Don't Miss!
- Sports RCB: 'ಗೋ ಗ್ರೀನ್' ಭಾಗವಾಗಿ 3 ಕೆರೆಗಳ ಅಭಿವೃದ್ಧಿಪಡಿಸಿದ ಆರ್ಸಿಬಿ
- Finance ನಾಳೆ ಬೆಂಗಳೂರಿನಲ್ಲಿ ಚಿಕನ್, ಮಟನ್ ಮಾರಾಟಕ್ಕೆ ನಿಷೇಧ
- News 5 ವರ್ಷಗಳಲ್ಲಿ ಕರ್ನಾಟಕ ಸಂಸದರ ಸಾಧನೆ ಏನು? ಅಧ್ಯಯನ ಹೇಳೋದೇನು?
- Technology ಆನ್ಲೈನ್ ಶಾಪಿಂಗ್ ಮಾಡಲು ಇಲ್ಲಿವೇ ನೋಡಿ ಬೆಸ್ಟ್ ವೆಬ್ಸೈಟ್ಗಳು!
- Automobiles Hyundai: ಹಳೆಯ ಹ್ಯುಂಡೈ ಕ್ರೆಟಾವನ್ನು ಮರೆತುಬಿಡಿ... ಹೊಸ ಕ್ರೆಟಾ ಈಗ ಮತ್ತಷ್ಟು ಪ್ರೀಮಿಯಂ SUV
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ವಿಶ್ವರೂಪಂಗೆ ಹಿನ್ನಡೆ ವರದನಾಯಕನಿಗೆ ಮುನ್ನಡೆ
ಕಮಲಹಾಸನ್ ಅಭಿನಯದ ವಿಶ್ವರೂಪಂ ಚಿತ್ರ ಬಿಡುಗಡೆಗೆ ಮದ್ರಾಸ್ ಉಚ್ಚ ನ್ಯಾಯಾಲಯ ಇಂದು (ಜ 28) ನೀಡಬೇಕಾಗಿದ್ದ ತೀರ್ಪನ್ನು ನಾಳೆಗೆ ಕಾಯ್ದಿರಿಸಿದೆ.
ಹೀಗಾಗಿ ಕಮಲ್ ಮಹತ್ವಾಕಾಂಕ್ಷೆಯ ಈ ಚಿತ್ರಕ್ಕೆ ಬಿಡುಗಡೆ ಭಾಗ್ಯ ಇನ್ನೂ ಕೂಡಿ ಬಂದಿಲ್ಲ. ಸದ್ಯಕ್ಕೆ ಸಿಕ್ಕಿರುವ ಮಾಹಿತಿಯ ಪ್ರಕಾರ ಇದರ ನೇರ ಲಾಭ ಮುಖ್ಯವಾಗಿ ವರದನಾಯಕನಿಗೆ ಚಿತ್ರಕ್ಕೆ ವಲಿಯುತ್ತಿದೆ.
ವರದನಾಯಕ ಚಿತ್ರಕ್ಕೆ ಭರ್ಜರಿ ಒಪನಿಂಗ್ ಸಿಕ್ಕಿದ್ದು ವಾರಾಂತ್ಯದ ಕಲೆಕ್ಷನ್ ಜೋರಾಗಿದೆ ಎನ್ನುವ ವರ್ತಮಾನ ನಮ್ಮ ಸಿನಿ ವರದಿಗಾರರು ನೀಡುತ್ತಿದ್ದಾರೆ.
ಚಿತ್ರಮಂದಿರದ ಮೂಲಗಳ ಪ್ರಕಾರ ವಿಶ್ವರೂಪಂ ಚಿತ್ರಕ್ಕೆ ಅಡ್ವಾನ್ಸ್ ಬುಕ್ಕಿಂಗ್ ಮಾಡಿದ ಅಭಿಮಾನಿಗಳು ಹೆಚ್ಚಿನವರು ನಮ್ಮವರೇ.
ಚಿತ್ರ ಬಿಡುಗಡೆ ರದ್ದಾದ ಹಿನ್ನಲೆಯಲ್ಲಿ ಅಭಿಮಾನಿಗಳ ನಂತರದ ಆಯ್ಕೆ ರೇಸ್ 2 ಅಥವಾ ವರದನಾಯಕ ಚಿತ್ರವಾಗಿತ್ತು. ರೇಸ್ 2 ಚಿತ್ರಕ್ಕೆ ಮಾಧ್ಯಮ, ಪತ್ರಿಕೆಗಳಿಂದ ನೆಗೆಟಿವ್ ವಿಮರ್ಶೆ ಬಂದಿತ್ತು, ವರದನಾಯಕ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು.
ಹೀಗಾಗಿ ವಿಶ್ವರೂಪಂ ಚಿತ್ರದ ಬಿಡುಗಡೆ ವಿಳಂಬದ ಲಾಭ ನೇರವಾಗಿ ವರದನಾಯಕ ಚಿತ್ರಕ್ಕಾಗಿದೆ ಎನ್ನುವುದು ಕೆಲ ಚಿತ್ರಮಂದಿರದ ಮಾಲೀಕರ ಅಂಬೋಣ.