Don't Miss!
- Sports IPL 2024: ಸೋತು ಸುಣ್ಣವಾದರೂ ಪಾರ್ಟಿ ಮಾಡಿದ ಆರ್ಸಿಬಿ ಪ್ಲೇಯರ್ಸ್; ಕೊಹ್ಲಿ ವಿರುದ್ಧ ರೊಚ್ಚಿಗೆದ್ದ ಫ್ಯಾನ್ಸ್
- News ನೇಹಾ ಹತ್ಯೆ: ಸಾವಿನ ಮನೆಯಲ್ಲಿ ರಾಜಕಾರಣ ಸರಿಯಲ್ಲ, 90 ದಿನದಲ್ಲಿ ನ್ಯಾಯ ಸಿಗಲಿದೆ: ಸುರ್ಜೇವಾಲ
- Automobiles Suzuki Access Electric: ಸುಜುಕಿ ಆಕ್ಸೆಸ್ ಎಲೆಕ್ಟ್ರಿಕ್ ಸ್ಕೂಟರ್ ಈ ವರ್ಷ ಬಿಡುಗಡೆ ಸಾಧ್ಯತೆ!
- Lifestyle 5 ಸೆಕೆಂಡ್ನಲ್ಲಿ ಈ ಚಿತ್ರದಲ್ಲಿರುವ ಮೇಕೆ ಮಾಲೀಕನ ಹುಡುಕಿ..! ಎಲ್ಲಿದ್ದಾನೆ ಗೊತ್ತಾ?
- Technology Bengaluru: ಆ ಆಪ್ ಇನ್ಸ್ಟಾಲ್ ಮಾಡಿದ್ದೇ ತಡ 5.2 ಕೋಟಿ ರೂ. ಮಾಯ.. ನೀವು ಎಚ್ಚರ
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಪ್ರಧಾನಿ ಮೋದಿ ಅಮೃತ ಹಸ್ತದಲ್ಲಿ ರಿಲೀಸ್ ಆದ ಟ್ರೈಲರ್ ನೀವೂ ನೋಡಿ...
ರಾಷ್ಟ್ರಧ್ವಜ, ರಾಷ್ಟ್ರಪ್ರೇಮದ ಕುರಿತು ಸಂದೇಶ ಸಾರುವ '22 ಜುಲೈ 1947' ಎಂಬ ಕನ್ನಡ ಚಿತ್ರದ ಟ್ರೈಲರ್ ಲಾಂಚ್ ಮಾಡಿರುವ ನಮ್ಮ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು, ಚಿತ್ರತಂಡದ ವಿಭಿನ್ನ ಪ್ರಯತ್ನಕ್ಕೆ ಭೇಷ್ ಎಂದಿರುವ ವಿಚಾರವನ್ನು ನಾವೇ ನಿಮಗೆ ತಿಳಿಸಿದ್ವಿ.
ಹುಬ್ಬಳ್ಳಿಯ ಸತ್ಯಪ್ಪ ಎಂಬ ವ್ಯಕ್ತಿಯೊಬ್ಬರ ನಿಜ ಜೀವನ ಕಥೆಯಾಧರಿತ ಈ ಚಿತ್ರ ಬೆಳಗಾಂ ಇಂಡಿಯನ್ ಎಕ್ಸ್ ಪ್ರೆಸ್ ಎಡಿಟರ್ ಸರಾಜೂ ಕಾಟ್ಕರ್ ಅವರ ಕಾದಂಬರಿಯನ್ನು ಆಧರಿಸಿದೆ.[ಸ್ಯಾಂಡಲ್ ವುಡ್ ಹೊಸ ಇತಿಹಾಸ: ಕನ್ನಡ ಟ್ರೈಲರ್ ಲಾಂಚ್ ಮಾಡಿದ ಪ್ರಧಾನಿ ಮೋದಿ]
'ಇಂಗಳೆ ಮಾರ್ಗ' ಚಿತ್ರದ ಖ್ಯಾತಿಯ ನಿರ್ದೇಶಕ ವಿಶಾಲ್ ರಾಜ್ ಅವರು ಆಕ್ಷನ್-ಕಟ್ ಹೇಳಿರುವ '22 ಜುಲೈ 1947' ಚಿತ್ರದ ಟ್ರೈಲರ್ ಈಗಾಗಲೇ ಬಿಡುಗಡೆ ಆಗಿದ್ದು, ಸಖತ್ ರೆಸ್ಪಾನ್ಸ್ ಗಿಟ್ಟಿಸಿಕೊಂಡಿದೆ.
ಸಂಪೂರ್ಣ ದೇಶ ಪ್ರೇಮವನ್ನು ಆಧರಿಸಿರುವ ಈ ಚಿತ್ರದ ಟ್ರೈಲರ್ ನೋಡುತ್ತಿದ್ದರೆ, ರೋಮಾಂಚನವಾಗುತ್ತಿದ್ದು, ದೇಶಪ್ರೇಮ ಉಕ್ಕಿ ಹರಿಯುತ್ತಿದೆ. ಈ ಚಿತ್ರದಲ್ಲಿ ಸತ್ಯಪ್ಪ ಅವರ ಪಾತ್ರವನ್ನು ನಟ ಸುಚೇಂದ್ರ ಪ್ರಸಾದ್ ಅವರು ಮಾಡಿದ್ದು, ನಟಿ ಸುಧಾರಾಣಿ ಅವರು ಸತ್ಯಪ್ಪನ ಹೆಂಡತಿ ಪಾತ್ರದಲ್ಲಿ ಮಿಂಚಿದ್ದಾರೆ.[ಪ್ರಧಾನಿ ಮೋದಿ ಜೊತೆಗೆ ರಿಕ್ಕಿ ಕೇಜ್ ದಂಪತಿ ಸೆಲ್ಫಿ ಚಿತ್ರ]
'ಬೆಳಗಾಂನ ಡಿಸಿ ಕಛೇರಿಯಲ್ಲಿ ಸತ್ಯಪ್ಪ ಎನ್ನುವವರು ಬೆಳಗ್ಗೆ ಸೂರ್ಯೋದಯ ಆಗೋ ಮುಂಚೆ ಧ್ವಜ ಹಾರಿಸಿ, ಸಂಜೆ ಸೂರ್ಯಾಸ್ತ ಆಗೋ ಸಮಯದಲ್ಲಿ ಧ್ವಜ ಇಳಿಸ್ತಾ ಇದ್ರು'. ಆ ವ್ಯಕ್ತಿಯ ರಾಷ್ಟ್ರಪ್ರೇಮವನ್ನು ಇಟ್ಟುಕೊಂಡು ಈ ಸಿನಿಮಾ ಮಾಡಲಾಗಿದೆ. ವಿಶೇಷ ಚಿತ್ರದ ಅದ್ಭುತ ಟ್ರೈಲರ್ ಇಲ್ಲಿದೆ ನೋಡಿ...
'22 ಜುಲೈ 1947' ಎಂಬ ಅಪರೂಪದ ಚಿತ್ರಕ್ಕೆ ನಂಜೇಗೌಡ ಬಂಡವಾಳ ಹೂಡಿದ್ದು, ಇದೇ ಮೊದಲ ಬಾರಿಗೆ ಸಂಗೀತ ಕಟ್ಟಿ ಅವರು ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಅಂದಹಾಗೆ ಈ ಸಿನಿಮಾ ಆಗಸ್ಟ್ 15, ಸ್ವಾತಂತ್ರ ದಿನಾಚರಣೆಯಂದೇ ತೆರೆಗೆ ಬಂದ್ರೆ ತುಂಬಾ ಚೆನ್ನಾಗಿರುತ್ತದೆ ಅನ್ನೋದು ನಮ್ಮ ಅಭಿಪ್ರಾಯ ನೀವೇನಂತೀರಾ?.