Don't Miss!
- News ಬಿವೈ ವಿಜಯೇಂದ್ರ ಭೇಟಿ ಬಳಿಕ ಸಂಸದೆ ಸುಮಲತಾ ಹೇಳಿದ್ದೇನು?
- Sports RCB VS KKR: ಟಾಸ್ ಗೆದ್ದ ಕೆಕೆಆರ್ ಫೀಲ್ಡೀಂಗ್ ಆಯ್ಕೆ: ಆರ್ಸಿಬಿ ತಂಡದಲ್ಲಿ ಇಲ್ಲ ಬದಲಾವಣೆ
- Lifestyle ಏಪ್ರಿಲ್ 1ರಿಂದ 800 ಔಷಧಗಳು ದುಬಾರಿ..! ಎಷ್ಟು ಬೆಲೆ ಹೆಚ್ಚಳ.?
- Automobiles ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಬಹುನಿರೀಕ್ಷಿತ ಹೊಸ ಸ್ಕೋಡಾ ಸೂಪರ್ಬ್ ಕಾರು
- Technology WhatsApp: ವಾಟ್ಸಾಪ್ನಲ್ಲಿ ಈ ಕರೆಗಳನ್ನು ಸ್ವೀಕರಿಸದಂತೆ ಕೇಂದ್ರದಿಂದ ಎಚ್ಚರಿಕೆ! ಯಾಕೆ ಗೊತ್ತಾ?
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ವಿವೇಕ್ ಒಬೆರಾಯ್ ಗೆ ಜೀವ ಬೆದರಿಕೆ : ಪೊಲೀಸ್ ರಕ್ಷಣೆಯಲ್ಲಿ ನಟ
ಬಾಲಿವುಡ್ ನಟ ವಿವೇಕ್ ಒಬೆರಾಯ್ ಇತ್ತೀಚಿಗಷ್ಟೆ ಹೊಸದೊಂದು ವಿವಾದ ಮಾಡಿಕೊಂಡು ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದರು. ಇದರ ನಡುವೆ ಮತ್ತೊಂದು ಮತ್ತೊಂದು ಕಷ್ಟದಲ್ಲಿ ಸಿಲುಕಿಕೊಂಡಿದ್ದಾರೆ. ವಿವೇಕ್ ಒಬೆರಾಯ್ ಗೆ ಜೀವ ಬೆದರಿಕೆ ಕೆರಗಳು ಬರುತ್ತಿವೆಯಂತೆ.
ಸದ್ಯ ವಿವೇಕ್ ಪೊಲೀಸ್ ರಕ್ಷಣೆ ಕೇಳಿದ್ದು ಮುಂಬೈ ಪೊಲೀಸರ ಭದ್ರತೆಯಲ್ಲಿ ವಾಸಿಸುವಂತಾಗಿದೆ. ಅಷ್ಟಕ್ಕು ಜೀವ ಬೆದರಿಕೆ ಕರೆ ಬರುತ್ತಿರುವ ಕಾರಣ ವಿವೇಕ್ ಇತ್ತೀಚಿಗೆ ನಟಿ ಐಶ್ವರ್ಯ ರೈ ವಿರುದ್ಧ ಅವಿವೇಕ ಟ್ವೀಟ್ ಮಾಡಿ ವಿವಾದದಲ್ಲಿ ಸಿಲುಕಿಕೊಂಡಿದ್ದರು.
ಐಶ್ವರ್ಯ ರೈ ಕೆಣಕಿ ತಪ್ಪು ಮಾಡಿದ್ದ ವಿವೇಕ್ ಒಬೆರಾಯ್ ಕ್ಷಮೆಯಾಚನೆ
ಚುನಾವಣೆ ಫಲಿತಾಂಶಕ್ಕೆ ಹೋಲಿಸಿ ವಿವೇಕ್ ಒಬೆರಾಯ್ ಸೇರಿದಂತೆ ಐಶ್ವರ್ಯ ರೈ ಮತ್ತು ಸಲ್ಮಾನ್ ಫೋಟೋವನ್ನು ಟ್ರೋಲ್ ಮಾಡಲಾಗಿತ್ತು. ಆ ಫೋಟೋವನ್ನು ವಿವೇಕ್ ಒಬೆರಾಯ್ ಟ್ವಿಟ್ಟರ್ ನಲ್ಲಿ ಶೇರ್ ಮಾಡುವ ಮೂಲಕ ನೆಟ್ಟಿಗರ ಮತ್ತು ಬಾಲಿವುಡ್ ಸೆಲೆಬ್ರಿಟಿಗಳ ಆಕ್ರೋಶಕ್ಕೆ ಗುರಿಯಾಗಿದ್ದರು.
ಅಷ್ಟೆಯಲ್ಲ ಕ್ಷಮೆಯಾಚಿಸದಿದ್ದರೆ ವಿವೇಕ್ ವಿರುದ್ಧ ಕಾನೂನು ಕ್ರಮ ಎದುರಿಸ ಬೇಕಾಗುತ್ತೆ. ಅಲ್ಲದೆ ಟ್ವಿಟ್ಟರ್ ಖಾತೆಯಲ್ಲೆ ಡಿಲಿಟ್ ಮಾಡಿಸಬೇಕಾಗುತ್ತೆ ಎಂದು ಮಹಿಳಾ ಆಯೋಗ ಎಚ್ಚರಿಕೆ ನೀಡಿತ್ತು.
ಐಶ್ವರ್ಯ ರೈ ಫೋಟೋ ಶೇರ್ ಮಾಡಿದ ವಿವೇಕ್ ವಿರುದ್ಧ ನೆಟ್ಟಿಗರ ಆಕ್ರೋಶ
ಈ ಟ್ವೀಟ್ ನಲ್ಲಿ ತಪ್ಪೇನಿದೆ ಕ್ಷಮೆ ಕೇಳುವ ಮಾತೆ ಇಲ್ಲ ಎಂದು ಖಡಕ್ ಆಗಿಯೆ ಹೇಳುವ ಮೂಲಕ, ಟ್ವೀಟ್ ಮಾಡಿರುವುದನ್ನು ಸಮರ್ಥಿಸಿಕೊಂಡಿದ್ದರು ವಿವೇಕ್ ಒಬೆರಾಯ್. ಆ ನಂತರ ಎಲ್ಲಾ ಕಡೆಯಿಂದ ಭಾರಿ ವಿವಾದ ವ್ಯಕ್ತವಾದ ಹಿನ್ನಲೆ ಟ್ವೀಟ್ ಡಿಲಿಟ್ ಮಾಡಿ ಕ್ಷಮೆಯಾಚಿಸಿದ್ದರು.