Don't Miss!
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರಾಜ್, ವಿಷ್ಣು, ಶಂಕ್ರಣ್ಣ ,ತೂಗುದೀಪ್ ಶ್ರೀನಿವಾಸ್ ಇಲ್ಲಿ ಎಲ್ಲರೂ ಒಂದೇ
ಕಲಾವಿದರುಗಳು ಎಂದಿಗೂ ಗಲಾಟೆ ಮಾಡಿಕೊಳ್ಳುವುದಿಲ್ಲ ಅದರಲ್ಲೂ ಹಿರಿಯ ಕಲಾವಿದರೆಲ್ಲರೂ ಸಾಕಷ್ಟು ವರ್ಷ ಒಟ್ಟಿಗೆ ಕೆಲಸ ಮಾಡಿದರೂ ಯಾವುದೇ ರೀತಿಯ ಗಲಾಟೆ ಮಾಡಿಕೊಳ್ಳದೆ ಅನ್ಯೂನ್ಯವಾಗಿದ್ದರು. ಈಗಲೂ ಇದ್ದಾರೆ ಎಂದರೆ ತಪ್ಪಾಗಲಾರದು. ಹೌದು ಕನ್ನಡ ಸಿನಿಮಾರಂಗದ ಹಿರಿಯ ನಟರಾದ ರಾಜ್ ಕುಮಾರ್, ವಿಷ್ಣುವರ್ಧನ್, ಶಂಕರ್ ನಾಗ್ ಹಾಗೂ ತೂಗುದೀಪ್ ಶ್ರೀನಿವಾಸ್ ಈ ನಾಲ್ಕು ಜನರು ಇಂದಿಗೂ ಒಂದಾಗಿದ್ದಾರೆ.
ಅದು ಹೇಗೆ ಅಂತ ಯೋಚನೆ ಮಾಡಬೇಡಿ ನಾವು ಹೇಳುತ್ತಿರುವುದು ಈ ನಾಲ್ಕು ನಾಯಕರು ಒಂದಾಗಿರುವುದು ಪುತ್ಥಳಿಯಲ್ಲಿ. ಹೌದು ಸದ್ಯ ಅಪಾರ ಅಭಿಮಾನಿ ಬಳಗವನ್ನ ಅಗಲಿರುವ ಈ ಹಿರಿಯ ಕಲಾವಿದರೆಲ್ಲರೂ ಒಂದೇ ಪುತ್ಥಳಿಯ ನಾಲ್ಕು ಮುಖಗಳಾಗಿದ್ದಾರೆ.
ತೂಗುದೀಪ ಶ್ರೀನಿವಾಸ್ ಹುಟ್ಟುಹಬ್ಬದ ಸಂಭ್ರಮ"ದಲ್ಲಿ ಅಭಿಮಾನಿಗಳು
ಮಹಾಲಕ್ಷ್ಮೀ ಲೇಔಟ್ ನಲ್ಲಿರುವ ಶ್ರೀಕಂಠೇಶ್ವರನಗರದ ಯುವಕರು ತಮ್ಮ ಸಂಘದ ಮೂಲಕ ಇಂಥದೊಂದು ಪುತ್ಥಳಿಯನ್ನ ಸ್ಥಾಪನೆ ಮಾಡಿದ್ದಾರೆ. ಒಂದೇ ಪುತ್ಥಳಿಯಲ್ಲಿ ನಾಲ್ಕು ಮುಖಗಳಿದ್ದು ಒಂದರಲ್ಲಿ ವಿಷ್ಣುವರ್ಧನ್, ಮತ್ತೊಂದರಲ್ಲಿ ಡಾ ರಾಜ್ ಕುಮಾರ್ ಮಿಕ್ಕ ಎರಡರಲ್ಲಿ ತೂಗುದೀಪ ಶ್ರೀನಿವಾಸ್ ಹಾಗೂ ಶಂಕರ್ ನಾಗ್ ಮುಖಗಳಿದೆ.
ಪ್ರತಿಯೊಬ್ಬರಿಗೂ ಅವರದ್ದೇ ಆದ ಆಸೆಗಳಿರುತ್ತೆ ಮತ್ತು ಆಯ್ಕೆಗಳು ಇರುತ್ತದೆ. ಅದರಂತೆ ನಾಲ್ಕು ಕಲಾವಿದರನ್ನೂ ಒಂದೇ ಪುತ್ಥಳಿಯಲ್ಲಿ ಸೇರಿಸಿರುವುದು ಆ ನಗರದ ಎಲ್ಲಾ ಜನರಿಗೂ ಸಂತಸ ತಂದಿದೆ. ಸುಮಾರು ಐದು ವರ್ಷದ ಹಿಂದೆಯೇ ಈ ಕೆಲಸ ಮಾಡಿರುವ ಇಲ್ಲಿನ ಯುವಕರು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಸ್ಟಾರ್ ವಾರ್ ಅಂತ ಪ್ರತಿ ನಿತ್ಯ ಫೇಸ್ ಬುಕ್ ನಲ್ಲಿ ಕಿತ್ತಾಡುವ ಜನರಿಗೆ ಶ್ರೀಕಂಠೇಶ್ವರನಗರದ ಜನರು ಮಾಡಿರುವ ಕೆಲಸ ಸ್ಪೂರ್ತಿ ಆಗಲಿದೆ.