹೊಸದರಲ್ಲಿ ವಿಷ್ಣುವರ್ಧನ್, ಅಂಬರೀಶ್, ರವಿಚಂದ್ರನ್ ಪ್ರೇಮ್ ಮನೆಗೆ ಬಂದಿದ್ದರು. ಆಗ ರಕ್ಷಿತಾರನ್ನು ಕರೆದು, ನಿನ್ನ ಗಂಡ ನಟ-ನಿರ್ದೇಶಕ. ಅವನು ಹೊರಗೆ ಹೆಚ್ಚು ಇರಬೇಕಾಗುತ್ತದೆ. ಅವನ ಬಗ್ಗೆ ಅನುಮಾನ ಪಡುಪೇಡ, ತುಸು ಫ್ರೀ ಬಿಡು' ಎಂದಿದ್ದರಂತೆ.
Recommended Video
ನೀವೂ ನಮ್ಮಂತೆಯೇ ಇರಬೇಕೆಂದು ಹಾರೈಕೆ
'ನಮ್ಮಗಳ ಸಂಸಾರವನ್ನು ನೋಡು, ನಾವೆಲ್ಲಾ ಎಷ್ಟು ಅನ್ಯೋತ್ಯತೆಯಿಂದ ಇದ್ದೇವೆ. ನೀವೂ ಸಹ ನಮ್ಮಂತೆಯೇ ಇರಬೇಕು' ಎಂದು ಹಾರೈಸಿದ್ದರಂತೆ ವಿಷ್ಣುವರ್ಧನ್. ಅವರ ಹಾರೈಕೆಯಿಂದ ಇಂದಿಗೂ ನಾವು ಅನ್ಯೋನ್ಯತೆಯಿಂದ ಇದ್ದೀವಿ ಎಂದರು ಪ್ರೇಮ್.