twitter
    For Quick Alerts
    ALLOW NOTIFICATIONS  
    For Daily Alerts

    ಅರ್ಜುನ್ ಸರ್ಜಾ-ಶ್ರುತಿ ಕೇಸ್ ಗೆ ಟ್ವಿಸ್ಟ್: ಪೊಲೀಸರ ಮುಂದೆ 'ವಿಸ್ಮಯ' ನಿರ್ಮಾಪಕ ಹೇಳಿದ್ದೇನು.?

    |

    ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಸಂಚಲನ ಉಂಟು ಮಾಡಿದ್ದ #ಮೀಟೂ ಅಭಿಯಾನ ಸ್ಯಾಂಡಲ್ ವುಡ್ ನಲ್ಲಿ ಕೋರ್ಟ್ ಮೆಟ್ಟಿಲೇರಿದೆ. ''ವಿನಾಕಾರಣ ನಟಿ ಶ್ರುತಿ ಹರಿಹರನ್ ನನ್ನ ವಿರುದ್ಧ ಆರೋಪ ಮಾಡಿದ್ದಾರೆ'' ಎಂದು ನಟ ಅರ್ಜುನ್ ಸರ್ಜಾ ಕೋರ್ಟ್ ಮೊರೆ ಹೋಗಿದ್ದಾರೆ.

    ಇತ್ತ ಅರ್ಜುನ್ ಸರ್ಜಾ ವಿರುದ್ಧ ನಟಿ ಶ್ರುತಿ ಹರಿಹರನ್ ಪೊಲೀಸರಿಗೆ ದೂರು ನೀಡಿದ್ದಾರೆ. ಶ್ರುತಿ ನೀಡಿದ ದೂರಿನ ಅನ್ವಯ ಎಫ್.ಐ.ಆರ್ ದಾಖಲು ಮಾಡಿಕೊಂಡಿರುವ ಕಬ್ಬನ್ ಪಾರ್ಕ್ ಪೊಲೀಸರು ಸಾಕ್ಷಿಗಳ ವಿಚಾರಣೆ ನಡೆಸುತ್ತಿದ್ದಾರೆ.

    ಅದರಂತೆ ಇವತ್ತು ತಮ್ಮ ಹೇಳಿಕೆ ನೀಡಲು ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸ್ ಸ್ಟೇಷನ್ ಗೆ 'ವಿಸ್ಮಯ' ಚಿತ್ರದ ನಿರ್ಮಾಪಕ ಉಮೇಶ್ ಕುಮಾರ್ ಬಂದಿದ್ದರು.

    ತಮ್ಮ ಗಮನಕ್ಕೆ ಬಂದ ಹಾಗೆ, ಶೂಟಿಂಗ್ ಸೆಟ್ ನಲ್ಲಿ ಶ್ರುತಿ ಹರಿಹರನ್ ಹೇಳಿರುವ ಯಾವುದೇ ಘಟನೆ ನಡೆದಿಲ್ಲ ಎಂದು ನಿರ್ಮಾಪಕ ಉಮೇಶ್ ಕುಮಾರ್ ಪೊಲೀಸರ ಮುಂದೆ ಹೇಳಿಕೆ ಕೊಟ್ಟಿದ್ದಾರೆ. ಈ ಕುರಿತು ಮಾಧ್ಯಮಗಳಿಗೆ ಉಮೇಶ್ ಕುಮಾರ್ ಪ್ರತಿಕ್ರಿಯೆ ನೀಡಿರುವುದು ಹೀಗೆ -

    ಒಂಬತ್ತು ದಿನ ಶೂಟಿಂಗ್ ಗೆ ಬಂದಿದ್ದ ಶ್ರುತಿ

    ಒಂಬತ್ತು ದಿನ ಶೂಟಿಂಗ್ ಗೆ ಬಂದಿದ್ದ ಶ್ರುತಿ

    ''ಮೀಡಿಯಾದಲ್ಲಿ ಬಂದ ಮೇಲೆಯೇ ನಮಗೆ ವಿಷಯ ಗೊತ್ತಾಗಿದ್ದು. ಕಬ್ಬನ್ ಪಾರ್ಕ್ ಪೊಲೀಸರು ವಿಚಾರಣೆಗೆ ಕರೆದರು. ನಾವು ಬಂದು ನಮ್ಮ ಹೇಳಿಕೆಯನ್ನ ರಿಜಿಸ್ಟರ್ ಮಾಡಿದ್ದೇವೆ. ಒಂಬತ್ತು ದಿನ ಶ್ರುತಿ ಹರಿಹರನ್ ಶೂಟಿಂಗ್ ಗೆ ಬಂದಿದ್ದರು. ಎಂಟು ದಿನ ಶೂಟಿಂಗ್ ಇತ್ತು. ಇನ್ನೊಂದು ದಿನ ಪ್ಯಾಚ್ ವರ್ಕ್ ಮಾಡಿದ್ವಿ'' - ಉಮೇಶ್ ಕುಮಾರ್, 'ವಿಸ್ಮಯ' ಚಿತ್ರದ ನಿರ್ಮಾಪಕ

    #ಮೀಟೂ ಆರೋಪ: ಹೈಕೋರ್ಟ್ ಮೊರೆ ಹೋದ ಅರ್ಜುನ್ ಸರ್ಜಾ#ಮೀಟೂ ಆರೋಪ: ಹೈಕೋರ್ಟ್ ಮೊರೆ ಹೋದ ಅರ್ಜುನ್ ಸರ್ಜಾ

    ಇಲ್ಲೂ ಚೇತನ್ ಗಿದೆ ಲಿಂಕ್.!

    ಇಲ್ಲೂ ಚೇತನ್ ಗಿದೆ ಲಿಂಕ್.!

    ''ನಾವು ಎರಡು ಭಾಷೆಯಲ್ಲಿ ಈ ಚಿತ್ರವನ್ನ ಮಾಡಿದ್ವಿ. ತಮಿಳಿಗೆ ಒಂದು ವಿಲನ್, ಕನ್ನಡಕ್ಕೆ ಒಂದು ವಿಲನ್ ಅಂತ ಪ್ಲಾನ್ ಮಾಡಿದ್ವಿ. ಇಲ್ಲಿನ ಸಹಾಯಕ ನಿರ್ದೇಶಕರು ಕೆಲ ನಟರ ಹೆಸರನ್ನು ಸಜೆಸ್ಟ್ ಮಾಡಿದ್ದರು. ಆಗ ಚೇತನ್ ಅವರ ಹೆಸರೂ ಬಂದಿತ್ತು. ಚೇತನ್ ನ ಭೇಟಿ ಮಾಡಿ, ಕಥೆ ಹೇಳಿದ್ವಿ. ಕೊನೆಗೆ ನಾವು ಜೆ.ಕೆ ರನ್ನ ಸೆಲೆಕ್ಟ್ ಮಾಡಿದ್ವಿ. ಅದು ನಿರ್ದೇಶಕರ ಆಯ್ಕೆ'' - ಉಮೇಶ್ ಕುಮಾರ್, 'ವಿಸ್ಮಯ' ಚಿತ್ರದ ನಿರ್ಮಾಪಕ

    ಸರ್ಜಾ ವಿರುದ್ಧ ಇಷ್ಟು ದಿನ ಹೇಳಿದ್ದು ಒಂದೇ, ಈಗ ಹೇಳ್ತಿರೋದು ಐದು ಆರೋಪ.!ಸರ್ಜಾ ವಿರುದ್ಧ ಇಷ್ಟು ದಿನ ಹೇಳಿದ್ದು ಒಂದೇ, ಈಗ ಹೇಳ್ತಿರೋದು ಐದು ಆರೋಪ.!

    ಆ ತರಹ ಘಟನೆ ನಡೆದಿಲ್ಲ

    ಆ ತರಹ ಘಟನೆ ನಡೆದಿಲ್ಲ

    ''ಪ್ರೊಡಕ್ಷನ್ ಶುರುವಾಗಿದ್ದು ನವೆಂಬರ್ ನಲ್ಲಿ. ನಮ್ಮ ಗಮನಕ್ಕೆ ಬಂದ ಹಾಗೆ ಶ್ರುತಿ ಹೇಳಿದ ಘಟನೆಗಳು ನಡೆದಿಲ್ಲ. ಪ್ರೊಡ್ಯೂಸರ್ ಆಗಿ ಸೆಟ್ ನಲ್ಲಿ ನಾನಿದ್ದಾಗ, ಈ ತರಹ ಘಟನೆಗಳು ಯಾವುದೂ ನಡೆದಿಲ್ಲ'' ಎಂದಿದ್ದಾರೆ 'ವಿಸ್ಮಯ' ಚಿತ್ರದ ನಿರ್ಮಾಪಕ ಉಮೇಶ್ ಕುಮಾರ್.

    ಸರ್ಜಾ ವಿರುದ್ಧ ಆರು ಜನರನ್ನ ಸಾಕ್ಷಿಯನ್ನಾಗಿಸಿದ ಶ್ರುತಿ ಹರಿಹರನ್.!ಸರ್ಜಾ ವಿರುದ್ಧ ಆರು ಜನರನ್ನ ಸಾಕ್ಷಿಯನ್ನಾಗಿಸಿದ ಶ್ರುತಿ ಹರಿಹರನ್.!

    ಶ್ರುತಿ ಹರಿಹರನ್ ಗೆ ಕಂಟಕ ಆಗಬಹುದೇ.?

    ಶ್ರುತಿ ಹರಿಹರನ್ ಗೆ ಕಂಟಕ ಆಗಬಹುದೇ.?

    'ವಿಸ್ಮಯ' ಚಿತ್ರದ ನಿರ್ಮಾಪಕ ಹಾಗೂ ನಿರ್ದೇಶಕ ಅರ್ಜುನ್ ಸರ್ಜಾ ಪರವಾಗಿ ನಿಂತಿದ್ದಾರೆ. ಚಿತ್ರೀಕರಣದ ಸಮಯದಲ್ಲಿ ಅಸಭ್ಯ ವರ್ತನೆ ನಡೆದಿಲ್ಲ ಅಂತ ಹೇಳಿರುವುದರಿಂದ ಈ ಕೇಸ್ ಗೆ ಟ್ವಿಸ್ಟ್ ಸಿಕ್ಕಿದೆ. ಇದು ಶ್ರುತಿ ಹರಿಹರನ್ ಗೆ ಕಂಟಕ ಆಗಬಹುದೇ.?

    ಶ್ರುತಿ ಹರಿಹರನ್ ಗೆ ಪ್ರಶ್ನೆಗಳ ಬಾಣಗಳನ್ನು ತೂರಿದ ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯ.!ಶ್ರುತಿ ಹರಿಹರನ್ ಗೆ ಪ್ರಶ್ನೆಗಳ ಬಾಣಗಳನ್ನು ತೂರಿದ ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯ.!

    English summary
    Vismaya Producer Umesh Kumar register his statements with Cubbon Park Police, Bengaluru.
    Wednesday, October 31, 2018, 15:19
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X