Don't Miss!
- News Mukhtar Ansari: ಗ್ಯಾಂಗ್ಸ್ಟರ್-ರಾಜಕಾರಣಿ ಮುಖ್ತಾರ್ ಅನ್ಸಾರಿ ಸಾವು
- Lifestyle ಏಪ್ರಿಲ್ನಲ್ಲಿ 14 ದಿನ ರಜೆ, ಏಪ್ರಿಲ್ 1ಕ್ಕೆ ಬ್ಯಾಂಕ್ಗಳಿಗೆ ರಜೆ ಇರಲು ಕಾರಣವೇನು?
- Sports ರೋಹಿತ್ vs ಹಾರ್ದಿಕ್: ಸತತ ಸೋಲಿನ ನಡುವೆಯೇ ಮುಂಬೈ ಇಂಡಿಯನ್ಸ್ ಇಬ್ಭಾಗ!?
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬಸ್ ದುರಂತ: ಪವರ್ ಸ್ಟಾರ್ ಸಂಘದ ಅಧ್ಯಕ್ಷ ಮರಣ
ಆಂಧ್ರಪ್ರದೇಶ ಮೆಹಬೂಬ್ ನಗರ ಜಿಲ್ಲೆಯ ಪಲ್ಲಂ ಗ್ರಾಮದ ಬಳಿ ಬುಧವಾರ ಬೆಳಗ್ಗೆ ಸಂಭವಿಸಿದ ದಾರುಣ ಘಟನೆ ಎಲ್ಲರ ಮನ ಕಲುಕಿದೆ. ಜಬ್ಬಾರ್ ಟ್ರಾವೆಲ್ಸ್ ಸಂಸ್ಥೆಗೆ ಸೇರಿರುವ ವೋಲ್ವೋ ಬಸ್ಸಿನಲ್ಲಿ 51 ಮಂದಿ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಡ್ರೈವರ್, ಕ್ಲೀನರ್ ಮತ್ತು ನಾಲ್ಕಾರು ಪ್ರಯಾಣಿಕರು ಮಾತ್ರ ಹೊತ್ತಿ ಉರಿಯುತ್ತಿದ್ದ ಬಸ್ಸಿನಿಂದ ಪಾರಾಗಿದ್ದಾರೆ. ತೀವ್ರವಾಗಿ ಗಾಯಗೊಂಡವರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ದುರಂತದಲ್ಲಿ ತೆಲುಗಿನ ಪವರ್ ಸ್ಟಾರ್ ಅಭಿಮಾನಿ ಸಂಘಗಳ ಅಧ್ಯಕ್ಷ ಹಾಗೂ ಆತನ ಸೋದರಿ ಕೂಡಾ ಸಾವನ್ನಪ್ಪಿದ್ದು, ಮೃತರ ಮರಣಕ್ಕೆ ಪವನ್ ಕಲ್ಯಾಣ್ ಹಾಗೂ ಚಿರಂಜೀವಿ ಕುಟುಂಬದವರು ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನ ಕಲಾಸಿಪಾಳ್ಯದ ಕೋಟೆ ನಿವಾಸಿಗಳಾದ ವೆಂಕಟೇಶ್ ಹಾಗೂ ಅವರ ಸೋದರಿ ಅನಿತಾ ಅವರು ಖಾಸಗಿ ಕಾರ್ಯನಿಮಿತ್ತ ಬೆಂಗಳೂರಿನಿಂದ ಹೈದರಾಬಾದಿಗೆ ತೆರಳುತ್ತಿದ್ದಾಗ ಈ ದುರಂತ ಸಂಭವಿಸಿದೆ.
ಮೆಗಾ
ಫ್ಯಾಮಿಲಿ
ಪರವಾಗಿ
ಪಿಆರ್ಒ
ಎಸ್ಕೆಎನ್
ಅವರು
ತಮ್ಮ
ಟ್ವಿಟ್ಟರ್
ಪುಟದಲ್ಲಿ
ಕರ್ನಾಟಕದ
ಮೆಗಾ
ಫ್ಯಾನ್ಸ್
ಆಸೋಸಿಯೇಷನ್
ಅಧ್ಯಕ್ಷ
ಕೊಟ್ಟೆ
ವೆಂಕಟೇಶ್
ಯಾದವ್
ಹಾಗೂ
ಅವರ
ಸೋದರಿ
ಸಾವಿಗೆ
ಸಂತಾಪ
ವ್ಯಕ್ತಪಡಿಸಿದ್ದಾರೆ.
"Almost 40 passengers burnt alive :( terrible, Overtake & over speed caused the accident. These Luxury buses R drive lyk there is no 2morrow." ಎಂದು ಟ್ವೀಟ್ ಮಾಡಿದ್ದಾರೆ.
ಜತೆಗೆ ಪವನ್ ಕಲ್ಯಾಣ್ ಅವರ ಜತೆ ವೆಂಕಟೇಶ್ ಇರುವ ಚಿತ್ರವನ್ನು ಪೋಸ್ಟ್ ಮಾಡಿ ಕರ್ನಾಟಕ ಮೆಗಾ ಫ್ಯಾನ್ಸ್ ಸಂಘದ ಅಧ್ಯಕ್ಷ ವೆಂಕಟೇಶ್ ಅವರು ವೋಲ್ವೊ ಬಸ್ ದುರಂತದಲ್ಲಿ ಸಾವನ್ನಪ್ಪಿರುವ ಸುದ್ದಿ ಕೇಳಿ ಪವರ್ ಸ್ಟಾರ್ ಅವರು ತೀವ್ರ ವೇದನೆ ವ್ಯಕ್ತಪಡಿಸಿದ್ದಾರೆ. ವೆಂಕಟೇಶ್ vry vry sad :( RIP ಎಂದು ಪಿ ಆರ್ ಒ ಸಂದೇಶ ಹಾಕಿದ್ದಾರೆ.
ಕರ್ನಾಟಕದ ಮೆಗಾ ಫ್ಯಾನ್ಸ್ ಅಸೋಸಿಯೇಷನ್ ಅಧ್ಯಕ್ಷ ವೆಂಕಟೇಶ್ ಸಾವಿನ ಸುದ್ದಿಯನ್ನು ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರ ಅಧಿಕೃತ ಫೇಸ್ ಬುಕ್ ಪುಟದಲ್ಲಿ ದೃಢಪಡಿಸಲಾಗಿದೆ.
"Venkatesh #RIP Kotte Venkatesh yadav garu(Akila karnataka Chiranjeevi Fans President)&His sister who died in Today's bus accident at MBNagar..Hes a Nice Gentleman&Great mega fan- Miss U anna." ಎಂದು ಬರೆಯಲಾಗಿದ್ದು, ಮೆಗಾ ಫ್ಯಾಮಿಲಿ ಸಂತಾಪ ಸಂದೇಶವನ್ನು ಹಾಕಲಾಗಿದ್ದು, ವೆಂಕಟೇಶ್ ಅವರ ಗೆಳೆಯರು ಬಂಧು ಮಿತ್ರರು ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.